Homeಸುದ್ದಿಗಳುಮಕ್ಕಳ ಮನಸ್ಸು ತಿಳಿಯುವ ಜೊತೆಗೆ ಉತ್ತಮ ಹವ್ಯಾಸಕ್ಕೆ ಪೂರಕ ವಾತಾವರಣ ಬೆಳೆಸಿರಿ - ಡಾ.ಆನಂದ ಪಾಂಡುರಂಗಿ

ಮಕ್ಕಳ ಮನಸ್ಸು ತಿಳಿಯುವ ಜೊತೆಗೆ ಉತ್ತಮ ಹವ್ಯಾಸಕ್ಕೆ ಪೂರಕ ವಾತಾವರಣ ಬೆಳೆಸಿರಿ – ಡಾ.ಆನಂದ ಪಾಂಡುರಂಗಿ

ಮುನವಳ್ಳಿ: ಬದಲಾದ ಸನ್ನಿವೇಶದಲ್ಲಿ ಮೋಬೈಲ್ ಎಂಬ ಮಾಯಾಂಗನೆಯ ಪ್ರಭಾವ ಎಲ್ಲೆ ಮೀರಿದೆ. ಅದರ ಸದುಪಯೋಗವಾಗಬೇಕು. ಮಕ್ಕಳಿಗೆ ಮೋಬೈಲ್ ತೋರಿಸಿ ಊಟ ಮಾಡಿಸುವ ಬದಲು ಅವರಷ್ಟಕ್ಕೆ ಅವರೇ ಊಟ ಮಾಡಲು ಅವಕಾಶ ಕೊಡಿ. ಮಕ್ಕಳ ಮನಸ್ಸಿನಲ್ಲಿ ಏನಿದೆ ಕೇಳಿ ತಿಳಿಯುವ ಜೊತೆಗೆ ಉತ್ತಮ ಹವ್ಯಾಸಕ್ಕೆ ನಿಮ್ಮಿಂದ ಪೂರಕ ವಾತಾವರಣ ಬೆಳೆಸುವ ತಂದೆ ತಾಯಿಗಳಾಗಿ ನಿಮ್ಮ ಜವಾಬ್ದಾರಿ ನಿರ್ವಹಿಸಿರಿ ಎಂದು ಖ್ಯಾತ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ ತಿಳಿಸಿದರ.

ಅವರು ಪಟ್ಟಣದ ಶ್ರೀ ಗಜಾನನ ವಿದ್ಯಾವರ್ಧಕ ಮತ್ತು ಜನಕಲ್ಯಾಣ ಟ್ರಸ್ಟ(ರಿ)ನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಮಹಾವಿದ್ಯಾಲಯಗಳ ಪಾಲಕರ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

