ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಬೆಳಗಾವಿ ವತಿಯಿಂದ ದಿ. ೨೩.೦೪.೨೦೨೨ ಶನಿವಾರದಂದು ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಮುಂಜಾನೆ ೧೦.೩೦.ಕ್ಕೆ ಬಸವಣ್ಣನವರ ವಚನಗಳಲ್ಲಿ ಮಾನವೀಯ ತತ್ವಗಳ ಕುರಿತು ಉಪನ್ಯಾಸವನ್ನು ಡಾ. ಅವಿನಾಶ ಕವಿ ಸಹಪ್ರಾಧ್ಯಾಪಕರು ಜೆ ಎನ್ ಎಂ ಸಿ ಕೆ ಎಲ್ ಇ ವಿ ವಿ ಬೆಳಗಾವಿ ಇವರು ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪ್ರೊ.ಸಿ ಜಿ.ಪಾಟೀಲ ನಿವೃತ್ತ ಪ್ರಾಧ್ಯಾಪಕರು ಆಗಮಿಸಲಿದ್ದಾರೆ. ಅತಿಥಿಗಳಾಗಿ ಎಂ. ವೈ. ಮೆಣಸಿನಕಾಯಿ ಗೌರವ ಕಾಯ೯ದಶಿ೯ ಕ ಸಾ ಪ ಬೆಳಗಾವಿ ಜಿಲ್ಲೆ ಉಪಸ್ಥಿತರಿರುವರು.
ಅಧ್ಯಕ್ಷತೆಯನ್ನು ಸುರೇಶ ಸಿದ್ದಪ್ಪ ಹಂಜಿ ಅಧ್ಯಕ್ಷರು ಕ ಸಾ ಪ ತಾಲೂಕಾ ಘಟಕ ಬೆಳಗಾವಿ ಅವರು ವಹಿಸಲಿದ್ದಾರೆ. ಕನ್ನಡ ಮನಸ್ಸುಗಳು ಆಗಮಿಸಲು ಕಾಯ೯ದಶಿ೯ ಕ ಸಾ ಪ ತಾಲೂಕ ಘಟಕ ಬೆಳಗಾವಿ ನಾಗಪ್ಪ ಬ ಕರವಿನಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.