ಸಿಂದಗಿ; ಸರ್ಕಾರಕ್ಕೆ ರಾಯಣ್ಣನ ಬಗ್ಗೆ ಅಭಿಮಾನವಿದ್ದರೆ, ನಿಜವಾಗಿ ಕನ್ನಡ ಭಾಷೆಯನ್ನು ಗೌರವಿಸುತ್ತಿದ್ದರೆ, ಸ್ವಾಭಿಮಾನವಿದ್ದರೆ ಸಂಗೊಳ್ಳಿ ರಾಯಣ್ಣ ಹುಟ್ಟಿ ಬೆಳೆದ ಬೆಳಗಾಂವ ನೆಲದಲ್ಲಿ ರೂಪುಗೊಂಡ ಸುವರ್ಣ ಸೌಧದ ಮುಂದೆ ಬೃಹತ್ ಪ್ರಮಾಣದ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣಗೊಳ್ಳಬೇಕು ಸರ್ಕಾರ ಈ ಕ್ರಮವನ್ನು ಕೂಡಲೇ ಜಾರಿ ಮಾಡಲೇಬೇಕು ಎಂದು ಪ್ರಖರವಾಗ್ಮಿ ನಿಖಿಲಕುಮಾರ ಮೌರ್ಯ ಆಗ್ರಹಿಸಿದರು.
ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕಾ ಕುರುಬರ ಸಂಘ ಹಮ್ಮಿಕೊಂಡಿರುವ ಕನಕದಾಸರ 534 ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಬಹುದಿನದ ಬೇಡಿಕೆಗೆ ರಾಜ್ಯ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬೇಡಿಕೆ ಈಡೇರಿಸದೆ ಹೋದಲ್ಲಿ ತಾವು ಖುರ್ಚಿ ಬಿಡುವವರೆಗೂ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನಕದಾಸರು ಕನ್ನಡ ಸಾಹಿತ್ಯದ ಮೇರು ಪರ್ವತ. ಕನಕದಾಸರು ತಮ್ಮ ದೊಡ್ಡ ಶಕ್ತಿಯಾದ ಭಕ್ತಿಯ ಮೂಲಕ ಭಗವಂತನನ್ನು ಒಲಿಸಿಕೊಂಡವರು. ಇಂಥವರು ತಮ್ಮ ಸೃಜನಶೀಲ ಶಕ್ತಿಯಿಂದ ಸಮಾಜದಲ್ಲಿನ ಅಜ್ಞಾನವನ್ನು ಬಡಿದ್ದೆಬ್ಬಿಸುವ ಕಾರ್ಯ ಮಾಡಿದವರು. ಅವರೊಬ್ಬ ಕರ್ನಾಟಕದ ಜಲಾಲುದ್ದಿನ ರೂಬಿ ಯಾಗಿದ್ದಾರೆ. ಅವರ ಜಯಂತಿ ಸಾರ್ಥಕವಾಗಬೇಕಾದರೆ ಅವರ ತತ್ವಗಳು ಅಕ್ಷರಶಃ ಪಾಲನೆಯಾಗಬೇಕು. ಸ್ವಾತಂತ್ರ್ಯ ಬಂದು 75 ವರ್ಷವಾದರು ಕೂಡಾ ಜಾತಿ ವ್ಯವಸ್ಥೆ ಇನ್ನು ಜೀವಂತವಾಗಿದೆ. ಈ ದೇಶ ಬದಲಾವಣೆ ಆಗುವುದು ಪ್ರಸ್ತುತ ಅನಿವಾರ್ಯವಿದೆ. ನಾವೆಲ್ಲ ಬದಲಾವಣೆಯಾಗದಿದ್ದಲ್ಲಿ ಈ ದೇಶದ ಸಂವಿಧಾನವು ನಮ್ಮಿಂದ ದೂರವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ಶಿಕ್ಷಣವಿದ್ದರೆ ಎಲ್ಲ ರಂಗಗಳಲ್ಲಿ ಹೋರಾಟ ನಡೆಸಲು ಶಕ್ತಿ ಬರುತ್ತದೆ ಕಾರಣ ಹಾಲುಮತ ಸಮಾಜದ ಜನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು.ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಬದುಕು ಸಾಗಿಸಬೇಕು ಎಂದು ಹೇಳಿದರು.
