ಕಲ್ಲೋಳಿ ಗ್ರಾಮದೇವತೆ ಎಲ್ಲರನ್ನೂ ಸಮೃದ್ಧವಾಗಿ ಇಡಲಿ – ಈರಣ್ಣ ಕಡಾಡಿ

Must Read

ಮೂಡಲಗಿ: ಕರೋನಾ ಕಾರಣದಿಂದಾಗಿ ಪ್ರತಿ 5 ವರ್ಷಕ್ಕೊಮ್ಮೆ ಜರಗುವ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆಯು ಈ ಬಾರಿ 10 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದ್ದು, ಸುದೈವದಿಂದ ಈ ವರ್ಷ ಜಾತ್ರೆಗೆ ಒಳ್ಳೆಯ ಮಳೆಯಾಗಿದ್ದು, ಉತ್ತಮ ಬೆಳೆ ಬರುವ ಲಕ್ಷಣಗಳಿದ್ದು, ರೈತರ ಫಸಲಿಗೆ ಉತ್ತಮ ಬೆಲೆ ಕೊಟ್ಟು ದೇವರು ನಮ್ಮನೆಲ್ಲ ಆರ್ಥಿಕವಾಗಿ ಸದೃಢ ಇಡಲಿ ಎಂದು ಗ್ರಾಮದೇವತೆಯಲ್ಲಿ ಪ್ರಾರ್ಥಿಸುವುದಾಗಿ ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.

ರವಿವಾರ ಆ-17 ರಂದು ಕಲ್ಲೋಳಿ ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮುಗಳ್ಯಾರ ಒಣಿಯಲ್ಲಿ ಪ್ರತಿಷ್ಠಾಪಿಸಲಾದ ದೇವಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ದ್ಯಾಮವ್ವ ದೇವಿ ಟ್ರಸ್ಟ್ ಕಮಿಟಿಯಿಂದ ಸಂಸದರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಾಳಪ್ಪಾ ಬಡಿಗೇರ, ಶ್ರೀಶೈಲ ತುಪ್ಪದ, ಮಲ್ಲಪ್ಪ ಖಾನಗೌಡ್ರ, ಮಹಾಂತೇಶ ಪಾಟೀಲ, ಹಣಮಂತ ಖಾನಗೌಡ್ರ, ಪ್ರಕಾಶ ಪತ್ತಾರ, ಬಸವರಾಜ ಬಡಿಗೇರ, ಶಂಕರ ಖಾನಗೌಡ್ರ, ಶಿವಾನಂದ ಕಡಾಡಿ, ಮಹಾಂತೇಶ ಜಗದಾಳೆ, ಪರಪ್ಪ ಗಿರೆಣ್ಣವರ, ಬಾಳಪ್ಪ ಜಗದಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group