Homeಸುದ್ದಿಗಳುಜ.30 ಸರ್ವೋದಯ ದಿನದ ಅಂಗವಾಗಿ ಏರ್ಪಡಿಸಿದ್ದ ಗಾಂಧೀ ಲೇಖನ ಸ್ಪರ್ಧೆ ಫಲಿತಾಂಶ ಪ್ರಕಟ

ಜ.30 ಸರ್ವೋದಯ ದಿನದ ಅಂಗವಾಗಿ ಏರ್ಪಡಿಸಿದ್ದ ಗಾಂಧೀ ಲೇಖನ ಸ್ಪರ್ಧೆ ಫಲಿತಾಂಶ ಪ್ರಕಟ

ಜ.30 ಸರ್ವೋದಯ ದಿನದ ಅಂಗವಾಗಿ ಗಾಂಧೀ ಶಾಂತಿ ಪ್ರತಿಷ್ಠಾನ ಮತ್ತು ಅಮರ ಬಾಪು ಚಿಂತನ ಸಹಯೋಗಯಲ್ಲಿ ನಡೆದ ‘ಅಂದಿಗೂ ಇಂದಿಗೂ ಗಾಂಧೀಜಿ ವಿಚಾರಧಾರೆಗಳು ಪ್ರಸ್ತುತ’ ಪ್ರಬಂಧ ಹಾಗೂ ‘ಗಾಂಧಿಗೆ ಒಂದು ಪತ್ರ’ ಈ ಎರಡು ಕನ್ನಡ ಲೇಖನ ಸ್ಪರ್ಧೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದ ಎಲ್ಲೆಡೆಯಿಂದ ಅಧಿಕ ಯುವಜನರು ಪಾಲ್ಗೊಂಡಿರುತ್ತಾರೆ.

15 ರಿಂದ 30 ವರ್ಷ ವಯೋಮಿತಿಯ ಯುವಜನರಿಗಾಗಿ ಏರ್ಪಡಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಗಾಂಧೀಜಿ ಇಂದಿಗೂ ಯುವ ಮನಸ್ಸುಗಳ ಆದರ್ಶ ಹಾಗೂ ಆಕರ್ಷಣೆಯ ವ್ಯಕ್ತಿಯಾಗಿ ಉಳಿದಿದ್ದಾರೆ ಅನ್ನುವ ಸಮಾಧಾನ ದೊರಕುತ್ತದೆ. ಅಸ್ಪೃಶ್ಯತೆ, ಲಂಚ, ತತ್ವವಿಲ್ಲದ ರಾಜಕಾರಣ, ಚುನಾವಣಾ ಭ್ರಷ್ಟತೆ ಇವುಗಳ ಕುರಿತು ಆಕ್ರೋಶ ಇದ್ದರೂ ಗಾಂಧೀ ಮಾರ್ಗದಲ್ಲಿ ದೇಶ ಸಾಧಿಸಿದ ಪ್ರಗತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಈ ಲೇಖನಗಳಲ್ಲಿ ಗಮನಿಸಬಹುದು. ಎಲ್ಲ ಸ್ಪರ್ಧಿಗಳೂ ಗಾಂಧಿ ಮಾರ್ಗ ಮತ್ತು ಮೌಲ್ಯಗಳ ಪ್ರಸ್ತುತತೆಯನ್ನು ಎತ್ತಿ ಹಿಡಿದಿರುವುದು ಈ ಬರಹಗಳಲ್ಲಿ ಕಂಡು ಬರುತ್ತದೆ ಎಂದು ತೀರ್ಪುಗಾರರ ಮಂಡಲಿಯ ಪರವಾಗಿ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ| ಎನ್.ಎಸ್. ಸತೀಶ್ , ಕನ್ನಡ ವಿಭಾಗ ಮುಖ್ಯಸ್ಥ, ಕವಿ – ಸಂಶೋಧಕ, ಗಾಂಧಿ ಶಾಂತಿ ಪ್ರತಿಷ್ಠಾನದ ಗೌ|| ಕಾರ್ಯದರ್ಶಿ ಡಾ.ಸತ್ಯಮಂಗಲ ಮಹಾದೇವ ಮತ್ತು ಮಾಧ್ಯಮ ಸಮಾಲೋಚಕ – ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಬಹುಮಾನ ವಿಜೇತ ಪ್ರಬಂಧ ಮತ್ತು ಪತ್ರ ಬರಹಗಳನ್ನು ಕ್ರಮವಾಗಿ ದಶಮಾನೋತ್ಸವ ಆಚರಿಸುತ್ತಿರುವ ಗಾಂಧಿ ತತ್ವ ಪ್ರಸರಣದ ಜೀರಿಗೆ ಲೋಕೇಶ್ ಸಂಪಾದಕತ್ವದ ಅಮರ ಬಾಪು ಚಿಂತನ ದ್ವಿಭಾಷಾ- ದ್ವೈಮಾಸಿಕ ಪತ್ರಿಕೆಯ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು.

ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿವರಗಳಿಗೆ: 90356 18076

ಪತ್ರ ಸ್ಪರ್ಧೆಯ ಬಹುಮಾನ ವಿಜೇತರ ಪಟ್ಟಿ:

  • ಫಣೀಂದ್ರ ಎ., ಉಪನ್ಯಾಸಕರು, ಬೆಂಗಳೂರು – ಪ್ರಥಮ ಸ್ಥಾನ
  • ಅನುರಾಧ ಎಲ್, ಪದವಿ ವಿದ್ಯಾರ್ಥಿನಿ, ಶಿವಮೊಗ್ಗ – ದ್ವಿತೀಯ
  • ಶಿಲ್ಪ ಬಿ.ಹೆಚ್. – ಮೈಸೂರು – ತೃತೀಯ
  • ತಾಂಜಿಲ್ ಬಾನು , ಪದವಿ ವಿದ್ಯಾರ್ಥಿನಿ, ಬೆಂಗಳೂರು- ಚತುರ್ಥ

ಪ್ರೋತ್ಸಾಹಕ ಬಹುಮಾನಿತರು:

  • ಕೀರ್ತನಾ ಎಂ, ಪದವಿ ವಿದ್ಯಾರ್ಥಿನಿ, ಬೆಂಗಳೂರು.
  • ಲಕ್ಷ್ಮೀ ಎನ್. ಪದವಿ ವಿದ್ಯಾರ್ಥಿನಿ, ಬೆಂಗಳೂರು
    ಮೆಚ್ಚುಗೆ ಪಡೆದವರು
  • ಹರ್ಷಿತಾ, ಪದವಿ ವಿದ್ಯಾರ್ಥಿನಿ, ಬಂಟ್ವಾಳ ತಾ||
  • ದೇವರಾಜ , ಪದವಿ ವಿದ್ಯಾರ್ಥಿ, ಬೆಂಗಳೂರು
    ಲೇಖನ ಸ್ಪರ್ಧೆಯ ಬಹುಮಾನ ವಿಜೇತರ ಪಟ್ಟಿ
  • ಭಾಗ್ಯಶ್ರೀ ಗಟೋಳಿ, ಗೃಹಿಣಿ, ಇಂಡಿ- ಪ್ರಥಮ
  • ಸುಮಿತ್ರ ಜಿ ಕಣವಿ , ಪದವಿ ವಿದ್ಯಾರ್ಥಿನಿ, ಧಾರವಾಡ- ದ್ವಿತೀಯ
  • ಅನ್ನಪೂರ್ಣ , ಪದವಿ ಪೂರ್ವ ವಿದ್ಯಾರ್ಥಿನಿ, ಧಾರವಾಡ- ತೃತೀಯ
  • ಜ್ಯೋತಿ ಎಸ್.ಆರ್. , ಪದವಿ ಪೂರ್ವ ವಿದ್ಯಾರ್ಥಿನಿ, ಬೆಂಗಳೂರು- ಚತುರ್ಥ ಪ್ರೋತ್ಸಾಹಕ ಬಹುಮಾನಿತರು
  • ಶ್ರೀಕಾಂತ ಕೆ.ಎನ್ – ಇಂಜನೀಯರಿಂಗ್ ವಿದ್ಯಾರ್ಥಿ- ಕೋಲಾರ
  • ಸಾವನ್ – ಡಿಪ್ಲೋಮಾ ವಿದ್ಯಾರ್ಥಿ, ಉಡುಪಿ ಜಿಲ್ಲೆ
  • ರಾಕೇಶ ಮ ಕೊಕಟನೂರ , ಪದವಿ ವಿದ್ಯಾರ್ಥಿ , ಯಡ್ರಾಮಿ ತಾ|| ಕಲಬುರಗಿ
  • ಸುಶ್ಮಿತಾ ಎನ್.ಎಸ್, 9ನೇ ತರಗತಿ , ನಗುವನಹಳ್ಳಿ, ಮಂಡ್ಯ ಜಿಲ್ಲೆ ಮೆಚ್ಚುಗೆ ಪಡೆದವರು
  • ದೀಪಶ್ರೀ ಎಸ್ ಕೂಡ್ಲಿಗಿ , ಉಪನ್ಯಾಸಕಿ , ಕೂಡ್ಲಿಗಿ
  • ಎಸ್.ಸ್ತುತಿ , ಪದವಿಪೂರ್ವ ವಿದ್ಯಾರ್ಥಿನಿ, ಬೆಂಗಳೂರು.
  • ವಿವೇಕ್ ಎಂ, 10ನೇ ತರಗತಿ , ನಗುವನಹಳ್ಳಿ, ಮಂಡ್ಯ ಜಿಲ್ಲೆ
  • ಚಿದಾನಂದ ಪಾಟೀಲ , ಪದವಿ ವಿದ್ಯಾರ್ಥಿ, ಬೆಂಗಳೂರು
RELATED ARTICLES

Most Popular

error: Content is protected !!
Join WhatsApp Group