Homeಸುದ್ದಿಗಳುಪೈಲ್ವಾನ್ ಎಂ.ಮಹದೇವ ಪ್ರಸಾದ್ ಅವರಿಗೆ ದಿ.ಉಸ್ತಾದ್ ಕರಗಯ್ಯ ಪ್ರಶಸ್ತಿ

ಪೈಲ್ವಾನ್ ಎಂ.ಮಹದೇವ ಪ್ರಸಾದ್ ಅವರಿಗೆ ದಿ.ಉಸ್ತಾದ್ ಕರಗಯ್ಯ ಪ್ರಶಸ್ತಿ

ಮೈಸೂರು -ಮಾಜಿ ಮೇಯರ್ ಪೈಲ್ವಾನ್ ಪುರುಷೋತ್ತಮ್ ಅವರ ಅಭಿಮಾನಿ ಬಳಗದ ವತಿಯಿಂದ ನ.೧೭ರಂದು ದೊಡ್ಡಕೆರೆ ಮೈದಾನದ ದಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ ೪೨ ಜೊತೆ ರಾಷ್ಟ್ರ ಮಟ್ಟದ ಅಮೋಘ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಅಶೋಕಪುರಂನ ಪೈಲ್ವಾನ್ ಮಹದೇವ ಪ್ರಸಾದ್ ಎಂ. ಅವರು ದಿ. ಉಸ್ತಾದ ಕರಗಯ್ಯ ಪ್ರಶಸ್ತಿ ಗೆದ್ದಿದ್ದಾರೆ.

ಬೆಂಗಳೂರಿನ ಪೈಲ್ವಾನ್ ಗಣೇಶ್ ಅವರನ್ನು ಪರಾಭವಗೊಳಿಸಿ, ದಿ.ಉಸ್ತಾದ್ ಕರಗಯ್ಯರವರ ಪ್ರಶಸ್ತಿ ಹಾಗೂ ಫಲಕವನ್ನು ಪಡೆದು ಪೈಲವಾನ್ ಮಹದೇವ ಪ್ರಸಾದ ಜಯಶೀಲರಾಗಿರುತ್ತಾರೆ. ಪೈಲ್ವಾನ್ ಮಹದೇವ ಪ್ರಸಾದ್ ಅವರು ಅಶೋಕಪುರಂ ೧೨ನೇ ಕ್ರಾಸ್‌ನ ನಿವಾಸಿ ಮಹದೇವು ಹಾಗೂ ಲೇ.ಮಹದೇವಮ್ಮನವರ ಪುತ್ರ. ಅಶೊಕಪುರಂ ಚಿಕ್ಕಗರಡಿ ಪೈಲ್ವಾನ್ ಬಾಲಣ್ಣನವರ ಶಿಷ್ಯರು.

RELATED ARTICLES

Most Popular

error: Content is protected !!
Join WhatsApp Group