ಬೆಳಗಾವಿ: ಹಲಸಂಗಿಯ ಮಧುರಚೆನ್ನ ಪ್ರತಿಷ್ಠಾನ ನೀಡುವ ೨೦೧೯ ನೇ ಸಾಲಿನ ಮಧುರಚೆನ್ನ ಕಾವ್ಯ ಪ್ರಶಸ್ತಿಗೆ ಬೆಳಗಾವಿಯ ಯುವಕವಿ ನದೀಮ ಸನದಿ ಅವರ “ಹುಲಿಯ ನೆತ್ತಿಗೆ ನೆರಳು” ಕವನ ಸಂಕಲನ ಆಯ್ಕೆಯಾಗಿದೆ.
ನದೀಮ ಅವರು ಶಿಂದೊಳ್ಳಿ ಗ್ರಾಮದವರಾಗಿದ್ದು ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಇವರ ಇದೇ ಕೃತಿಗೆ ಈಗಾಗಲೇ ಹಾಸನದ ಕಾವ್ಯಮಾಣಿಕ್ಯ ರಾಜ್ಯ ಪ್ರಶಸ್ತಿ ಹಾಗೂ ಸೇಡಂ ನ ಅಮ್ಮ ಪ್ರಶಸ್ತಿ ಪ್ರಾಪ್ತವಾಗಿದೆ.
ಪ್ರಶಸ್ತಿಯು ೧೦,೦೦೦ ರೂ ನಗದು ಹಾಗೂ ಗೌರವ ಸನ್ಮಾನವನ್ನು ಒಳಗೊಂಡಿದೆ. ಇದೇ ತಿಂಗಳ ೧೫ ರಂದು ಹಲಸಂಗಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸನದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಚಾಲಕ ಸುಮೀತ ಮೇತ್ರಿ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.