“ನಾವು ಬಾಂಧವ್ಯಗಳಿಗೆ ಆದ್ಯತೆ ನೀಡಬೇಕು. ನಮ್ಮ ಬಾಲ್ಯದ ದಿನಗಳು ಹೇಗಿದ್ದವು.ಇಂದಿನ ಯಾಂತ್ರಿಕ ಬದುಕಿನಲ್ಲಿ ನಾವು ಹೇಗೆ ಸಾಗುತ್ತಿದ್ದೇವೆ ಎಂಬುದರ ಕುರಿತು ನಾವು ಹಿಂದಿನ ದಿನಗಳ ಮೆಲಕು ಹಾಕಬೇಕಾಗಿದೆ. ನಿಮ್ಮ ಮಕ್ಕಳ ನಡವಳಿಕೆಯಲ್ಲಿ ಸ್ವಲ್ಪವೇ ಸ್ವಲ್ಪ ಬದಲಾವಣೆ ಕಂಡು ಬಂದರೆ ಎದೆಗುಂದಬೇಡಿ ಅವರ ಮನವೊಲಿಸಿ ಅವರ ಮನಸ್ಸಿನಲ್ಲಿ ಏನಿದೆ ಕೇಳಿ ತಿಳಿದು ಅದಕ್ಕೆ ಪರಿಹಾರ ನೀಡಿರಿ”ಎಂದು ಪಾಲಕರಿಗೆ ತಿಳಿಸಿದರು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುನವಳ್ಳಿ ಭಂಡಾರಹಳ್ಳಿ ಸೋಮಶೇಖರಮಠದ ಮುರುಘೇಂದ್ರ ಮಹಾಸ್ವಾಮಿಗಳು ಹಾಗೂ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಮಹಾಸ್ವಾಮಿಗಳು ವಹಿಸಿದ್ದರು.ಗಜಾನನ ವಿದ್ಯಾವರ್ಧಕ  ಮತ್ತು ಜನಕಲ್ಯಾನ ಟ್ರಸ್ಟ ನ ಕಾರ್ಯದರ್ಶಿಗಳಾದ ಸುಬ್ರಾಯ ಭಂಡಾರಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ದಂಡಾಧಿಕಾರಿಗಳಾದ ಮಲ್ಲಿಕಾರ್ಜುನ ಹೆಗ್ಗನ್ನವರ, ಬಾಗಲಕೋಟೆ ವಾಣಿಜ್ಯ ತೆರಿಗೆ(ಜಾರಿ) ಸಹಾಯಕ ಆಯುಕ್ತರಾದ ವಾಯ್ ಎಸ್ ಸಿಂಗನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ, ಶಿಂದೋಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿ.ಡಿ.ಟೋಪೋಜಿ, ತಾಲೂಕ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿಗಳಾದ ಶ್ರೀಪಾದ ಸಬನೀಸ್, ಪಂಚಾಯತ್ ರಾಜ್ ಇಂಜನೀಯರಿಂಗ್ ಉಪವಿಭಾಗ ಸವದತ್ತಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಎಚ್.ಕದರಾಪುರಕರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಭೂಷಿತ ಹಿರಿಯ ಛಾಯಾಗ್ರಾಹಕರಾದ ಪಿ.ಕೆ.ಬಡಿಗೇರ, ಪಂಚಾಯತ್ ರಾಜ್ ಇಂಜನೀಯರಿಂಗ್ ಉಪವಿಭಾಗದ ಸಹಾಯಕ ಅಭಿಯಂತರಾದ ಎಸ್.ಕೆ.ಚವ್ಹಾಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪ್ರಥಮ ದರ್ಜೆ ಸಹಾಯಕರಾದ ಪ್ರಶಾಂತ ಮೋಟೆಕರ, ಉಗರಗೋಳ ಶಿವಪ್ಪಯ್ಯ ಶಿವಯೋಗಿಗಳ ಮಠದ ಮುಖ್ಯಸ್ಥರಾದ ಶಿವಪ್ಪಯ್ಯ ಶಿವಯೋಗಿಗಳ ಮಠದ ಕಲ್ಲಪ್ಪ ಬೋರಕನ್ನವರ ಸೇರಿದಂತೆ ಮುಖ್ಯ ಅತಿಥಿಗಳು ಉಪಸ್ಥಿತರಿದ್ದರು.

 ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡುತ್ತ “ಮಕ್ಕಳನ್ನು ಪರಿಸರದಲ್ಲಿ ಆಡಲು ಬಿಡಿ.ಅವರು ಆಡುತ್ತ ಕಲಿಯುವಂತಾಗಲಿ. ಮಕ್ಕಳಿಗೆ ಮೋಬೈಲ್ ತೋರಿಸುತ್ತ ಊಟ ಮಾಡಿಸುವ ಬದಲು ಅವರಷ್ಟಕ್ಕೆ ಅವರು ಊಟ ಮಾಡುವುದನ್ನು ರೂಢಿಸಿರಿ.ಮಕ್ಕಳ ಆಸಕ್ತಿ ಅರಿತು ಅವರ ಶಿಕ್ಷಣ ರೂಪಿಸಿ”ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಮಾತನಾಡುತ್ತ “ಮಕ್ಕಳ ಶಿಕ್ಷಣದಲ್ಲಿ ಪಾಲಕರ ಭಾವನಾತ್ಮಕ ಬೆಂಬಲ ಮಹತ್ವದ್ದು. ನಿಮ್ಮ ಮಕ್ಕಳು ಏನಾಗಬೇಕು ಎಂಬುದನ್ನು ಅವರ ಆಸಕ್ತಿ ಅಭಿರುಚಿ ಗಮನಿಸಿ ನಿರ್ಧರಿಸಿ ಆ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡಿರಿ”ಎಂದು ಕಿವಿಮಾತು ಹೇಳಿದರು.