ಕುರುಬ ಸಮಾಜದ ಜಿಲ್ಲಾಧ್ಯಕ್ಷ ರಾಜು ಕಂಬಾಗಿ ಮಾತನಾಡಿ, ಹಾಲುಮತದ ಜನರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಹೊರತು ಅವರನ್ನು ರಾಜಕೀಯವಾಗಿ ಬೆಳೆಸುವಲ್ಲಿ ಅನೇಕ ಪಕ್ಷಗಳು ಮಲತಾಯಿ ದೋರಣೆ ತಾಳುತ್ತಿವೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಒಬ್ಬರಿಗಾದರು ಕುರುಬ ಸಮಾಜದ ಪ್ರತಿನಿಧಿಯನ್ನು ಶಾಸಕರಾಗಿ ಮಾಡಬೇಕು ಎಂದರು.
ದೊಡ್ಡಯ್ಯ ಆನೇಕಲ್, ಯುವ ಮುಖಂಡ ಸಿದ್ದು ಬುಳ್ಳಾ ಮಾತನಾಡಿದರು. ಗೋಳಸಾರದ ಶ್ರೀ ಅಭಿನವ ಪುಂಡಲಿಂಗ ಮಹಾರಾಜರು, ಹುಲಜಂತಿಯ ಶ್ರೀ ಮಳಿಂಗ ಮಹಾರಾಜರು, ಯರಜರಿಯ ಮಲ್ಲಾರಲಿಂಗ ಮಹಾಪ್ರಭುಗಳು, ಗುಬ್ಬೇವಾಡದ ಶ್ರೀ ಕನ್ನಯ್ಯ ಮುತ್ಯಒಡೆಯರ, ಸಿಂದಗಿಯ ಚಂದ್ರಾಮ ಪೂಜಾರಿ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು.
ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿವಾನಂದ ಪಾಟೀಲ ಸೋಮಜ್ಯಾಳ, ಬಿ.ಟಿ.ಸುಣಗಾರ, ಸುಜಾತಾ ಕಳ್ಳಿಮನಿ, ಪಿಎಸ್ಆಯ್ ನಿಂಗಣ್ಣ ಪೂಜಾರಿ, ವಿಠ್ಠಲ ಕೊಳ್ಳೂರ, ಶ್ರೀಶೈಲ ಕವಲಗಿ, ಡಾ. ಅನೀಲ ನಾಯಕ, ಸಂತೋಷ ಮಣಗಿರಿ, ಮಲ್ಲಿಕಾರ್ಜುನ ಸಾವಳಸಂಗ, ಸುದರ್ಶನ ಜಿಂಗಾಣಿ, ಎಮ್.ಎನ್.ಮದರಿ, ಶಿಲ್ಪಾ ಕುದರಗೊಂಡ, ಶ್ರೀಶೈಲಗೌಡ ಮಾಗಣಗೇರಿ, ರವಿಕಾಂತ ನಾಯ್ಕೋಡಿ, ವಿಠ್ಠಲ್ ನಾಯ್ಕೋಡಿ, ಕೆಂಚೆಪ್ಪ ಕತ್ನಳ್ಳಿ, ಸಿದ್ದಣ್ಣ ಹಿರೇಕುರುಬರ, ಮಾಳು ಪೂಜಾರಿ, ಅಮೋಘಿ ಹೂಗಾರ, ಶ್ರೀಶೈಲ ಬಿರಗೊಂಡ, ಕೆಂಚೆಪ್ಪ ಪೂಜಾರಿ, ರಾಜೇಂದ್ರ ಪೂಜಾರಿ, ಎಮ್.ಎನ್.ಪಾಟೀಲ, ಸಿದ್ದು ಕೆರಿಗೊಂಡ ಸೇರಿದಂತೆ ಅನೇಕರು ಇದ್ದರು.
ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ನಿರೂಪಿಸಿದರು, ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ ಸ್ವಾಗತಿಸಿದರು, ರಾಜು ಹಿರೇಕುರುಬರ ವಂದಿಸಿದರು.
ಮೆರವಣಿಗೆ-ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ಬಸವೇಶ್ವರ ವೃತ್ತದಿಂದ ಡಾ.ಅಂಬೇಡ್ಕರ ವೃತ್ತ, ತೊಂಟದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆಯ ಮಾರ್ಗವಾಗಿ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪಿತು. ಮಾಜಿ ಸಚಿವಎಚ್.ಎಮ್.ರೇವಣ್ಣ ಮೆರವಣಿಗೆಗೆ ಚಾಲನೆ ನೀಡಿದರು.