Homeಸುದ್ದಿಗಳುಹಿರೇಮುನವಳ್ಳಿಯ ಶ್ರೀ ಸಿದ್ಧಶಿವಯೋಗಿ ಶಾ0ಡಿಲೇಶ್ವರ ಮಠದ ಜಾತ್ರಾ ಮಹೋತ್ಸವ

ಹಿರೇಮುನವಳ್ಳಿಯ ಶ್ರೀ ಸಿದ್ಧಶಿವಯೋಗಿ ಶಾ0ಡಿಲೇಶ್ವರ ಮಠದ ಜಾತ್ರಾ ಮಹೋತ್ಸವ

ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮದ ಸುಕ್ಷೇತ್ರ ಶ್ರೀ ಸಿದ್ಧ ಶಿವಯೋಗಿಶಾoಡಿಲೇಶ್ವರ ಮಠದ 26ನೆಯ ಜಾತ್ರಾ ಮಹೋತ್ಸವ ಹಾಗೂ ಶ್ರೀಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 11ನೆಯ ವರ್ಷದ ಗುರು ಪಟ್ಟಾಧಿಕಾರದ ವರ್ಧoತಿ ಮಹೋತ್ಸವ ಇದೇ ಸೋಮವಾರ ಡಿಸೆಂಬರ್ 25 ರಿಂದ ಪ್ರಾರಂಭ ವಾಗಿದ್ದು ಇದೇ 29 ರ ವರಗೆ ಜರುಗಲಿದೆ. ಈ ಜಾತ್ರಾ  ಮಹೋತ್ಸವದಲ್ಲಿ ಶ್ರೀ ಮಠದ,ಭಕ್ತರ ಶ್ರದ್ಧೆ,ಭಕ್ತಿ,ನಿಷ್ಠೆಯಿಂದ ಹಲವು ಧಾರ್ಮಿಕ ಕಾರ್ಯಗಳು, ಜರುಗುತ್ತಲಿವೆ ಅವುಗಳ ಪರಿಚಯಿಸುವ ಕಿರು ಲೇಖನ ಇದು)

ನಮ್ಮಭಾರತ ದೇಶವು ಜಗತ್ತಿನಲ್ಲಿಯೇ   ಧಾರ್ಮಿಕ ಪರಂಪರೆಯಲ್ಲಿ ಹೆಸರುವಾಸಿಯಾಗಿದೆ, ಇಲ್ಲಿಯ ಧರ್ಮ, ಅಧ್ಯಾತ್ಮ, ತತ್ವಜ್ಞಾನ ಜಗತ್ತಿನ ಗಮನ ಸೆಳೆದಿದೆ,,ಭಾರತ ದೇಶವು ಪರಮ ಪುಣ್ಯ ಭೂಮಿ, ಧರ್ಮದ ಕಾರ್ಯದಲ್ಲಿ ಜಗತ್ತಿಗೆ ಮಾದರಿಯಾದ ಪುರಾತನವಾದ ಮಹಾನ್ ದೇಶ, ಈ ದೇಶದಲ್ಲಿ ಮಹಾನ್ ಸಂತ ಮಹಾಂತರು, ತಪೋನಿರತ ಸಾಧು ಸಂತರು, ಋಷಿ ಮುನಿಗಳು ತಪಸ್ವಿಗಳು, ಶಿವಶರಣರು, ಮಹಾನ ಪುರುಷರು,ಜನ್ಮತಾಳಿ ಈ ಭೂಮಿಯನ್ನು ಪುಣ್ಯಮಯ ಮಾಡಿರುವರು, ಜೊತೆಗೆ ತಮ್ಮ ತಪೋಶಕ್ತಿಯಿಂದ ಭಕ್ತರನ್ನು ಉದ್ದರಿಸಿರುವರು, ದೇಶದಲ್ಲಿ ಹಲವಾರು ಮತಗಳು,ಪಂಥಗಳು,ಧರ್ಮಗಳು ಜನ್ಮ ತಾಳಿದವು, ಅವುಗಳ ಉದ್ದೇಶ  ಮಾನವರ ಬದುಕಿಗೆ ಉತ್ತಮ ಮಾರ್ಗದರ್ಶನ ಮಾಡಿ, ಅವರ ಜೀವನದ ಏಳ್ಗೆಯನ್ನೇ  ಗುರಿಯಾಗಿಸಿಕೊಂಡು ಆಧ್ಯಾತ್ಮಿಕವಾಗಿ ಭಕ್ತಿಯಿಂದ ಮುಕ್ತಿ ಪಡೆಯುವ, ಮನುಷ್ಯನ ಜೀವನ ಸಾರ್ಥಕವಾಗಿಸುವಲ್ಲಿ. ನಿರಂತರ  ಶ್ರಮವಹಿಸಿವೆ, ಕಾಲ ಕಾಲಕ್ಕೆ ಮಹಾನ್ ಪುರುಷರು ವಿವಿಧ ಅವತಾರ ಗಳಲ್ಲಿ ಜನ್ಮ ತಾಳಿ ತಮ್ಮ ವಿಚಾರಧಾರೆ, ನೀತಿ ನಿಯಮ ಮಾರ್ಗದರ್ಶನ, ಉತ್ತಮ ವಿಚಾರಧಾರೆಗಳ ಬೋಧನೆಯನ್ನ ಮಾಡಿ ಈ ಭೂಮಿಯನ್ನು ಪುಣ್ಯ ಮಯ ಮಾಡಿರುವರು, ಈ ಮಹಾನ್ ಪರಂಪರೆಯ ಪುಣ್ಯ ಪುರುಷರು ಭಕ್ತರ ಉದ್ಧಾರ ಮಾಡಿ ಇತಿಹಾಸದಲ್ಲಿ ಸ್ಮರಣೀಯರಾಗಿರುವರು.