ವಾಣಿಜ್ಯ ತೆರಿಗೆ(ಜಾರಿ) ಸಹಾಯಕ ಆಯುಕ್ತರಾದ ವಾಯ್ ಎಸ್ ಸಿಂಗನ್ನವರ ಮಾತನಾಡಿ “ತೆಗ್ಗಿಹಾಳ ಜನ್ಮಭೂಮಿಯಾದರೆ ಮುನವಳ್ಳಿ ನನ್ನ ಕರ್ಮಭೂಮಿ.ಇಲ್ಲಿನ ವಾತಾವರಣದ ಜೊತೆಗೆ ನನ್ನ ಜೀವನದಲ್ಲಿ ಉನ್ನತ ಹುದ್ದೆಗೆ ಅವಕಾಶ ಒದಗಿತು.ಇಂದು ಮುನವಳ್ಳಿ ವಾಣಿಜ್ಯ ತೆರಿಗೆ ಕಟ್ಟುವುದರಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ”ಎಂದು ತಮ್ಮ ಇಲಾಖೆಯ ಜೊತೆಗೆ ಮಕ್ಕಳ ಶಿಕ್ಷಣದ ಕುರಿತು ಮಾತನಾಡಿದರು. 

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಪ್ರಶಾಂತ ಮೋಟೆಕರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ.ಕೆ.ಬಡಿಗೇರ, ವೈದ್ಯಾಧಿಕಾರಿಗಳಾದ ಶ್ರೀಪಾದ ಸಬನೀಸ್, ತಹಶೀಲ್ದಾರ ಎಂ.ಎನ್.ಹೆಗ್ಗನ್ನವರ.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡೀನ, ವಾಯ್.ಎಸ್.ಸಿಂಗನ್ನವರ, ಡಾ.ಆನಂದ ಪಾಂಡುರಂಗಿ ದಂಪತಿಗಳನ್ನು, ಮುನವಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಮೀನಾಕ್ಷಿ ಮುರನಾಳ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ ಪವಿತ್ರಾ ಪಾಟೋಳಿ, ಪಿ.ಯು.ಸಿಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ ಈರಣ್ಣ ಯರಗಟ್ಟಿ ಸೇರಿದಂತೆ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಜರುಗಿತು.

“ಮಗುವಿನ ಸಾಮರ್ಥ್ಯ ಮತ್ತು ಕುಶಾಗ್ರಮತಿಯನ್ನು ಅರ್ಥ ಮಾಡಿಕೊಳ್ಳುವುದು ಪಾಲಕರ ಕರ್ತವ್ಯ.ಅವರೊಂದಿಗೆ ಆಪ್ತವಾಗಿ ಮಾತನಾಡಬೇಕು. ಒತ್ತಡದಿಂದ ಹೊರಬರಲು ಮಾನಸಿಕ ಪ್ರೋತ್ಸಾಹ ಅವರಿಗೆ ನೀಡಿರಿ.ಮಗು ತನ್ನಷ್ಟಕ್ಕೆ ತಾನೇ ಊಟ ಮಾಡಲು ಬಿಡಿ.ಅದು ತನ್ನ ಕೈಯಿಂದ ತಾನೇ ಚಟುವಟಿಕೆಗಳನ್ನು ಮಾಡಿಕೊಳ್ಳಲು ಬಾಲ್ಯದಿಂದಲೇ ರೂಢಿಸಿರಿ”ಎಂದು ಮುಕ್ತಾನಂದ ಮಹಾಸ್ವಾಮಿಗಳು ಕರೆ ನೀಡಿದರು.

