ಬೆಟಗೇರಿ ಗ್ರಾಮದ ಹಾದಿ ಬಸವಣ್ಣ ನೂತನ ಗುಡಿ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ,ಗಣ್ಯರಿಗೆ ಸತ್ಕಾರ
ಬೆಟಗೇರಿ: ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಸಂಸತ್ತು ರಚನೆ ಮಾಡಿದ್ದರು. ಬಸವಣ್ಣನವರು ಕಾಯಕ, ದಾಸೋಹ, ಪ್ರಸಾದ ತತ್ವಗಳನ್ನು ಸಾರಿ, ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿ ಇಂದಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವನಗರದಲ್ಲಿ ಫೆ.14ರಂದು ಹಾದಿ ಬಸವಣ್ಣ ನೂತನ ಗುಡಿ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಮಾತನಾಡಿ. ಮಹಾತ್ಮರು, ಶರಣರು ದಾಸೋಹದ ಕಲ್ಪನೆ ನಮಗೆ ಹಾಕಿಕೊಟ್ಟಿದ್ದಾರೆ. ಶತ ಶತಮಾನದಿಂದಲೂ ದಾಸೋಹ ಪರಂಪರೆ ನಡೆದುಕೊಂಡು ಬಂದಿದೆ. ಮಾನವಕುಲ ಒಂದೆಯಾಗಿದ್ದು, ಜಾತಿ, ಮತ, ಭೇದ ಭಾವ ಮಾಡದೇ ಎಲ್ಲರೂ ಒಂದಾಗಿ ಇರೋಣ ಎಂದರು.
ಬೆಟಗೇರಿ ಗ್ರಾಮದ ನಾಗರಿಕರು, ಗಣ್ಯರು, ಮುಖಂಡರು ಎಲ್ಲರೂ ಒಂದಾಗಿ ಗ್ರಾಮದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಪರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಈ ಭಾಗದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು, ಸಂಸದರ ಜೊತೆ ಇಲ್ಲಿ ಸಮುದಾಯ ಭವನ ನಿರ್ಮಾಣ ಕುರಿತು ಚರ್ಚಿಸಿ, ಅವರ ಅನುದಾನದಡಿಯಲ್ಲಿ ಭವನ ನಿರ್ಮಿಸಿಕೊಡುವುದಾಗಿ ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ ಭರವಸೆ ನೀಡಿದರು.
ಸುಣಧೋಳಿ ಅಭಿನವ ಶಿವಾನಂದ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಸ್ಥಳೀಯ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಅಧ್ಯಕ್ಷತೆ ವಹಿಸಿದ್ದರು. ಶ್ರೀಗಳನ್ನು, ಗಣ್ಯರು, ಅತಿಥಿಗಳನ್ನು ಈ ವೇಳೆ ಇಲ್ಲಿಯ ಬಸವಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಆಯೋಜಕರು ಶಾಲು ಹೊದಿಸಿ ಸತ್ಕರಿಸಿದರು.

ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಉಪಾಧ್ಯಕ್ಷ ಬಸವಂತ ಕೋಣಿ, ಈಶ್ವರ ಮುಧೋಳ, ಬಾಳಪ್ಪ ತಡಸಿ, ಈರಪ್ಪ ದೇಯಣ್ಣವರ, ವಿಠಲ ಕೋಣಿ, ಶ್ರೀಕಾಂತ ಕರೆಪ್ಪಗೋಳ, ಮಾಯಪ್ಪ ಬಾಣಸಿ, ಸುಭಾಷ ಕರೆಣ್ಣವರ, ಅಡಿವೆಪ್ಪ ಕತ್ತಿ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ರಮೇಶ ಬ್ಯಾಗಿ, ಬಸಪ್ಪ ಗೌಡರ, ಅಜ್ಜಪ್ಪ ಪೇದಣ್ಣವರ, ಪರಪ್ಪ ಗಿರೆಣ್ಣವರ, ರಾಮಣ್ಣ ಮುಧೋಳ, ಸ್ಥಳೀಯ ಹಾದಿ ಬಸವಣ್ಣ ಗುಡಿ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಕರು, ಗಣ್ಯರು, ಗ್ರಾಮಸ್ಥರು ಇದ್ದರು.