Homeಸುದ್ದಿಗಳುರಾಯಚೂರಿನಲ್ಲಿ ಬೆಳಕು ಸಂಭ್ರಮ

ರಾಯಚೂರಿನಲ್ಲಿ ಬೆಳಕು ಸಂಭ್ರಮ

ರಾಯಚೂರು : ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ )ವತಿಯಿಂದ ದಿನಾಂಕ :24-12-2023ರಂದು ರಾಜ್ಯ ಮಟ್ಟದ ಬೆಳಕು ಸಂಭ್ರಮ  ನಗರದ ವೀರ ಶೈವ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ರೆಡ್ಡಿ ಕಿರಿಯ ಪ್ರಾಥಮಿಕ ಶಾಲೆ ಸಿಂಧನೂರು ಹಾಗು ಪಿಂಚಣಿ ವಂಚಿತ ನೌಕರರ ಸಂಘದ ಮಹಿಳಾ ಸದಸ್ಯರಾಗಿರುವ ಶ್ರೀಮತಿ ರೇಷ್ಮಾ ಕಂದಕೂರರವರಿಗೆ ರಾಷ್ಟ್ರ ಮಟ್ಟದ ಕಾವ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರ ಬಾಬು, ಹಿರಿಯ ಪತ್ರ ಕರ್ತರಾದ ಭೀಮಾರಾಯ ಹದ್ದಿನಾಳ, ಚನ್ನಬಸವ ಬ್ಯಾಗಲವಾಡ, ಅಭಯಕೃಷ್ಣ, ಅಭಯಶೀಲಾ, ನವನೀತ, ಸುರಕ್ಷಾ ಆಸ್ಪತ್ರೆ ವೈದ್ಯ ಡಾ. ಹರೀಶ, ಎರ್ರಿ ಸ್ವಾಮಿ, ದೊಡ್ಡಪ್ಪ ಪೂಜಾರಿ, ಮಾರುತಿ ಬಡಿಗೇರ,ಬಸವರಾಜ್ ಸೇರಿದಂತೆ ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group