Homeಲೇಖನಕೆಎಲ್ಇ ಸಂತ : ಡಾ. ಪ್ರಭಾಕರ ಕೋರೆ

ಕೆಎಲ್ಇ ಸಂತ : ಡಾ. ಪ್ರಭಾಕರ ಕೋರೆ

ಕೆಎಲ್ಇ ಸಂತ : ಡಾ. ಪ್ರಭಾಕರ ಕೋರ

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಇತಿಹಾಸದಲ್ಲಿ 1916 ಅಂತ್ಯತ ಮಹತ್ವದ ವರ್ಷವಾಗಿತ್ತು. ಅಂದು ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡ ವರ್ಷವೂ ಹೌದು. 19 ನೆಯ ಶತಮಾನದ ಪ್ರಾರಂಭದಲ್ಲಿ ಭಾರತ ದೇಶದ ಅನೇಕ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿದವು. ಅಂತಹ ಹಲವು ಸಂಸ್ಥೆಗಳಲ್ಲಿ ಪ್ರತಿಷ್ಠಿತ ಕೆ ಎಲ್ ಇ ಸಂಸ್ಥೆಯು 13 ನವಂಬರ ,1916 ರಂದು ಸತ್ಯ, ಸೇವೆ, ಪ್ರೇಮ, ಸ್ವಾರ್ಥತ್ಯಾಗ ಉದಾತ್ತ ಮೌಲ್ಯಗಳಿಂದ ಉದಯಿಸಿತು.

ಚಿಕ್ಕೋಡಿ ಗಡಿಭಾಗದ ಅಂಕಲಿ ಗ್ರಾಮದ ಶಿವಶರಣರಾದ ಶ್ರೀ ಬಸವಪ್ರಭು ಹಾಗೂ ಶ್ರೀಮತಿ ಶಾರದಾದೇವಿ ಅವರ ಸಾತ್ವಿಕ ಉದರದಿಂದ 01 ಅಗಷ್ಟ ,1947 ರಂದು ಪ್ರಭಾಕರ ಅವರು ಶ್ರೀಮಂತ ಮನೆತನದಲ್ಲಿ ಜನಿಸಿದರು.

ಮುಖಂಡತ್ವ ಗುಣವನ್ನು ಹುಟ್ಟಿನಿಂದಲೇ ಪಡೆದು ಕಾಲೇಜು ವಿದ್ಯಾಭ್ಯಾಸ ಪಡೆಯುವಾಗಲೆ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಗುರುತಿಸಿಕೊಂಡರು. ಕೆ ಎಲ್ ಇ ಸಂಸ್ಥೆಗೆ 1983 ರಲ್ಲಿ ನಿರ್ದೇಶಕರಾಗಿ ಆಯ್ಕೆಯಾದರು. ತದನಂತರ 1984 ರಲ್ಲಿ ಡಾ. ಪ್ರಭಾಕರ ಕೋರೆಯವರು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದಾಗ ಸಂಸ್ಥೆಯ ಸೇವೆ ಸಂಪ್ರದಾಯಿಕ ಶಿಕ್ಷಣಕ್ಕೆಷ್ಟೇ ಸೀಮತವಾಗಿತ್ತು. ತದನಂತರ ಸಂಸ್ಥೆಯು ವೈದ್ಯಕೀಯ, ತಾಂತ್ರಿಕ ,ಆರೋಗ್ಯ, ಕ್ರಷಿ ತರಬೇತಿ ಹೋಟೆಲ್ ಉದ್ಯಮ, ಸಂಶೋಧನೆ ಮತ್ತು ಅಲೈಡ್ ಕೋರ್ಸ್ ಗಳನ್ನು ಪ್ರಾರಂಭಿಸುವುದರ ಮೂಲಕ ಸಂಸ್ಥೆಯನ್ನು ಸಾಗರದಾಚೆ ಬೋಧಿವ್ರಕ್ಷದಂತೆ ಬೆಳೆಯಿಸಿದರು. 1984 ರಲ್ಲಿ 37 ರಷ್ಟು ಇದ್ದ ಕೆ ಎಲ್ ಇ ಅಂಗ ಸಂಸ್ಥೆಗಳು ಇಂದು 311 ಕ್ಕೆ ಹೆಚ್ಚಿಸಿ ಸಂಸ್ಥೆಯಲ್ಲಿ ಇಂದು 1,38,000 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ 18,000 ಸಾವಿರ ಸಿಬ್ಬಂದಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ .ಇದು ಡಾ. ಕೋರೆಯವರಿಗೆ ಸಲ್ಲುತ್ತದೆ. ಡಾ. ಕೋರೆಯವರು ಶರಣಜೀವಿಯಾಗಿ, ಕಾಯಕಯೋಗಿಯಾಗಿ , ಶ್ರೇಷ್ಠ ಚಿಂತಕರಾಗಿ, ಶಿಸ್ತು, ಶ್ರದ್ಧೆ ,ಸತ್ಯ,ನಿಷ್ಠೆ, ಬದ್ದತೆ , ಪ್ರಯಾಣಿಕತೆ, ನಿಷ್ಟುರಗಳ ಸಂಗಮವಾಗಿದ್ದಾರೆ.

ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಕೆಎಲ್ ಇ ಆರೋಗ್ಯ ವಿಶ್ವವಿದ್ಯಾಲಯ, ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ, ಕೆಎಲ್ ಇ ಯುಎಸ್ಎಂ ವಿಶ್ವವಿದ್ಯಾಲಯ ಸ್ಥಾಪನೆಯಾಗುವಲ್ಲಿ ಡಾ. ಕೋರೆಯವರ ಇಚ್ಛಾಶಕ್ತಿ ಪ್ರಮುಖ ಕಾರಣವಾಗಿದೆ. ಕೋರೆಯವರ ದೂರದೃಷ್ಟಿ ಫಲವಾಗಿ ಕೆಎಲ್ ಇ ಸಂಸ್ಥೆಯು ಅಮೇರಿಕಾ ಇಂಗ್ಲೆಂಡ್ ಮಲೇಷಿಯಾ ಹಾಗೂ ಜಾಂಬಿಯಾ,ಚೀನಾ ಮತ್ತು ಇತರ ದೇಶಗಳ ವಿಶ್ವವಿದ್ಯಾಲಯಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡಿವೆ.

ಎರಡನೆಯ ರಾಜಧಾನಿಯಾದ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಮತ್ತು ಕನ್ನಡ ಭವನ ನಿರ್ಮಿಸಲು ಡಾ. ಕೋರೆ ಯವರು ಕಾರಣೀಭೂತರಾದವರು. ತಮ್ಮ ಕರ್ಮಭೂಮಿಯಾದ ಅಂಕಲಿ ಭಾಗದಲ್ಲಿ ರೈತರ ಜೀವನಾಡಿಗಳಾದ ನನದಿಯ ಚಿದಾನಂದ ಕೋರೆ ದೂಧಗಂಗಾ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಡಾ. ಪ್ರಭಾಕರ ಕೋರೆಯವರ ಒಡೆತನದ ಯಡ್ರಾವಿಯ ಶ್ರೀ ಶಿವಶಕ್ತಿ ಸಕ್ಕರೆ ಕಾರ್ಖಾನೆಗಳು ರೈತಾಪಿ ವರ್ಗದ ಬೆನ್ನುಲುಬುವಾಗಿವೆ. ಕಬ್ಬು ಕಳಿಸುವ ರೈತರಿಗೆ ಆರೋಗ್ಯ ಜೀವವಿಮಾ ಯೋಜನೆಗಳನ್ನು ಜಾರಿಗೊಳಿಸಿ ರೈತರ ಬಗ್ಗೆ ಸಾಮಾಜಿಕ ಕಳಕಳಿ ಹೊಂದಿದವರು. ಶ್ರೀ ಯುತರು ಸ್ವಗ್ರಾಮದಲ್ಲಿ ಡಾ. ಪ್ರಭಾಕರ ಕೋರೆ ಸಹಕಾರ ಸೌಹಾರ್ದ ಬ್ಯಾಂಕ ಸ್ಥಾಪಿಸಿ ರೈತರಿಗೆ ಮತ್ತು ಸಂಸ್ಥೆಯ ಉದ್ಯೋಗ ನಿರತ ಸಿಬ್ಬಂದಿ ವರ್ಗ ಕ್ಕೆ ರಿಯಾಯಿತಿ ದರದ ಸಾಲದ ಸೌಲಭ್ಯವನ್ನು ಒದಗಿಸಿ ಸಹಕಾರ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಬೆಳಗಾವಿ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಿಂದ ಜನಸಾಮಾನ್ಯರ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಕೋರೆಯವರ ಆರೋಗ್ಯ ಮೇಲೆ ವಿಶೇಷ ಒತ್ತು ನೀಡಿದ್ದಾರೆ. ಕರ್ನಾಟಕ ಸರ್ಕಾರ ವತಿಯಿಂದ ಕಡಿಮೆ ಬೆಲೆಗೆ ಬೆಳಗಾವಿ ನಗರದಲ್ಲಿ ಭೂಮಿ ಖರೀದಿಸಿ ವೀರಶೈವ ಲಿಂಗಾಯತ ಬಾಲಕಿಯರ ವಸತಿ ನಿಲಯ ಸ್ಥಾಪನೆಗೊಂಡದ್ದು ಸ್ಮರಣೀಯವಾದದ್ದು.
1992 ರಲ್ಲಿ ಬೆಳಗಾವಿಯಲ್ಲಿ ಜರುಗಿದ 21 ನೆಯ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದ ಸ್ವಾಗತಾಧ್ಯಕ್ಷರಾಗಿದರು. ವೀರಶೈವ ಲಿಂಗಾಯತರಲ್ಲಿ ಜಾಗೃತಿ ಮತ್ತು ಸಂಘಟನೆಗೆ ಫಲಪ್ರದವಾಯಿತು. ಗಡಿ ಭಾಗವಾದ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಸಮ್ಮೇಳನಗಳು, ಉತ್ಸವಗಳು, ಹಬ್ಬಗಳು ಆಯೋಜಿಸುವಲ್ಲಿ, ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುವರು. ವಿಧಾನ ಪರಿಷತ್ತಿನ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯರ ಅನುದಾನದಿಂದ ತಮ್ಮ ಮತಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಬೆಳಗಾವಿ ನಗರದಲ್ಲಿ ನೀಟ್ ಜೆಇಇ ಮತ್ತು ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಡೆಮಿ ಸ್ಥಾಪಿಸಿ,ಈ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಿದ್ದಾರೆ.

