ಇತಿಹಾಸದಿಂದ ಪಾಠ ಕಲಿಯದಿದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್ ನುಡಿದರು.
ಮೈಸೂರು ಜಿಲ್ಲೆಯ ಸಾಲಿಗ್ರಾಮದ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ರಾಜ್ಯಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಚಾರಿತ್ರಿಕ ದಾಖಲೆಗಳಲ್ಲಿ ಸಾಲಿಗ್ರಾಮದ ಇತಿಹಾಸ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಸಮೋನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಭಾರತೀಯ ರಾಜರುಗಳ ಅನೈಕ್ಯಮತ್ಯದ ಫಲವಾಗಿ ಭಾರತಕ್ಕೆ ವ್ಯಾಪಾರಕ್ಕಾಗಿ, ಧರ್ಮ ಪ್ರಚಾರಕ್ಕಾಗಿ ಬಂದ ವಿದೇಶೀಯರು ಭಾರತೀಯರ ಸ್ವತಂತ್ರ್ಯ ಕಿತ್ತುಕೊಂಡರು. ನಮ್ಮ ದೇಶದ ಅಮೂಲ್ಯ ಸಂಪತ್ತನ್ನು ತಮ್ಮ ದೇಶಕ್ಕೆ ಅಕ್ರಮವಾಗಿ ಸಾಗಿಸಿದರು. ಭಾರತೀಯರನ್ನು ತಮ್ಮ ಗುಲಾಮರಾಗಿ ಮಾಡಿಕೊಂಡರು. ಭಾರತೀಯರು ಸ್ವಾತಂತ್ರ್ಯ ಪಡೆಯಲು ಸುಮಾರು ಒಂದು ಶತಮಾನಗಳ ಕಾಲ ಹೋರಾಟ ನಡೆಸಬೇಕಾಯಿತು.
ಇಂದಿನ ಯುವ ಜನತೆ ರಾಷ್ಟ್ರದ ಏಕತೆ ಸಮಗ್ರತೆ ಉಳಿಸಲು ಪ್ರತಿಜ್ಞೆ ಕ್ಯೆಗೊಳ್ಳಬೇಕು ಎಂದು ಕರೆ ನೀಡಿದರು.
ಸಾಲಿಗ್ರಾಮ ತಾಲೂಕು ಐದು ಸಾವಿರಕ್ಕೂ ಹೆಚ್ಚು ವರ್ಷಗಳ ಪ್ರಾಚೀನ ಇತಿಹಾಸ ಹೊಂದಿದೆ. ತಮಿಳುನಾಡಿನ ಚೋಳ ಅರಸರ ಹಿಂಸೆ ತಾಳಲಾರದೆ ಕರ್ನಾಟಕದತ್ತ ವಲಸೆ ಬಂದ ಶ್ರೀ ರಾಮಾನುಜಾಚಾರ್ಯರು ತಮ್ಮ ಬದುಕಿನ ಹೆಚ್ಚು ದಿನಗಳನ್ನು ಸಾಲಿಗ್ರಾಮದಲ್ಲಿ ಕಳೆದರು. ಸಾಲಿಗ್ರಾಮ ಯೋಗ ನರಸಿಂಹ ದೇವರನ್ನು ಪೂಜಿಸಿ, ಹಲವು ಜನರ ಅನಾರೋಗ್ಯವನ್ನು ನಿವಾರಿಸಿದರು. ಅದೇ ರೀತಿ ಚಿಕ್ಕಹನಸೋಗೆ ಪ್ರಾಚೀನಕಾಲದಲ್ಲಿ ಚೆಂಗರಸರ ರಾಜಧಾನಿಯಾಗಿತ್ತು. ಮೂಲತಃ ಜೈನ ಧರ್ಮಕ್ಕೆ ಸೇರಿದ್ದ ಚೆಂಗಾರಸರು ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಅರವತ್ತು ಜೈನ ಬಸದಿಗಳನ್ನು ನಿರ್ಮಿಸಿದರು. ಅವುಗಳಲ್ಲಿ ಚಿಕ್ಕ ಹನಸೋಗೆ ಗ್ರಾಮದಲ್ಲಿ ದೊರೆ ವೀರ ರಾಜೇಂದ್ರ ನಿರ್ಮಿಸಿದ ತ್ರಿಕೂಟಾಚಲ ಬಸದಿ ಇತಿಹಾಸ ಪ್ರಸಿದ್ಧವಾದುದು. ಚುಂಚನಕಟ್ಟೆ ಶ್ರೀ ರಾಮನು ತನ್ನ ವನವಾಸ ಕಾಲದಲ್ಲಿ ಸಹೋದರ ಲಕ್ಷ್ಮಣ ಹಾಗೂ ಪೆತ್ನಿ ಸೀತೆ ಇವರೊಡನೆ ಬಂದು ತಂಗಿದ್ದ ತಾಣ. ಸೀತೆ ತನು ಸ್ನಾನ ಮಾಡಲು ನೀರು ಇಲ್ಲವೆಂದು ಮೈದ ಲಕ್ಶ್ಮಣ ನಿಗೆ ತಿಳಿಸಿದಾಗ ಲಕ್ಷ್ಮಣ ತನ್ನ ಬಾಣದಿಂದ ಬಂದೆಯನ್ನು ಒಡೆದು ನೀರು ದೊರಕಿಸಿದ ಇತಿಹಾಸ ಇಲ್ಲಿದೆ. ಇದನ್ನು ಈಗಲೂ ಧನುಷ್ಕೋಟಿ ಎಂದೇ ಕರೆಯುತ್ತಾರೆ ಎಂದು ವಿವರಿಸಿದರು. ಸಾಲಿಗ್ರಾಮ ತಾಲೂಕಿನ ಐತಿಹಾಸಿಕ ಕ್ಷೇತ್ರಗಳಾದ ಜಪದ ಕಟ್ಟೆ, ದೇವಿತಂದ್ರೆ, ಹೊಸೂರು ರಾಮಲಿಂಗೇಶ್ವರ ಕ್ಷೇತ್ರ, ಮಿರ್ಲೆ ಮೊದಲಾದ ಸ್ಥಳಗಳ ಪ್ರಾಮುಖ್ಯತೆಯನ್ನು ಅವರು ವಿವರಿಸಿದರು.
ತಮ್ಮರಿನಲ್ಲಿರುವ ಪ್ರಾಚೀನಾ ಸ್ಮಾರಕಗಳನ್ನು ರಕ್ಷಿಸಲು ಯುವಜನತೆ ಕಾರ್ಯಪ್ರವೃತ್ತರಗಬೇಕು. ಅದು ದೇವಾಲಯ ಇರಲಿ, ಮಸೀದಿ, ಚರ್ಚು, ಬಸದಿಗಳಾಗಲಿ ಅವು ಶಿಥಿಲವಸ್ಥೆ ತಲುಪಿದ್ದಾರೆ ಅಂತವುಗಳ ಬಗ್ಗೆ ಪತ್ರಿಕೆಗಳಿಗೆ, ಜನಪ್ರತಿನಿದಿಗಳಿಗೆ, ಪ್ರಾಚ್ಯವಷ್ಟು ಇಲಾಖೆಗೆ ಪತ್ರ ಬರೆಯುವ ಮೂಲಕ ಅವುಗಳ ರಕ್ಷಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದ ಭೇರ್ಯ ರಾಮಕುಮಾರ್ ಅವರು ತಮ್ಮ ಹುಟ್ಟೂರು ಭೇರ್ಯ ಗ್ರಾಮದ ಪ್ರಾಚೀನ ಚನ್ನಕೇಶವ ದೇವಾಲಯ ಉಳಿಸಲು ತಾವು ಸುಮಾರು ಇಪ್ಪತ್ತು ವರ್ಷಗಳ ಕಾಲ ನಡೆಸಿದ ಪತ್ರ ಚಳುವಳಿಯ ಬಗ್ಗೆ ವಿವರಿಸಿದರು. ಇದೀಗ ದೇವಾಲಯ ಸಂಪೂರ್ಣ ದುರಸ್ಥಿಯಾಗಿದೆ. ತಮ್ಮ ಪತ್ರ ಚಳುವಳಿಯ ಹೋರಾಟಕ್ಕೆ ಫಲ ಸಿಕ್ಕಿದೆ. ಇದು ನನ್ನ ಜೀವಮಾನದ ಸಾಧನೆ ಎಂದವರು ವಿವರಿಸಿದರು.
