Homeಸುದ್ದಿಗಳುಡಾ. ವ್ಹಿ.ಬಿ.ಸಣ್ಣಸಕ್ಕರಗೌಡ್ರಗೆ “ಮಹಾಕವಿ ಕಾಳಿದಾಸ ಪ್ರಶಸ್ತಿ”

ಡಾ. ವ್ಹಿ.ಬಿ.ಸಣ್ಣಸಕ್ಕರಗೌಡ್ರಗೆ “ಮಹಾಕವಿ ಕಾಳಿದಾಸ ಪ್ರಶಸ್ತಿ”

ಬಾದಾಮಿ : ಬಾದಾಮಿಯಲ್ಲಿ ನಿರ್ಮಾಣವಾಗಿರುವ ಎಸ್.ಎಫ್.ಹೊಸಗೌಡ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಎಸ್.ಎಫ್.ಹೊಸಗೌಡ್ರ ಪ್ರತಿಷ್ಠಾನ ಬಾದಾಮಿ ಇವರು ಯುವ ಸಾಹಿತಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಷಯದ ಅತಿಥಿ ಉಪನ್ಯಾಸಕ ಡಾ.ಸಣ್ಣ ಸಕ್ಕರಗೌಡರಿಗೆ ಮಹಾಕವಿ ಕಾಳಿದಾಸ ಪ್ರಶಸ್ತಿ ನೀಡಿ ಗೌರವಿಸಿದರು.

ವಿದ್ವತ್ ಪ್ರಪಂಚದಲ್ಲಿ ಗುರುತಿಸಿಕೊಂಡು ಸಂಶೋಧಕರಾಗಿ, ಕವಿಯಾಗಿ, ವಿಮರ್ಶಕರಾಗಿ, ಚಿಂತಕರಾಗಿ ೪೦೦ಕ್ಕೂ ಹೆಚ್ಚು ಲೇಖನ, ೧೮ ಕೃತಿಗಳ ಸಾಹಿತ್ಯದ ರಾಶಿ ಹಾಕಿದ ತೆರೆಮರೆಯ, ನೆಲಮೂಲ ಸಾಂಸ್ಕೃತಿಕ ಗ್ರಾಮೀಣ ಪ್ರತಿಭೆ ಡಾ.ವ್ಹಿ.ಬಿ.ಸಣ್ಣಸಕ್ಕರಗೌಡ್ರ ಅವರನ್ನು ಗುರುತಿಸಿ ಅವರಿಗೆ ಎಸ್.ಎಫ್.ಹೊಸಗೌಡ್ರ ಪ್ರತಿಷ್ಠಾನದ ಅಧ್ಯಕ್ಷರಾದ ಮಹೇಶ ಹೊಸಗೌಡ್ರ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಬಾದಾಮಿಯ ಎಲ್ಲ ಪತ್ರಿಕೆಯ ವರದಿಗಾರರು ಹಾಗೂ ಖ್ಯಾತ ವೈದ್ಯ ಡಾ.ಕರವೀರಪ್ರಭು ಕ್ಯಾಲಕೊಂಡ ಇತರರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group