Homeಸುದ್ದಿಗಳುರಾಷ್ಟ್ರೀಯ ಆಯುಷ್ ಮಿಷನ್ ಗೆ ಅನುದಾನ ಹೆಚ್ಚಳ ; ಸಂಸದ ಕಡಾಡಿ ಮಾಹಿತಿ

ರಾಷ್ಟ್ರೀಯ ಆಯುಷ್ ಮಿಷನ್ ಗೆ ಅನುದಾನ ಹೆಚ್ಚಳ ; ಸಂಸದ ಕಡಾಡಿ ಮಾಹಿತಿ

ಮೂಡಲಗಿ: ರಾಷ್ಟ್ರೀಯ ಆಯುಷ್ ಮಿಷನ್ ಕೇಂದ್ರ ಪ್ರಾಯೋಜಿತ ಯೋಜನೆಯಡಿಯಲ್ಲಿ, 2014-15ರಲ್ಲಿ ರೂ.78.32 ಕೋಟಿಗಳ ಅನುದಾನ ಮೀಸಲಿಡಲಾಗಿತ್ತು, ಇದನ್ನು 2022-23ರಲ್ಲಿ ರೂ.800.00 ಕೋಟಿಗೆ ಹೆಚ್ಚಿಸಲಾಗಿದೆ ಹಾಗೂ 2022-23ರ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ 1714.086 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ ಎಂದು ಕೇಂದ್ರ ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನೋವಾಲ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ನವದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯಸಭೆಯ ಚಳಿಗಾಲ ಅಧಿವೇಶನದಲ್ಲಿ ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯ ಅನುಷ್ಠಾನ ಹಾಗೂ ಆಯುಷ್ ಕಾಲೇಜುಗಳ ಹೆಚ್ಚಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ದೇಶದಲ್ಲಿ  2013-14 ರಲ್ಲಿ 312 ಆಯುಷ್ ಕಾಲೇಜುಗಳು ಇದ್ದವು. ಪ್ರಸ್ತುತ 2023-24 ರಲ್ಲಿ 615 ಆಯುಷ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ 10 ವರ್ಷಗಳಲ್ಲಿ 303 ಆಯುಷ್ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಇವುಗಳಲ್ಲಿ 541 ಆಯುರ್ವೇದ ಕಾಲೇಜ, 17 ಸಿದ್ಧ ಕಾಲೇಜ 57 ಯುನಾನಿ ಕಾಲೇಜುಗಳ ಕಾರ್ಯನಿರ್ವಹಿಸುತ್ತಿವೆ ಎಂದರು.

ಆಯುಷ್ ವ್ಯವಸ್ಥೆಗಳ ಒಟ್ಟಾರೆ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ರಾಜ್ಯ ವಾರ್ಷಿಕ ಕ್ರಿಯಾ ಯೋಜನೆಗಳಲ್ಲಿ  ಸ್ವೀಕರಿಸಿದ ಪ್ರಸ್ತಾವನೆಗಳ ಪ್ರಕಾರ ಅವರಿಗೆ ಹಣಕಾಸಿನ ನೆರವು ನೀಡುವ ಮೂಲಕ ದೇಶಾದ್ಯಂತ ರಾಷ್ಟ್ರೀಯ  ಆಯುಷ್ ಮಿಷನ್ ಯೋಜನೆಯನ್ನು ಅನುಷ್ಠಾನಗೋಳಿಸುತ್ತಿದೆ.

ಅಸ್ತಿತ್ವದಲ್ಲಿರುವ ಆಯುಷ್ ಔಷಧಾಲಯಗಳು ಮತ್ತು ಆರೋಗ್ಯ ಉಪ ಕೇಂದ್ರಗಳನ್ನು ನವೀಕರಿಸುವ ಮೂಲಕ ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಕಾರ್ಯಾಚರಣೆಯಲ್ಲಿರುತ್ತವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಹೋಮಿಯೋಪತಿ ಸೇರಿದಂತೆ ಆಯುಷ್ ಸೌಲಭ್ಯಗಳನ್ನು ನೀಡಲಾಗಿದೆ. 10/30/50 ಹಾಸಿಗೆಗಳ ಸಮಗ್ರ ಆಯುಷ್ ಆಸ್ಪತ್ರೆಗಳನ್ನು ಸ್ಥಾಪಿಸುವುದು. ಆಯುಷ್ ಆಸ್ಪತ್ರೆಗಳಿಗೆ ಅಗತ್ಯ ಔಷಧಗಳ ಪೂರೈಕೆ. ಸರ್ಕಾರಿ ವಲಯದಲ್ಲಿ ಆಯುಷ್ ಬೋಧನಾ ಸಂಸ್ಥೆಗಳ ಲಭ್ಯತೆ ಅಸಮರ್ಪಕವಾಗಿರುವ ರಾಜ್ಯಗಳಲ್ಲಿ ಹೊಸ ಆಯುಷ್ ಕಾಲೇಜುಗಳ ಸ್ಥಾಪನೆ, ಆಯುಷ್ ಪದವಿಪೂರ್ವ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ. ಆಯುಷ್ ಸ್ನಾತಕೋತ್ತರ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ/ಪಿಜಿ/ಫಾರ್ಮಸಿ/ಪ್ಯಾರಾ-ಮೆಡಿಕಲ್ ಕೋರ್ಸಗಳಲ್ಲಿ ಸೇರಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದರು.

RELATED ARTICLES

Most Popular

error: Content is protected !!
Join WhatsApp Group