ಸವದತ್ತಿ: ಸಹೃದಯ ಸಾಹಿತ್ಯ ಪ್ರತಿಷ್ಠಾನವು 2023 ರಲ್ಲಿ ಪ್ರಕಟವಾದ ಅತ್ಯುತ್ತಮ ಕವನ ಹಾಗೂ ಗಜಲ್ ಸಂಕಲನಗಳಿಗೆ ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ.
ಕಾವ್ಯ ಪ್ರಶಸ್ತಿಯು ರೂ. 5 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, 2023 ರ ಜನವರಿಯಿಂದ ಡಿಸೆಂಬರ್ ವರೆಗೆ ಪ್ರಕಟವಾದ ತಮ್ಮ ಕವನ ಹಾಗೂ ಗಜಲ್ ಸಂಕಲನಗಳ ಮೂರು ಪ್ರತಿಗಳನ್ನು ಮಾರ್ಚ್ 10ರೊಳಗಾಗಿ ಕಳುಹಿಸಬೇಕೆಂದು ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.
ಆಸಕ್ತ ಲೇಖಕರು ತಮ್ಮ ಕೃತಿಗಳನ್ನು ನಾಗೇಶ್ ಜೆ. ನಾಯಕ ಅಧ್ಯಕ್ಷರು, ಸಹೃದಯ ಸಾಹಿತ್ಯ ಪ್ರತಿಷ್ಠಾನ (ರಿ) ‘ಅವ್ವ’ ಶಿವಬಸವ ನಗರ, ರಾಮಾಪೂರ ಸೈಟ್, ಸವದತ್ತಿ-591126 ಬೆಳಗಾವಿ ಜಿಲ್ಲೆ. ಮೊ. 9900817716 ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಪ್ರತಿಷ್ಠಾನದ ಸಂಚಾಲಕರಾದ ಸಿದ್ಧಪ್ಪ ಗರಗದ (9844986342) ಅವರನ್ನು ಸಂಪರ್ಕಿಸಬಹುದು.