Homeಸುದ್ದಿಗಳುಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕುರಿತು ಸಭೆ

ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕುರಿತು ಸಭೆ

ಸಿಂದಗಿ: ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ತೊಂದರೆಯಾದರೆ ಆಡಳಿತಾರೂಢ ಶಾಸಕರ ತಲೆ ಮೇಲೆ ಹೊರೆ ಬೀಳುತ್ತದೆ ಅದಕ್ಕೆ ಇದ್ದ ಸೌಕರ್ಯಗಳಲ್ಲಿಯೇ ನಿರ್ವಹಣೆ ಮಾಡಲು ಅವಕಾಶವಿದೆ ಅಧಿಕಾರಿಗಳು ಸ್ಥಾನಿಕವಾಗಿದ್ದು ಮೇ ತಿಂಗಳವರೆಗೆ ಬಹಳ ಜವಾಬ್ದಾರಿಯುತವಾಗಿ ನಿಗಾ ವಹಿಸಬೇಕೆನ್ನುವ ಆದೇಶವಲ್ಲ ಇದು ಮನವಿ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಕ್ಷೇತ್ರದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕುರಿತು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರಿನ ಸಲುವಾಗಿ ಕಾಲುವೆಗೆ ನೀರು ಬಿಡಲಾಗುತ್ತದೆ ಕಾರಣ ಎಲ್ಲ ಗ್ರಾಪಂಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಪ್ರತಿ 15 ದಿನಕ್ಕೊಮ್ಮೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ವರದಿ ಸಲ್ಲಿಸಬೇಕು ಇದರ ನಿರ್ವಹಣೆಯನ್ನು  ಅಧಿಕಾರಿಗಳು ಬಹಳ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿದ ಅವರು, ಸರಕಾರ ಎಂವ್ಹಿಎಸ್ ಸ್ಕೀಂ ಮಾಡಿದ್ದಾರೆ ಸರಿಯಾದ ಅದರ ಸದುಪಯೋಗವಾಗದೆ ಸರಕಾರದ ಯೋಜನೆ ಪೋಲಾಗುತ್ತಿದೆ. 

ಬೋರಗಿ, ಪುರದಾಳ, ಗುಬ್ಬೇವಾಡ ಗ್ರಾಮಗಳಿಗೆ ಸಾಸಾಬಾಳ ಗ್ರಾಮದಿಂದ ಪೂರೈಕೆಯಾಗುತ್ತಿರುವ ನೀರು ಶುದ್ಧಿಕರಣವಾಗದೇ ಕಲುಶಿತವಾಗಿ ಬರುತ್ತಿರುವುದರಿಂದ ಜನರು ನೀರು ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ ಯಂಕಂಚಿ ಗ್ರಾಮದಲ್ಲಿ ಸರಕಾರದಿಂದ 3 ಬಾವಿಗಳನ್ನು ತೋಡಲಾಗಿದ್ದು ಸರಿಯಾದ ನಿರ್ವಹಣೆ ಕೊರತೆಯಿಂದ ತೊಂದರೆಯಾಗುತ್ತಿದೆ. ಹಂದಿಗನೂರ ಗ್ರಾಮದಲ್ಲಿ 50 ಸಾವಿರ ಲೀ. ಟ್ಯಾಂಕರವಿದ್ದು ತಾಂಡಾಕ್ಕೆ ನೀರಿನ ತೊಂದರೆಯುಂಟಾಗಿದೆ ಇದೆ ರೀತಿ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ನೀರಿದ್ದರು ಸರಿಯಾದ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗುತ್ತಿದೆ ಅದಕ್ಕೆ ಇದಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಯರಗಲ್, ಗಬಸಾವಳಗಿ, ಬಂದಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಹಾಪುರ ಅವರು ಪಂಚಾಯತಿಗೆ ಬರುವುದಿಲ್ಲ ಅವರು ಎಂತವರು ಇದ್ದಾರೆ ಪೋಟೋ ಕೊಡಿ ಶಾಸಕರೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ ಅಲ್ಲದೆ ಎಲ್ಲ ಪಿಡಿಓಗಳು ಪಂಚಾಯತಿಗಳಲ್ಲಿ  ಸ್ಥಾನಿಕವಾಗಿ ಇರುವುದಿಲ್ಲ ಎನ್ನುವ ಕ್ಷೇತ್ರದೆಲ್ಲೆಡೆ ದೂರುಗಳು ಕೇಳಿ ಬರುತ್ತಿದ್ದು ಮುಂದೆ ಇಂತಹ ಪ್ರಮಾದ ನಡೆಯಕೂಡದು ಎಂದು ತಾಪಂ ಅಧಿಕಾರಿ ಅಗ್ನಿ ಅವರಿಗೆ ವಾರ್ನಿಂಗ್ ಕೊಟ್ಟರು.

ಸಿಂದಗಿ ಪಟ್ಟಣದಲ್ಲಿ 52 ಏಕರೆ ಕೆರೆಗೆ ಯರಗಲ್ ಕಾಲುವೆ ಹಾಗೂ ಬಳಗಾನೂರ ಕೆರೆಯಿಂದ ನಿತ್ಯ 10 ಕ್ಯೂ ನೀರು ಹರಿದು ಬರುತ್ತಿದ್ದು ಅಲ್ಲದೆ ಜಾಪನಬಾವಿ, ವೆಂಕಿಬಾವಿ, ವಾಲಿಬಾವಿ, ಸಾರಂಗಮಠದ ಬಾವಿ ಹಳೆ ಬಾವಿಗಳನ್ನು ಶುದ್ದಿಕರಣಗೊಳಿಸಲಾಗಿದೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರಬಾರದು ಆದರೆ ಪಟ್ಟಣದ 23 ವಾರ್ಡುಗಳಿಗೆ 2 ಸಿಬ್ಬಂದಿಯಿಂದ 8ರಿಂದ 10 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ. ತುಂಬಿದ ಕೆರೆ ನೋಡಿದರೆ 2 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಬಹುದು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ನಿರ್ವಹಣೆಗೆ ಮುಂದಾಗಿ ಎಂದು ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಅವರಿಗೆ ಸೂಚಿಸಿದರು.

ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಆಲಮೇಲ ತಹಶೀಲ್ದಾರ ಸುರೇಶ ಚಾವಲಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಗ್ನಿ, ಪಶು ಸಂಗೋನಾ ಅಧಿಕಾರಿ ಡಾ. ರಾಠೋಡ, ಕೃಷಿ ಇಲಾಖೆಯ ಡಾ. ಎಚ್.ವೈ.ಸಿಂಗೆಗೋಳ, ನೀರು ಸರಬರಾಜ ಇಲಾಖೆ ಅಧಿಕಾರಿ ಹಿರೇಮಠ ಅವರು ವಿವರಣೆ ನೀಡಿದರು.

RELATED ARTICLES

Most Popular

error: Content is protected !!
Join WhatsApp Group