ಹಾಸನದ ಶ್ರೀ ಶಾರದ ಕಲಾಸಂಘದ ಕಲಾವಿದರು ಶ್ರೀ ಹೆಚ್.ಜಿ. ಗ೦ಗಾಧರ್ ನೇತೃತ್ವದಲ್ಲಿ ನಂಜನಗೂಡಿನ ಶಿವರಂಜಿನಿ ಸಾಂಸ್ಕೃತಿಕ ಕಲಾ ಬಳಗ ಇವರು ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ಮಹದೇಶ್ವರ ಚಿಟ್ಟದ ದೇವಸ್ಥಾನದ ರಂಗ ಮಂದಿರದಲ್ಲಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ದಿನಾಂಕ 21-6-2025 ರ ಶನಿವಾರ ರಾತ್ರಿ 8 ಗಂಟೆಗೆ ಎ.ಸಿ. ರಾಜು ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸುವರು.
ಉದ್ಘಾಟನೆ ಸುನೀಲ್ ಬೋಸ್, ಸಂಸದರು, ಚಾಮರಾಜನಗರ ಜಿಲ್ಲೆ, ಅಧ್ಯಕ್ಷತೆ ಹೆಚ್.ಸಿ. ಮಹದೇವಪ್ಪ, ಸಚಿವರು, ಸಮಾಜ ಕಲ್ಯಾಣ ಇಲಾಖೆ, ಗೌರವ ಉಪಸ್ತಿತಿ ಡಾ.ಎಂ. ಡಿ. ಸುದರ್ಶನ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು, ಗೊರೂರು ಅನಂತರಾಜು, ಸಾಹಿತಿಗಳು, ಹಾಸನ, ಯೋಗೇಶ್, ವಕೀಲರು, ಹಾಸನ, ಗೋವಿಂದೇಗೌಡ್ರು, ಕಲಾವಿದರು, ಹಾಸನ, ಸೋಮರಾಜ್, ಕಲಾವಿದರು, ನಂಜನಗೂಡು.