ಮೈಸೂರು ಜಿಲ್ಲೆಯ ಕೆ.ಆರ್.ನಗರದ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಇತ್ತೀಚೆಗೆ ನಿಧನರಾದ ಬೆಳಕಿನ ಕವಿ ಚನ್ನವೀರ ಕಣವಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಚನ್ನವೀರ ಕಣವಿ ಅವರು ಕನ್ನಡ ಕಾವ್ಯಲೋಕದ ವಿಶಿಷ್ಟ ಬಗೆಯ ಕವಿ.ಸುಮಾರು ೩೫ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.ಈ ಪೈಕಿ ೧೬ ಕವನ ಸಂಕಲನಗಳು, ಎರಡು ಮಕ್ಕಳ ಕಥಾಸಂಕಲನಗಳು, ಐದು ಲೇಖನ ಸಂಕಲನ ಗಳಾಗಿವೆ. ಇವರ ಗೀತೆಗಳು ಸರಳ ಭಾಷೆಯಲ್ಲಿದ್ದು ಓದುಗರ ಮನಗೆದ್ದಿವೆ. ೧೯೮೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ.
೧೯೯೬ ರಲ್ಲಿ ಹಾಸನದಲ್ಲಿ ನಡೆದ ಅಖಿಲ ಭಾರತೀಯ ಕನ್ಬಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾದ ಚನ್ನವೀರ ಕಣವಿ ಅಬರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವುಂಟಾಗಿದೆ ಎಂದು ನುಡಿದರು. ನಾಡೋಜ ಚನ್ನವೀರ ಕಣವಿ ಅವರಿಗೆ ರಾಷ್ಟ್ರ ಕವಿ ಗೌರವ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಅವರು ಒತ್ತಾಯಿಸಿದರು.
ಚನ್ನವೀರ ಕಣವಿ ಅವರ ಭಾವಚಿತ್ರದ ಮುಂದೆ ಮೋಂಬತ್ತಿ ಬೆಳಗಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು. ಭಗತ್ ಸಿಂಗ್ ಯೂತ್ ಫೌಂಡೇಶನ್ ಪದಾಧಿಕಾರಿಗಳಾದ ರಕ್ಷಿತ್, ಕೃಷ್ಣಯ್ಯ, ಚೆಲುವನ್,ಅನಿಲ್,ಜಗದೀಶ್,ಅಮಿತ್, ಗಿರೀಶ್,ಆದಿ,ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ಉತ್ತಮ ವಾದ ಕೆಲಸವನ್ನು ಭಗತ್ ಸಿಂಗ್ ಯೂತ್ ಪೌಂಡೇಷನ್ ಮಾಡುತ್ತಿದೆ ಸಾಧ್ಯವಾದವರು ಕೈ ಜೋಡಿಸಿ