Homeಸುದ್ದಿಗಳುಜನತಾ ಜಲಧಾರೆ ಯಶಸ್ವಿಗೊಳಿಸಿ - ಗೊಲ್ಲಾಳಪ್ಪಗೌಡ ಪಾಟೀಲ

ಜನತಾ ಜಲಧಾರೆ ಯಶಸ್ವಿಗೊಳಿಸಿ – ಗೊಲ್ಲಾಳಪ್ಪಗೌಡ ಪಾಟೀಲ

ಸಿಂದಗಿ: ಜಾತ್ಯತೀತ ಜನತಾದಳ( ಎಸ್) ರಾಷ್ಟ್ರೀಯ ನಾಯಕ ಎಚ್.ಡಿ.ದೇವೆಗೌಡ ನಾಯಕತ್ವದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಡೀ ರಾಜ್ಯಾದ್ಯಂತ ಹಮ್ಮಿಕೊಂಡ “ಜನತಾ ಜಲಧಾರೆ” ಯಾತ್ರೆಯ ರಥವು ಏ.24 ರಂದು 11 ಗಂಟೆಗೆ ಪಟ್ಟಣದ ಮಹಾತ್ಮಾಗಾಂದೀಜಿ ವೃತ್ತದಲ್ಲಿ ಸ್ವಾಗತಿಸಲಾಗುವುದು ಕಾರಣ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೆ ಕಾರಣೀಕರ್ತರಾಗಬೇಕು ಎಂದು ತಾಲೂಕಾಧ್ಯಕ್ಷ ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಂಡಿ ತಾಲೂಕಿನ ಭೀಮಾ ತೀರದಿಂದ ಸಿಂದಗಿ ಪಟ್ಟಣದ ಆಗಮಿಸಲಿದ್ದು ಜಲಧಾರೆಯ ರಥವನ್ನು ಸ್ವಾಗತಿಸುವ ಮೂಲಕ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ಮೂಲಕ ಬೀಳ್ಕೊಡಲಾಗುವುದು ಎಂದು ಹೇಳಿದ ಅವರು, ರಾಜ್ಯದಲ್ಲಿ ಸ್ವಲ್ಪ ದಿನಗಳ ಕಾಲ ಅಧಿಕಾರ ಮಾಡಿದ ಜಾತ್ಯಾತೀತ ಜನತಾದಳ ಪಕ್ಷ ಮುಖಂಡರಾದ ಮಾಜಿ ಪ್ರಧಾನಿ ದೇವೆಗೌಡರು ಗುತ್ತಿಬಸವಣ್ಣ ಏತನೀರಾವರಿಗೆ ಚಾಲನೆ ನೀಡಿದಂಥವರು ಅಲ್ಲದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಪ್ರಗತಿಪರ ಯೋಜನೆಗಳನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮತ್ತು ರಾಜ್ಯದ ರೈತರ ಹಿತದೃಷ್ಟಿಯಿಂದ ನೀರಾವರಿಗಾಗಿ ಮೂರು ಲಕ್ಷ ಕೋಟಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲು ಮತ್ತು ರೈತರ ಜಮೀನಿಗೆ ನೀರು ನೀಡುವ ಪ್ರತಿಯೊಂದು ಹಳ್ಳಿಯ ರೈತರ ಜಮೀನುಗಳಿಗೆ ಸಮಗ್ರ ನೀರಾವರಿಯಾಗಬೇಕು ಎಂಬ ಸಂಕಲ್ಪ ಹೊತ್ತುಕೊಂಡು ಈ ಜನತಾ ಜಲಧಾರೆ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದರು.

ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಸೋಮಜ್ಯಾಳ ಮಾತನಾಡಿ, ಈ ಕ್ಷೇತ್ರದಲ್ಲಿ 147 ಕಿಮೀ ಗುತ್ತಿಬಸವಣ್ಣಾ ಏತನೀರಾವರಿ ಕಲ್ಪಿಸಿಕೊಟ್ಟಿದ್ದಾರೆ ಆದರೆ 8 ಮೋಟಾರ ಪಂಪಸೆಟ್ಟುಗಳಲ್ಲಿ ಬರೀ 3 ಮೋಟಾರ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಅದಕ್ಕೆ ಕಾಲುವೆಗೆ ನೀರು ಹರಿಸುತ್ತಿಲ್ಲ ಎನ್ನುವ ಅಧಿಕಾರಿಗಳ ಉತ್ತರವಾಗಿದೆ ಆ ಕಾರಣಕ್ಕೆ ಕಳೆದ ಕೆಲ ದಿನಗಳಿಂದ ತಾಂಬಾ ಗ್ರಾಮದಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟಕ್ಕೆ ಆಡಳಿತರೂಢ ಸರಕಾರದ ಯಾವೊಬ್ಬ ಸಚಿವರು ಭೇಟಿ ನೀಡದಿರುವುದು ಖೇದಕರ ಸಂಗತಿ. ಮಾಜಿ ಸಿಎಂ ಕುಮಾರಣ್ಣ ಅವರ ನೇತೃತ್ವದಲ್ಲಿ ಆ ಹೋರಾಟಕ್ಕೆ ಬೆಂಬಲ ನೀಡಿದ್ದಾಗಿದೆ ಅಲ್ಲದೆ ಪ್ರತಿ ಹಂತದಲ್ಲಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ. ಒಟ್ಟಾರೆ ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಕುಡಿವ ನೀರಿಗೆ ಸಮಸ್ಯೆ ತಲೆದೋರಬಾರದು ಎನ್ನುವ ನಿಟ್ಟಿನಲ್ಲಿ ಎಲ್ಲ ನದಿಗಳ ಜೋಡಣೆ ಕುರಿತಾಗಿ ಚಿಂತನೆ ನಡೆಸಿದ್ದಾರೆ ಮತ್ತು ನದಿ, ಹಳ್ಳ, ಕೆರೆಗಳಲ್ಲಿ ನೀರು ಸಂಗ್ರಹವಾಗಬೇಕು ಇದರಿಂದ ಅಂರ್ತಜಲ ಹೆಚ್ಚಿಸುವ ಸಲುವಾಗಿ ಈ ಆಂದೋಲನದಿಂದ ಜಾಗೃತಿಗೊಳ್ಳುತ್ತದೆ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಭಾಗದ ಜನತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಪ್ರಕಾಶ ಹಿರೇಕುರಬರ, ಝುಲ್ಪಿಕರ ಅಂಗಡಿ, ಎಂ.ಎನ್.ಪಾಟೀಲ, ಅಕ್ಬರ ಮುಲ್ಲಾ, ದಾದಾಪೀರ ಅಂಗಡಿ, ಮಹಾಂತೇಶ ಪಾರಗೊಂಡ, ಮಹಿಬೂಬ ಗಿರಣಿ ಸೇರಿದಂತೆ ಅನೇಕರಿದ್ದರು.

RELATED ARTICLES

Most Popular

error: Content is protected !!
Join WhatsApp Group