ಡಾ. ಪ್ರಭಾಕರ ಕೋರೆಯವರಿಗೆ ಅಂತರಾಷ್ಟ್ರೀಯ , ರಾಷ್ಟ್ರೀಯ ಮತ್ತು ಕರ್ನಾಟಕ ಸರ್ಕಾರದ,ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳು ಅವರ ಮುಕುಟಮಣಿಗೆ ಕಳಶಪ್ರಾಯವಾಗಿವೆ. ಅಮೇರಿಕಾ ದೇಶದ ಪ್ರತಿಷ್ಠಿತ ಜಾಫರಸನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ ಪದವಿ ಪ್ರದಾನ ಮಾಡಿದೆ. ಇದೊಂದು ಸಾಂಸ್ಕೃತಿಕ ಸೇವೆಗಾಗಿ ಸಂದ ಗೌರವ ಪ್ರತೀಕವಾಗಿದೆ. ಕನ್ನಡಿಗರಿಗೆ ಅಭಿಮಾನದ ವಿಷಯವಾಗಿದೆ. ಡಾ ಪ್ರಭಾಕರ ಕೋರೆಯವರ ನಾಲ್ಕು ದಶಕಗಳಿಂದ ಅವಿರತ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಶ್ಲಾಘನೀಯ,ಅನುಪಮ, ಅಮೋಘ ಕಾಯಕವಾಗಿದೆ. ಡಾ ಪ್ರಭಾಕರ ಕೋರೆಯವರ ಕೆ ಎಲ್ ಇ ಸಂಸ್ಥೆಯನ್ನು ಇನ್ನಷ್ಟು ಚಂದ್ರನಂತೆ ಬೆಳಕಾಗಲಿ, ಸೂರ್ಯನಂತೆ ಪ್ರಜ್ವಸಲಿವೆಂದು ಭಗವಂತನಲ್ಲಿ ಕೆ ಎಲ್ ಇ ಪರಿವಾರದವರು ಪ್ರಾರ್ಥಿಸುತ್ತೇವೆ. ಡಾ. ಪ್ರಭಾಕರ ಕೋರೆಯವರು ಸಾರ್ಥಕ 40 ವರ್ಷ ಅವಿರತ ಸೇವೆ ಸಲ್ಲಿಸಿ ಸಂಸ್ಥೆಯನ್ನು ಹೆಮ್ಮರದಂತೆ ಬೆಳಸಿ ಸಾಗರದಾಚೆ ಅಂಗಸಂಸ್ಥೆಗಳು ಮರದ ಟಿಸಿಲುಗಳಾಗಿ ಬೆಳೆಸಿದ್ದಾರೆ.
ಡಾ. ಪ್ರಭಾಕರ ಕೋರೆಯವರಿಗೆ ಆರೋಗ್ಯ ,ಆಯುಷ್ಯ , ದಯಪಾಲಿಸಲೆಂದು ನಮ್ಮೆಲ್ಲರ ಆಶಯ
( ಡಾ. ಪ್ರಭಾಕರ ಕೋರೆಯವರ 77 ನೆಯ ಹುಟ್ಟುಹಬ್ಬದ ನಿಮಿತ್ತ ಬರೆದ ಲೇಖನವಿದು)

ಪ್ರೊ.ಶಶಿಕಾಂತ ತಾರದಾಳೆ
ಕನ್ನಡ ಅಧ್ಯಾಪಕರು
ಕೆ ಎಲ್ ಇ ಸಂಸ್ಥೆಯ, ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಬೆಳಗಾವಿ
ಮೊಬೈಲ್:9945912291

RELATED ARTICLES

Most Popular

error: Content is protected !!
Join WhatsApp Group