ಇಂತಹವರಲ್ಲಿ ಮಹಾನ್ ತಪೋನಿಷ್ಠರಲ್ಲಿ ಪುಣ್ಯಮಯ ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮದಲ್ಲಿ ನೆಲೆಸಿ ತಮ್ಮ ತಪೋಶಕ್ತಿಯಿಂದ ಭಕ್ತರನ್ನು ಉದ್ಧಾರ ಮಾಡಿರುವ ಶ್ರೀ ಶಾoಡಿಲೇಶ್ವರ ಮಹಾಸ್ವಾಮಿಗಳು ಪ್ರಮುಖರು. ಹಿರೇಮುನವಳ್ಳಿ ಗ್ರಾಮವು ಮಲೆನಾಡ ಸೊಬಗಿನ ಪವಿತ್ರ ಮಲಪ್ರಭಾ ನದಿಯ ತಟದಲ್ಲಿದೆ, ಹಿರಿಯ ಮುನಿಗಳ ವಾಸ ಸ್ಥಾನವೇ ಹಿರೇ ಮುನವಳ್ಳಿ ಗ್ರಾಮವಾಗಿದೆ, ಪೂಜ್ಯರ ವಾಸ ಸ್ಥಾನದಿಂದ ಪುಣ್ಯಮಯವಾಗಿದೆ.

