ಹಳಕಟ್ಟಿ ಭವನದಲ್ಲಿ ಕಿನ್ನರಿ ಬೊಮ್ಮಯ್ಯ ಜಯಂತಿ ನಿಮಿತ್ತ ಉಪನ್ಯಾಸ ಕಾರ್ಯಕ್ರಮ

Must Read

ಬೆಳಗಾವಿ -ದಿನಾಂಕ 16-2-2025 ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ರವಿವಾರದ ಬೆಳಗಿನ ಸತ್ಸಂಗ ಕಾರ್ಯಕ್ರಮದಲ್ಲಿ ಅನುಭಾವಿ ಶರಣರಾದ ಕಿನ್ನರಿ ಬೊಮ್ಮಯ್ಯನವರ ಜೀವನ ಮತ್ತು ವಚನ ಸಂದೇಶ ಕುರಿತಂತೆ ಉಪನ್ಯಾಸ ಏರ್ಪಡಿಸಲಾಗಿತ್ತು.

ಪ್ರೌಢಶಾಲೆಯ ಶಿಕ್ಷಕಿಯರಾಗಿ ಸೇವೆಯಲ್ಲಿರುವ ಶರಣೆ ಶ್ರೀಮತಿ ಕಮಲಾ ಗಣಾಚಾರಿ ಕಿನ್ನರಿ ಬೊಮ್ಮಯ್ಯನವರ ಕುರಿತು ಸುದೀರ್ಘವಾಗಿ ಮಾತನಾಡಿದರು.

ಬಸವಣ್ಣನವರಿಂದ ಪ್ರೇರಿತರಾಗಿ ಆಂಧ್ರದ ಪುದೂರಿನಿಂದ ಬಂದು ಕಲ್ಯಾಣದಲ್ಲಿ ನೆಲೆನಿಂತು , ಅಕ್ಕಸಾಲಿಗ ವೃತ್ತಿಯೊಂದಿಗೆ ಕಿನ್ನರಿ ನುಡಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರು, ತ್ರಿಪುರಾಂತಕ ದೇವ ಎನ್ನುವ ಅಂಕಿತದೊಂದಿಗೆ ಒಟ್ಟು ಹದಿನೆಂಟು ವಚನಗಳನ್ನು ರಚಿಸಿದವರು. ಕಲ್ಯಾಣ ಕ್ರಾಂತಿಯ ನಂತರ ಚನ್ನಬಸವಣ್ಣನವರೊಂದಿಗೆ ಉಳವಿಗೆ ಹೋಗಿ ಬಿಜ್ಜಳನ ಸೈನ್ಯವನ್ನು ಚದುರಿಸಲು ಉಪಾಯ ಮಾಡಿದ್ದು, ಅಕ್ಕಮಹಾದೇವಿಯು ಕಲ್ಯಾಣಕ್ಕೆ ಬಂದ ಪ್ರಸಂಗದಲ್ಲಿ ಅಕ್ಕನನ್ನು ಪರೀಕ್ಷಿಸಿದ್ದು, ಹೀಗೆ ಶೂನ್ಯ ಸಂಪಾದನೆಯಲ್ಲಿ ಉಲ್ಲೇಖಿತ ಹಲವಾರು ಸನ್ನಿವೇಶಗಳಲ್ಲಿ ಕಿನ್ನರಿ ಬೊಮ್ಮಯ್ಯಗಳ ಪಾತ್ರ ಕುರಿತಂತೆ ಉಪನ್ಯಾಸದಲ್ಲಿ ಸ್ಮರಿಸಿದರು.

ಕಿನ್ನರಿ ಬೊಮ್ಮಯ್ಯನವರ ಬದುಕಿಗೆ ಸಂಬಂಧಿತ ಕತೆಗಳನ್ನು ಹೇಳುತ್ತ, ನಿಜಗುಣ ಶಿವಯೋಗಿಗಳು, ಪುರಂದರ ದಾಸರ ಪದಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿದ್ದು ಉಪನ್ಯಾಸದ ವಿಶೇಷತೆ.

ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ ಪ್ರಾಥ೯ನೆ ನಡೆಸಿಕೊಟ್ಟರು, ಬಿ.ಪಿ.ಜೇವಣಿ, ಜಯಶ್ರೀ ಚಾವಲಗಿ,ಅನಸೂಯಾ ಬಶೆಟ್ಟಿ,ಆನ೦ದ ಕಕಿ೯, ವಿ.ಕೆ.ಪಾಟೀಲ ವಚನಗಳನ್ನು ಪ್ರಸ್ತುತ ಪಡಿಸಿದರು

ಸ೦ಗಮೇಶ ಅರಳಿ ನಿರೂಪಿಸಿದರು, ಹಿರಿಯ ಶರಣೆ ಚ೦ಪಾವತಿ ತ೦ಗಡೆ ದಾಸೋಹ ಸೇವೆ ಸಲ್ಲಿಸಿದರು, ಶಂಕರ ಗುಡಸ ಅವರು ಉಪನ್ಯಾಸ ಕುರಿತಂತೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದರು.. ಶರಣ ಸದಾಶಿವ ದೇವರಮನಿ ಅವರೂ ಕೂಡ ಈ ಸಂದರ್ಭದಲ್ಲಿ ಶರಣ ಯುಗದ ಕೆಲವು ಘಟನೆಗಳನ್ನು ನೆನಪಿಸಿಕೊಂಡರು. ಬಸವರಾಜ ಬಿಜ್ಜರಗಿ, ವಿದ್ಯಾ ಕಕಿ೯, ಮಹಾದೇವಿ ತಿಗಡಿ, ಮಂಗಳಾ ಕಾಕತಿಕರ್, ಅಡವೇಶ ಇಟಗಿ, ಲಿಂಗಾಯತ ಸಂಘಟನೆಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group