ಶ್ರೀ ವೆಂಕಟೇಶ್ವರ ಅರ್ಬನ್ ಕೋ.ಅಪ್ ಸೊಸೈಟಿ ಉದ್ಘಾಟನೆ

Must Read

‘ಸಂಘ, ಸಂಸ್ಥೆಗಳಲ್ಲಿ ಸಹಕಾರ, ವಿಶ್ವಾಸ ಇದ್ದರೆ ಅಭಿವೃದ್ಧಿ ಇರುತ್ತದೆ’

ಮೂಡಲಗಿ: ‘ಸಂಘ, ಸಂಸ್ಥೆಗಳಲ್ಲಿ ಸಹಕಾರ ಮತ್ತು ಪರಸ್ಪರ ವಿಶ್ವಾಸ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಇರುತ್ತದೆ’ ಎಂದು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಹೇಳಿದರು.

ಇಲ್ಲಿಯ ನೂತನ ಶ್ರೀ ವೆಂಕಟೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ಸಂಸ್ಥೆಗಳು ಜನರ ಆರ್ಥಿಕ ಸುಧಾರಣೆ ಜೊತೆಗೆ ಸಂಸ್ಥೆಯು ಬೆಳೆಯಬೇಕು ಎಂದರು.

ರಾಘವೇಂದ್ರ ಆಚಾರ್ಯ ಮಾತನಾಡಿ, ‘ಸಹಕಾರ ಸಂಸ್ಥೆಗಳಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದಲ್ಲಿ ಖಂಡಿತವಾಗಿ ಪ್ರಗತಿಯಾಗುತ್ತವೆ. ಸಹಕಾರ ಸಂಸ್ಥೆಗಳು ತಾವು ಬೆಳೆಯುವ ಜೊತೆಗೆ ಸಮಾಜದ ಬೆಳೆವಣಿಗೆಯನ್ನು ಬಯಸಬೇಕು ಎಂದರು.

ಶ್ರೀ ವೆಂಕಟೇಶ್ವರ ಸೊಸೈಟಿಯ ಆಡಳಿತ ಮಂಡಳಿಯು ಉತ್ತಮ ಸಂಘಟನೆಯಾಗಿದ್ದು, ಸೊಸೈಟಿಗೆ ಉತ್ತಮವಾದ ಭವಿಷ್ಯವಿದೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸಾಮಾಜಿಕ ಕಾರ್ಯಕರ್ತ ಬಿ.ಜಿ. ಗಡಾದ, ಶಂಕರ ಸೋನವಾಲಕರ, ಪಿಎಸ್‍ಐ ಹಾಲಪ್ಪ ಬಾಲದಂಡಿ, ಆರ್.ಪಿ. ಸೋನವಾಲಕರ, ಮುತ್ತಪ್ಪ ಈರಪ್ಪನ್ನವರ, ಸಂತೋಷ ಸೋನವಾಲಕರ, ಎಸ್.ಆರ್. ಸೋನವಾಲಕರ, ಸುಭಾಷ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಬಾಬು ಸೋನವಾಲಕರ, ರಮೇಶ ಪ್ಯಾಟಿಗೌಡರ, ವಿಜಯಕುಮಾರ ಸೋನವಾಲಕರ, ಬಸವರಾಜ ಪಾಟೀಲ, ಬಿ.ಜಿ. ನಿಡಗುಂದಿ, ಶಿವಲಿಂಗಪ್ಪ ಗೋಕಾಕ, ಎನ್.ಟಿ. ಪೀರೋಜಿ, ಶ್ರೀಧರ ಉಡುಪಿ, ಮಲ್ಲಪ್ಪ ನೇಮಗೌಡರ, ಜಯಾನಂದ ಪಾಟೀಲ, ಬಿ.ಎಚ್. ಸೋನವಾಲಕರ, ಶಿವಲಿಂಗಪ್ಪ ಗಾಣಿಗೇರ, ಆರ್.ಟಿ. ಗಾಣಿಗೇರ, ವಿಲಾಸ ನಾಶಿ, ತಿಪ್ಪಣ್ಣ ಕುರುಬಗಟ್ಟಿ, ಮಲ್ಲು ಢವಳೇಶ್ವರ, ಪುಲಕೇಶ ಸೋನವಲಕರ, ವೆಂಕಟೇಶ ಸೋನವಾಲರ, ಡಾ. ಎಸ್.ಎಸ್. ಪಾಟೀಲ, ಡಾ. ಪ್ರಕಾಶ ನಿಡಗುಂದಿ, ಮಹಾದೇವ ಶೆಕ್ಕಿ, ಕೆ.ಬಿ. ಪಾಟೀಲ, ಶಂಕರ ತಾಂವಶಿ, ಚನ್ನಪ್ಪ ಅಥಣಿ ಭಾಗವಹಿಸಿದ್ದರು.

ಸೊಸೈಟಿಯ ಅಧ್ಯಕ್ಷ ಸಂದೀಪ ಸೋನವಾಲಕರ, ಉಪಾಧ್ಯಕ್ಷ ಬಾಲಶೇಖರ ಬಂದಿ, ನಿರ್ದೇಶಕರಾದ ಕಲ್ಲಪ್ಪ ಲಂಕೆಪ್ಪನ್ನವರ, ಶ್ರೀಶೈಲ್ ಲೋಕನ್ನವರ, ಸದಾಶಿವ ಸೋನವಾಲಕರ, ರಾಮು ಝಂಡೇಕುರಬರ, ವೆಂಕಟೇಶ ಸೋನವಾಲಕರ, ಸುಪ್ರೀತ ಸೋನವಾಲಕರ, ಮುತ್ತಪ್ಪ ಬಿರನಾಳ, ಸಂಪತ ಗಾಣಿಗಾ, ಪಾಂಡು ಬುದ್ನಿ, ಜಾಕೋಬ ಮೂಡಲಗಿ ಇದ್ದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group