ದಯಾಮಯ ಭಗವಂತನು ಈ ಕಲಿಯುಗದಲ್ಲಿ ಧರ್ಮ ರಕ್ಷಣೆಗಾಗಿ ಹಲವಾರು ರೂಪದಲ್ಲಿ ಜನ್ಮ ತಾಳಿ ಭಕ್ತರನ್ನು ರಕ್ಷಣೆ ಮಾಡಿರುವನು, ದುಷ್ಟರ ನಾಶ ಮಾಡಿ ಧರ್ಮ ಸಂರಕ್ಷಣೆ ಮಾಡಿರುವನು, ಇಂಥ ಭಗವಂತನು ನೇಪಾಳ ರಾಜ್ಯದ ಅರಮನೆಯಲ್ಲಿ ಶ್ರೀ ಶ್ಯಾoಡಿಲೇಶ್ವರ ಮಹಾಸ್ವಾಮಿಗಳ ರೂಪದಲ್ಲಿ ಜನ್ಮ ತಾಳಿದರು, ಅವರು ನೇಪಾಳ ದಲ್ಲಿ ಜನಿಸಿದರು, ನೇಪಾಳ ದೇಶವು ಹಿಮಾಲಯದ ಪುಟ್ಟ ಹಿಂದೂ ರಾಷ್ಟ್ರ, ವಿಶ್ವದ ಅತ್ಯಂತ ಎತ್ತರದ ಹದಿನಾಲ್ಕು ಶಿಖರಗಳಲ್ಲಿ ಎಂಟು ಶಿಖರ ಗಳು ನೇಪಾಳದಲ್ಲಿವೆ, ಇವಲ್ಲದೇ ಹಿಮದಿಂದ ಕೂಡಿರುವ ಸಾವಿರಾರು ಪರ್ವತ ಗಳು ಮತ್ತು ಕಣಿವೆಗಳು ಜಗತ್ತಿನ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಿವೆ. ನೇಪಾಳದ ಬಹುತೇಕ ನಗರಗಳು ಕಣಿವೆ ಪ್ರದೇಶಗಳಲ್ಲಿವೆ ಇಂಥ ರಮಣೀಯ ದೇಶ ನೇಪಾಳ.ಇಂಥ ದೇಶದಲ್ಲಿ ಅದೂ ಅರಮನೆಯಲ್ಲಿ ಜನಿಸಿ ಸುಖ ಭೋಗ ಗಳನ್ನು ಬದಿಗೊತ್ತಿ ಪ್ರಾಪ0ಚಿಕ ಮೋಹ ಮಮಕಾರ ಬಿಟ್ಟು ವೈರಾಗ್ಯ ತಾಳಿ ದೇಶ ಸಂಚಾರ ಮಾಡುತ್ತ ಭಾರತ ದೇಶದಲ್ಲಿ ಹಲವು ಪುಣ್ಯಮಯ ಧಾರ್ಮಿಕ ಕ್ಷೇತ್ರಗಳಲ್ಲಿ ತಪಸ್ಸು ಆಚರಿಸಿ,ಭಾರತ ದೇಶದಲ್ಲಿ ಸಂಚಾರ ಮಾಡುತ್ತ ಭಕ್ತರನ್ನು ಉದ್ಧಾರ ಮಾಡಿ ಕೊನೆಗೆ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಕ್ಷೇತ್ರ ಹಿರೇಮುನವಳ್ಳಿ ಗ್ರಾಮದಲ್ಲಿ ನೆಲೆ ನಿಂತು ಭಕ್ತರ ಭಾವನೆ ಗಳಿಗೆ ಸ್ಪಂದಿಸಿ ಅವರ ಜೀವನವನ್ನು ಉದ್ಧಾರ ಮಾಡಿದ ಮಹಾತ್ಮರು, ಅನೇಕ ಲೀಲಾ ವಿನೋದಗಳಿಂದ, ಪವಾಡ ಗಳಿಂದ, ಭಕ್ತರ ಗಮನ ಸೆಳೆದವರು, ಸರ್ವರಿಗೂ ಒಳಿತನ್ನೆ ಬಯಸಿದರು, ತಮ್ಮ ತಪೋಶಕ್ತಿ, ಕರುಣೆ, ಪ್ರೀತಿ ವಿಶ್ವಾಸ ಗಳಿಂದ ಭಕ್ತರನ್ನು ಉದ್ದಾರ ಮಾಡಿದರು, ದುಷ್ಟರ ದಮನ ಮಾಡಿದರು, ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪವಾದವರು. ಇಂದಿಗೂ ಈ ಭಾಗದಲ್ಲಿ ಪೂಜ್ಯರಾದವರು, ಇಂಥ ಪರಮ ಪೂಜ್ಯರ ನೆನಪಿನಲ್ಲಿ ಪ್ರತಿವರ್ಷ ಅಜ್ಜನ ಜಾತ್ರೆ ನಡೆಯುತ್ತಿದೆ, ನಾಡಿನ ಪರಮ ಪೂಜ್ಯರು, ಸಾಮಾಜಿಕ, ರಾಜಕೀಯ ನಾಯಕರು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಜಾತ್ರಾ ಕಾರ್ಯಕ್ರಮಕ್ಕೆ ಆಗಮಿಸಿ ಸದ್ಗುರು ನಾಥನ ದರ್ಶನ ಪಡೆದುಕೊಂಡು ಸೇವೆ ಸಲ್ಲಿಸಿ ಪುನೀತರಾಗುವರು, ಇದೊಂದು ಪುಣ್ಯಮಯಕಾರ್ಯಕ್ರಮವಾಗುತ್ತದೆ, ಧಾರ್ಮಿಕ, ಸಾಮಾಜಿಕ ವಿಷಯಗಳ ಕಾರ್ಯಕ್ರಮ, ಪೂಜೆ ಪುನಸ್ಕಾರಗಳು, ನಾಡಿನ ಶಾಂತಿಗಾಗಿ, ಸಮೃದ್ಧಿಗಾಗಿ, ಭಕ್ತರ ಬಯಕೆ ಈಡೇರಿಕೆಗಾಗಿ ಹೋಮ ಹವನಗಳು ಜರಗುತ್ತವೆ.