ರಂಗ ಕುಣಿತ, ವೀರ ಮಕ್ಕಳ ಕುಣಿತ, ವೀರಭದ್ರ ಕುಣಿತ ಸಾಲಿಗ್ರಾಮ ತಾಲೂಕಿನ ಸಾಂಸ್ಕೃತಿಕ ಕೊಡುಗೆಗಳು. ಪ್ರಾಚೀನ ಚಂದೋನು ಶಾಸನದ ಕರ್ತು ಜಯ ಕೀರ್ತಿ, ನಡೆದಾಡುವ ವಿಶ್ವಾಕೋಶ ಎಂದೇ ಹೆಸರಾಗಿದ್ದ ಡಾ. ಎಚ್. ಎಸ್. ಕೆ, ಪಂಪ ಪ್ರಶಸ್ತಿ ಪುರಸ್ಕೃತರಾದ ಡಾ. ಸಿ. ಪಿ. ಕೆ., ಕಾ. ತಾ. ಚಿಕ್ಕಣ್ಣ, ಡಾ. ಎಸ್. ಪಿ. ಯೋಗಣ್ಣ, ತಾಂತ್ರಿಕ ವಿದ್ವಾಂಸರದ ಡಾ. ಸೂರಪ್ಪ ಈ ತಾಲೂಕಿನ ಮಹಾನ್ ಸಾಧಕರು ಎಂದು ಡಾ. ಭೇರ್ಯ ರಾಮಕುಮಾರ್ ತಾಲೂಕಿನ ಪ್ರಮುಖ ಬೆಳೆಗಳದ ಅಡಕೆ, ಕಬ್ಬು, ಭತ್ತ, ಹೊಗೆಸೊಪ್ಪು, ಟೊಮೊಟೊ ಬೆಳೆಗಳನ್ನು ಉದ್ಯಮಗಳಲ್ಲಿ ವೈಜ್ಞಾನಿಕವಾಗಿ ಬಳಸಿ ಹೆಚ್ಚು ಲಾಭ ಪಡೆಯುವ ಪ್ರಯತ್ನ ನಡೆಯಬೇಕು ಎಂದು ಕರೆ ನೀಡಿದರು.
ಪ್ರಿನ್ಸಿಪಾಲರಾದ ಡಾ. ಹಂಸವೇಣಿ, ಉಪನ್ಯಾಸಕರಾದ ಎಂ. ಸುಂದರ ರಾಜು,ಶ್ರೀನಿವಾಸ್ ಎಂ, ಎಚ್. ಎಸ್. ಮಧು, ಎಂ. ಎಂ. ರಾಜಶೇಖರ್, ಡಾ. ಬಿ. ಚೇತನ್, ಎಚ್. ಎಸ್. ಶೇಖರ್, ಡಾ. ಎಸ್. ಸುವರ್ಣ, ಡಾ. ಎಚ್. ಟಿ. ಮಹೇಶ್, ಮಂಜುನಾಥ್, ಡಾ. ಗಾಯತ್ರಮ್ಮ, ಎ. ಎಸ್. ರಾಜೇಶ್, ಕೆ. ವಿ. ರಘು, ಡಾ. ಸುಮನಾ, ಸುರೇಶ್ ಛಲವಾದಿ, ಎ. ಎಚ್. ಯೋಗೇಶ್, ಕೆ. ಎನ್. ಧರ್ಮಕುಮಾರ್, ಟಿ. ಪಿ. ಸುಶ್ಮಿತಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಭೇರ್ಯ ರಾಮಕುಮಾರ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯ್ತು.