ಸಿಂದಗಿ: ಭಾರತದ ಪ್ರಜಾಪ್ರಭುತ್ವ ಬುನಾದಿಯು ಸಂವಿಧಾನವಾಗಿದೆ. ಸಂವಿಧಾನ ಪ್ರತಿಯೊಬ್ಬ ಬಾರತೀಯರಿಗೆ ಸ್ವತಂತ್ರವಾಗಿ ಬದುಕಲು ಕಲಿಸುತ್ತದೆ ಪ್ರತಿಯೊಬ್ಬ ಬಾರತೀಯನಿಗೆ ಮಾನವೀಯತೆಯ ಬೆಲೆಯನ್ನು ಕೊಡುತ್ತದೆ. ನಾವೆಲ್ಲರೂ ಭಾರತೀಯರು ಸಂವಿಧಾನವನ್ನು ಓದಿ ತಿಳಿದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿ. ಸಿಂತಿಯಾ ಡಿಮೆಲ್ಲೊ ಹೇಳಿದರು.
ಪಟ್ಟಣದ ಸಂಗಮ ಸಂಸ್ಥೆ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಸಂವಿಧಾನ ಓದು ಎಂಬ ಶಿರ್ಷಿಕೆಯಿಡಿಯಲ್ಲಿ ಭಾರತದ ಸಂವಿಧಾನ ಪ್ರಸ್ತಾವನೆಯನ್ನು ಕಂಠಪಾಠ ಮಾಡಿ ಕ್ರಿಯಾತ್ಮಕವಾಗಿ ಪ್ರಸ್ತುತ ಪಡಿಸುವ ಸ್ಪರ್ಧೆಯನ್ನು ಆಯೋಜಿಸಿ ಮಾತನಾಡಿ, ಪ್ರತಿಯೊಬ್ಬರಲ್ಲಿ ಒಂದಿಲ್ಲ ಒಂದು ಪ್ರತಿಭೆಗಳು ಇದ್ದೇ ಇರುತ್ತವೆ ಅವುಗಳನ್ನು ಹೊರರಹಾಕಲು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇಲ್ಲಿ ಗೆಲ್ಲುವುದು ಮುಖ್ಯವಲ್ಲ ಬದಲಾಗಿ ಭಾಗವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಸಂವಿಧಾನದ ಮೇಲೆ ನಂಬಿಕೆ ಇಟ್ಟವರು ಯಾವುದೇ ರೀತಿಯ ಭಯಪಡಬೇಕಾದ ಅಗತ್ಯವಿಲ್ಲ ಏಕೆಂದರೆ ಸಂವಿಧಾನಕ್ಕೆ ಬಡವ ಮತ್ತು ಶ್ರೀಮಂತ ಎಂಬ ಭೇದಭಾವವಿಲ್ಲ. ಸಂವಿಧಾನ ಬಡವರಿಗೆ ಅವರ ಹಕ್ಕುಗಳನ್ನು ನೀಡಿ ಘನತೆ ಹಾಗೂ ಗೌರವದಿಂದ ಬದುಕಲು ಕಲಿಸುತ್ತದೆ. ಸಂವಿಧಾನ ಬಡವರ ಸಂವಿಧಾನ. ಸಂವಿಧಾನ ಜನ ಸಾಮಾನ್ಯರದಾಗಿದೆ. ಈ ಸ್ಪರ್ಧೆಯಲ್ಲಿ ಅನೇಕ ಮಕ್ಕಳು ಸರ್ಕಾರಿ ಶಾಲೆಗಳಿಂದ ಭಾಗವಹಿಸಿದ್ದು ಸಂತೋಷಪಡುವ ವಿಷಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉತ್ತರ ಕರ್ನಾಟಕ ಸಂಘಟನೆ ಕಾರ್ಯದರ್ಶಿ ಮಹಮ್ಮದ ಪಟೇಲ ಬಿರಾದಾರ ಮಾತನಾಡಿ, ಈ ದೇಶದಲ್ಲಿ ಚಹಾ ಮಾಡುದ ವ್ಯಕ್ತಿ ಈ ದೇಶದ ಪ್ರಧಾನಿ ಆಗುತ್ತಾರೆ ಎಂದರೆ, ಈ ದೇಶದಲ್ಲಿ ಮಹಿಳೆ ಪ್ರಧಾನಿ ಆಗುತ್ತಾರೆ ಎಂದರೆ ದೇಶಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ ಕೊಟ್ಟಂತಹ ಕೊಡುಗೆ ಅದು ಸಂವಿಧಾನ ಎಂದು ಬಣ್ಣಿಸಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕಿ ಫಾ. ಟಿಯೋಲ್ ಮಚದೊ ಮಾತನಾಡಿ, ಹಿಂದೂಗಳಿಗೆ ಭಗವದ್ಗೀತೆ, ಮುಸ್ಲಿಂರಿಗೆ ಕುರಾನ್, ಕೈಸ್ತರಿಗೆ ಬೈಬಲ್ ಗ್ರಂಥಗಳು ಇದೆ. ಆದರೆ ಇವೆಲ್ಲಕ್ಕಿಂತ ನಮ್ಮಗೆ ಭಾರತೀಯರಿಗೆ ಸಂವಿಧಾನ ಬಹಳ ಮುಖ್ಯ ಗ್ರಂಥ. ಇದನ್ನು ನಾವೆಲ್ಲರೊ ಗೌರವಿಸೋಣ. ಕೋವಿಡ್ ನಮಗೆ ಒಳ್ಳೆಯ ಪಾಠ ಕಲಿಸಿದೆ ಅದೇನೆಂದರೆ ತಂತ್ರಜ್ಞಾನವನ್ನು ನಮಗೆ ಗೊತ್ತುಪಡಿಸದೆ, ಕುಟುಂಬಗಳು ಒಗ್ಗಟ್ಟಿನಿಂದ ಬದುಕಲು, ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯಲು ನಾವು ಕಲಿತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಥಮ ಬಹುಮಾನ ವಿನೂತ ಚಿದಾನಂದ ಹಿರೇಮಠ, ದ್ವಿತೀಯ ಸಿದ್ದಮ್ಮ ಶಿವಲಿಂಗಪ್ಪ ಬುಳ್ಳಾ, ತೃತೀಯ ಸಾನಿಯಾ ಬಾಗವಾನ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೂಟಗಿ ಇವರು ಪಡೆದುಕೊಂಡರು. ಸಂವಿಧಾನ ಓದು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಸಂಗಮ ಸಂಸ್ಥೆ ನಿರ್ದೇಶಕರಾದ ಫಾ. ಅಲ್ವಿನ್ ಡಿಸೋಜ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಸಂಗಮ ಸಂಸ್ಥೆ ಕಾರ್ಯಕರ್ತ ರಾಜೀವ ಕುರಿಮನಿ ನಿರೂಪಿಸಿದರು. ತೇಜಸ್ವಿನಿ ಹಳ್ಳದಕೇರಿ ಸ್ವಾಗತಿಸಿದರು. ಕಲಿಕಾ ಕೇಂದ್ರದ ಶಿಕ್ಷಕ ಸುರೇಶ ಬೈರವಾಡಗಿ ಅಂತರಗಂಗಿ ವಂದಿಸಿದರು.