ಬೆಳಗಾವಿ ತಾಲೂಕಿನ ಸುಕ್ಷೇತ್ರ ಮುಕ್ತಿ ಮಠದ ತಪೋರತ್ನ  ಪರಮ ಪೂಜ್ಯ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ನಾಡಿನವಿವಿಧ ಪೂಜ್ಯ ಮಠಾಧೀಶ್ವರರು ಉಪಸ್ಥಿತಿಯಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಮುಂದಾಳತ್ವದಲ್ಲಿ ಜಾತ್ರಾ ಮಹೋತ್ಸವವು ವೈಭವದಿಂದ ಜರಗುತ್ತಿದೆ,

ಸದ್ಯದ ಶ್ರೀ ಶಾಂಡಿಲೇಶ್ವರ ಮಠದ ಹಿರೇಮುನವಳ್ಳಿ ಹಾಗೂ ಪಾರಿಶ್ವಾಡದ ಶಾಖಾ ಮಠದ ಪೀಠಾಧೀಪತಿ ಗಳಾದ ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರ ಹಿತ ಬಯಸುವ ಅಪರೂಪದ ಸರಳ ಸಜ್ಜನಿಕೆಯ ಮಹಾಸ್ವಾಮಿಗಳು, ಯಾವಾಗಲು ಎಲ್ಲರನ್ನೂ ನಗು ಮುಖದಿಂದ ಸ್ವಾಗತಿಸಿ, ಹಿತಮಿತದ ಮಾತಗಾರಿಕೆಯಿಂದ ಭಕ್ತರ ಪಾಲಿಗೆ ದೇವರಾಗಿದ್ದಾರೆ.  ಹನ್ನೊಂದು ವರ್ಷದ ಗುರು ಪಟ್ಟಾಧಿಕಾರದ ವರ್ಧoತಿ ಮಹೋತ್ಸವ ಆಚರಣೆ ನಡೆಯುತ್ತಿದೆ. ಈ ಭಾಗದ ಧಾರ್ಮಿಕ ಜಾಗೃತಿಗೆ ಶ್ರಮ ವಹಿಸುತ್ತಿದ್ದಾರೆ. ಮಠದ ಅಭಿವೃದ್ಧಿ ಹಾಗೂ ಬದಲಾವಣೆಗೆ ಭಕ್ತರ ನೆರವಿನಿಂದ ಯಶಸ್ಸು ಗಳಿಸಿರುವರು. ಮಠವನ್ನು ಶ್ರದ್ಧಾ ಕೇಂದ್ರವನ್ನಾಗಿ ಮಾಡಿ ಭಕ್ತರ ಪಾಲಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಠಕ್ಕೆ ಆಗಮಿಸಿದ ಭಕ್ತರ ಭಾವನೆಗಳಿಗೆ, ಅವರ ನೋವು ನಲಿವುಗಳಿಗೆ ಸ್ಪಂದಿಸುತ್ತಿರುವರು.

