Homeಸುದ್ದಿಗಳು೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ ಕೂಟವು -೨೦೨೪-೨೫  ಇದೇ  ೧೪ ಮತ್ತು ೧೫ ಅಕ್ಟೋಬರ್- ೨೦೨೪ ರಂದು ನಡೆಯಿತು.

ಈ ಅಥ್ಲೆಟಿಕ್ಸ ಕ್ರೀಡಾ ಕೂಟದಲ್ಲಿ ಕಿತ್ತೂರು ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡರು ಹಾಗೂ ಮಹಾವಿದ್ಯಾಲಯವು ಸಮಗ್ರ ವಿರಾಗ್ರಣಿ ದ್ವಿತೀಯ (ರನ್ನರ್ ಅಪ್) ಮತ್ತು ವಿದ್ಯಾರ್ಥಿನಿಯರ ಸಮಗ್ರ ವಿರಾಗ್ರಣಿ ದ್ವಿತೀಯ (ರನ್ನರ್ ಅಪ್) ಆಗಿ ಹೊರಹೊಮ್ಮಿತು.

ಕಿತ್ತೂರು ರಾಣಿ ಚನ್ನಮ್ಮಾ ತೋಟಗಾರಿಕಾ ಮಹಾವಿದ್ಯಾಲಯ, ಅರಭಾವಿಯ ಡೀನ್‌ರವರಾದ ಡಾ. ಎಮ್. ಜಿ. ಕೆರುಟಗಿ ರವರು ಅಥ್ಲೆಟಿಕ್ಸ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ತಂಡದ ವ್ಯವಸ್ಥಾಪಕರು ಮತ್ತು ತರಬೇತುದಾರರು ಆದ ಡಾ. ಎಸ್.ಜಿ. ಪ್ರವೀಣಕುಮಾರ ಮತ್ತು ಡಾ. ನವೀನ ಪುಟ್ಟಸ್ವಾಮಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

 

RELATED ARTICLES

Most Popular

error: Content is protected !!
Join WhatsApp Group