ಸಿಂದಗಿ: ಬ್ರಿಟೀಷರ ಸಂಕೋಲೆಯಿಂದ ಅಹಿಂಸಾತ್ಮಕವಾಗಿ ಭಾರತಕ್ಕೆ ಸ್ವಾತಂತ್ರ್ಯ ವನ್ನು ದೊರಕಿಸಿಕೊಟ್ಟ ಮಹನೀಯರಲ್ಲಿ ಮೊದಲಿಗರಾದ ಮಹಾತ್ಮಾ ಗಾಂಧಿಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀಜಿಯವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸೋಣ ಎಂದು ಕಸಾಪ ಅದ್ಯಕ್ಷ ವೈ.ಸಿ.ಮಯೂರ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಾಯಾಲಯದಲ್ಲಿ ಹಮ್ಮಿಕೊಂಡ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ, ಯೋಜನಾ ಪ್ರಾಧಿಕಾರದ ಸದಸ್ಯ ಅಂಬ್ರೀಶ ಚೌಗಲೆ, ಆರೋಗ್ಯ ಸಮಿತಿ ಸದಸ್ಯ ಶಾಂತೂ ರಾಣಾಗೋಳ, ಪತ್ರಕರ್ತರ ಸಂಘದ ಅದ್ಯಕ್ಷರಾದ ಪಂಡಿತ ಯಂಪೂರೆ, ಆನಂದ ಶಾಬಾದಿ, ಮುಖಂಡ ಶಿವಾಜಿ ಹೊಟಗರ, ಜೈಬೀಮ ತಳಕೇರಿ ಇದ್ದರು.

