ಜಲ ಜೀವನ ಮಿಶನ್ ಯೋಜನೆಗೆ ಶಾಸಕ ಮನಗೂಳಿ ಚಾಲನೆ

Must Read

ಸಿಂದಗಿ: ಮತಕ್ಷೇತ್ರದ ಹೂವಿನಹಳ್ಳಿ, ಕೋರಹಳ್ಳಿ, ಮದರಿ, ಅಲಹಳ್ಳಿ  ಗ್ರಾಮದಲ್ಲಿ ಜಲ ಜೀವನ ಮಿಶನ್ ಯೋಜನೆಯಡಿಯಲ್ಲಿ ಮನೆ ಮನೆಗೆ ನಳ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಶಾಸಕ ಅಶೋಕ  ಮನಗೂಳಿ ಯವರು ಚಾಲನೆ ನೀಡಿದರು.

ನಂತರ ಮಾತನಾಡಿ, ಹೂವಿನಹಳ್ಳಿ ಗ್ರಾಮದಲ್ಲಿ 87.00 ಲಕ್ಷ ರೂ. ಕೋರಹಳ್ಳಿ ಗ್ರಾಮದಲ್ಲಿ 1.13 ಕೋಟಿ ರೂ. ಮದರಿ ಗ್ರಾಮದಲ್ಲಿ 85.00 ಲಕ್ಷ ರೂ. ಅಲಹಳ್ಳಿ ಗ್ರಾಮದಲ್ಲಿ 87.00 ಲಕ್ಷ ರೂಗಳ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಗುತ್ತಿಗೆದಾರರು ಜನರಿಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ಕೈಕೊಳ್ಳಬೇಕು ಹಾಗೆ ಜನರು ಕೂಡಾ ಈ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡು ಗುಣಮಟ್ಟದ ಕೆಲಸ ತೆಗೆದುಕೊಳ್ಳುವಂತೆ ಕರೆ ನೀಡಿದರು.

ಇದೆ ಸಂದರ್ಭದಲ್ಲಿ  ಗುತ್ತಿಗೆದಾರರಾದ ಎಸ್ ಎಸ್ ಬಿರಾದಾರ, ಎ ಎಮ್ ಶಿವಣಗಿ, ಮುಖಂಡರಾದ ಪ್ರಕಾಶ ಗೌಡ ಪಾಟೀಲ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋರಹಳ್ಳಿ, ಸದಸ್ಯರಾದ ಮಾಂತಸ್ವಾಮಿ ಹಿರೇಮಠ ಸದಸ್ಯರು ಗ್ರಾಮ ಪಂಚಾಯತ, ಶ್ರೀಶೈಲ ಪಾಟೀಲ, ಭೀಮು ಅಗಸಿಮನಿ  ಪುಟ್ಟು ನಾಯ್ಕೊಡಿ , ಮಂಜುನಾಥ ಪಾಟೀಲ,  ಅಣ್ಣಾರಾಯ ಬಿರಾದಾರ, ರಾಚಪ್ಪ ಬಿರಾದಾರ, ಶಿವಶರಣ ಬಿರಾದಾರ, ಉಲ್ಲಾಸ ಹೊಸಮನಿ,ಸಿದ್ದರಾಮ ಸಾತಲಗಾಂವ, ನಿಂಗನಗೌಡ ಬಿರಾದಾರ, ಅಣ್ಣಪ್ಪ ಬಿರಾದಾರ, ಹಾಗೂ ಮುಖಂಡರಾದ ಅಪ್ಪುಗೌಡ ಪಾಟೀಲ, ಬಸನಗೌಡ ಪಾಟೀಲ, ಶರಣು ಸಿಂಧೆ, ಅಮಲಣ್ಣ ದೊಡಮನಿ, ಮೈಬೂಬ ನದಾಫ, ಮಾಳೂ ಪೂಜಾರಿ, ಸದಾಶಿವ ಪಾಟೀಲ, ಸಂಗು ಪೂಜಾರಿ, ಮಲ್ಲಪ್ಪ ಬಿರಾದಾರ, ರುದ್ರುಗೌಡ ಶಾಬಾದಿ, ಪ್ರಭುಲಿಂಗ ಶಾಬಾದಿ, ದಾದಾಗೌಡ ಪಾಟೀಲ, ರವಿ ಅಲಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group