ಆಶೀರ್ವಚನ ನೀಡಿದ ಮುರುಘೇಂದ್ರ ಸ್ವಾಮಿಗಳು “ನಮ್ಮ ಜನ್ಮ ಭೂಮಿ ಮತ್ತು ಮಾತೃಭಾಷೆಯ ಪರಿಕಲ್ಪನೆ ಮಕ್ಕಳಿಗೆ ಮೂಡಿಸಿರಿ.ಸಂಸ್ಕಾರದ ಜೊತೆಗೆ ಸಂಸ್ಕೃತಿಯ ಅರಿವು ಮಕ್ಕಳಲ್ಲಿ ಮೂಡಲಿ.ಅಂಥಹ ಶಿಕ್ಷಣ ಮಕ್ಕಳಿಗೆ ರೂಢಿಸಿ”ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಿ.ಎಫ್ ಅರೆಬೇಡರ, ಎಸ್.ಎಂ.ಗೋಪಶೆಟ್ಟಿ, ಎಸ್.ಬಿ.ಹೂಲಿ, ಎಂ.ಬಿ.ಚಚಡಿ, ಐ.ಎಸ್.ಕಾಜಗಾರ, ಎನ್.ಬಿ.ಹಲಗತ್ತಿ, ಮಂಗ್ರಾಣಿ, ಚಕ್ರಸಾಲಿ, ಗದ್ದೆಪ್ಪನವರ, ಬಿಷ್ಟನ್ನವರ, ಪಟಾತ, ಕಾರಬಾರಿ, ಧೂಪದ, ಪಶುಪತಿಮಠ, ಎಂ.ಎಂ.ಕಟಿಗೆನ್ನವರ, ಎಚ್.ಎಫ್ ಗೋಟಿ, ಬಿ.ಐ.ಹರಳಿ, ಯು.ಬಿ.ಮೂಲಂಗಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ ವಾಗೇರಿ, ಅರ್ಟಗಲ್ ಸಿ.ಆರ್.ಪಿ.

ಜಿ.ಎಸ್.ಚಿಪ್ಪಲಕಟ್ಟಿ, ಸಿಂದೋಗಿ ಸಿ.ಆರ್.ಪಿ.ಎನ್.ಎ.ಹೊನ್ನಳ್ಳಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ, ಮಂಜುನಾಥ ಬೆಟಗೇರಿ, ಅನುರಾಧ ಬೆಟಗೇರಿ, ಹಂಪಣ್ಣವರ ಸೇರಿದಂತೆ ಗಜಾನನ ವಿದ್ಯಾವರ್ಧಕ ಮತ್ತು ಜನ ಕಲ್ಯಾಣ ಟ್ರಸ್ಟ(ರಿ)ದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಪಾಲಕರು.ಪೋಷಕರು ಉಪಸ್ಥಿತರಿದ್ದರು.

ಎಂ.ಎಂ.ಲಕ್ಕನ್ನವರ ನಿರೂಪಿಸಿದರು. ಎಸ್.ಎಚ್.ರಾಠೋಡ ಪುಷ್ಪಾರ್ಪಣೆ ನಿರೂಪಿಸಿದರು. ಧರ್ಮದರ್ಶಿಗಳಾದ ಯಶವಂತ ಗೌಡರ ಸ್ವಾಗತಿಸಿದರು.ಶ್ರೀಕಾಂತ ಮಿರಜಕರ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿ.ಎನ್.ಅಲಮನ್ನವರ ವರದಿವಾಚನ ಮಾಡಿದರು. ಪಿ.ಪಿ.ಶಾನುಭೋಗ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group