ಅವರ ಧಾರ್ಮಿಕ ಸೇವೆ ನಾಡಿಗೆ ವಿಸ್ತಾರ ವಾಗಲಿ, ಮಠವು ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಲೆಂದು ಆಶಿಸಿ ಭಕ್ತಿಪೂರ್ವಕ ಅಭಿನಂದನೆಗಳನ್ನು ಸಲ್ಲಿಸೋಣ.

ಈ ಐದು ದಿನದ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನದ ಪ್ರಾತಃಕಾಲ 6 ಘಂಟೆಗೆ ಶ್ರೀ ಸಿದ್ದ ಶಿವಯೋಗಿ ಶಾಂಡಿಲೇಶ್ವರ ಗದ್ದುಗೆಗೆ ಮಹಾ ರುದ್ರಾಭಿಷೇಕ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಸಾಯಂಕಾಲ 6 ಘಂಟೆಗೆ ವಿವಿಧ ವಿಷಯ ಗಳ ಧಾರ್ಮಿಕ ಕಾರ್ಯಕ್ರಮಗಳು, ನಾಡಿನ ವಿವಿಧ ಪ್ರಮುಖ ಮಠಾಧೀಶ್ವರರ ಸಮ್ಮುಖದಲ್ಲಿ ಧರ್ಮ ಸಭೆಗಳಲ್ಲಿ ಧರ್ಮದ ಚಿಂತನೆ ನಡೆಯಲಿದೆ. ಜೊತೆಗೆ ಮಹಾಪ್ರಸಾದ ನಡೆಯುತ್ತದೆ,

ಐದು ದಿನಗಳ ಕಾಲ ವೇ. ಮೂ. ತುರಮರಿಯ ಶಾಂತಯ್ಯ ಮಹಾಸ್ವಾಮಿಗಳು ಹಾಗೂ ಹಿರೇಮುನವಳ್ಳಿಯ ಕುಮಾರಿ ಶಾ0ಭವಿದೇವಿ ಇವರಿಂದ ಪ್ರವಚನ ನಡೆಯುತ್ತಿದೆ. ಜೊತೆಗೆ ಭಜನಾ ಕಾರ್ಯಕ್ರಮ ನಡೆಯುತ್ತಿದೆ.

ಈ ಜಾತ್ರಾ ಅವಧಿಯಲ್ಲಿ ಗುರುವಿನ ನಾಣ್ಯ ತುಲಾಭಾರ, ಗಣಹೋಮಗಳು , ಅಜ್ಜನ ಪಲ್ಲಕ್ಕಿಯ ಉತ್ಸವ, ಮಹಾಮೃತುಂಜಯ ಹೋಮ ಗಳು ಜರುಗುತ್ತವೆ.ನಾಡಿನ ವಿವಿಧ ಭಾಗಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಭಕ್ತಿಯ ಸೇವೆ ಸಲ್ಲಿಸಿ ಸದ್ಗುರು ನಾಥನ ಕೃಪೆಗೆ ಪಾತ್ರರಾಗುತ್ತಿರುವರು. ನೀವು ಬನ್ನಿರಿ. ಸದ್ಗುರುನಾಥನ ದರ್ಶನ ಪಡೆದುಕೊಂಡು ಪುನೀತರಾಗಿರಿ


ಬಸವರಾಜ ಫಕೀರಪ್ಪ ಸುಣಗಾರ

ಮುಖ್ಯ್ಯೊಪಾದ್ಯಾಯರು, ಬೆಳಗಾವಿ, ಮೊ ನ0. 9481738018*

RELATED ARTICLES

Most Popular

error: Content is protected !!
Join WhatsApp Group