spot_img
spot_img

ಭಾವೈಕ್ಯತೆಗೆ ಸಾಕ್ಷಿಯಾದ ಕೊಟ್ಟಗ್ಯಾಳ ಗ್ರಾಮದ ಮೌಲಾಲಿ ದರ್ಗಾ

Must Read

spot_img
- Advertisement -

ಸಮಾಜ ಕಲ್ಯಾಣಕ್ಕೆ ದರ್ಗಾದಲ್ಲಿ ೨೧ ದಿವಸ ಅನುಷ್ಠಾನಕ್ಕೆ ಕುಳಿತ ಹಿಂದು ಯುವಕ

ಬೀದರ – ಬಸವಣ್ಣನವರ ಕರ್ಮ ಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟ್ಟಗ್ಯಾಳ ಗ್ರಾಮ ಇಡೀ ದೇಶಕ್ಕೆ ಭಾವೈಕ್ಯತೆಯ ಮಾದರಿಯಾಗಿದೆ.

ಈ ಕೊಟ್ಟಗ್ಯಾಳ ಗ್ರಾಮದ ಇತಿಹಾಸ ಪುಟ ತಿರುವಿ ನೋಡಿದರೆ ಎಲ್ಲರಿಗೂ ಕೊಟ್ಟಗ್ಯಾಳ ಗ್ರಾಮಕ್ಕೆ ಭೆಟ್ಟಿ ನೀಡಬೇಕು ಎಂದು ಅನಿಸುತ್ತದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ನಡೆದಾಡಿದ ಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟ್ಟಗ್ಯಾಳ ಗ್ರಾಮ ಇಂದು ಇಡೀ ದೇಶದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದು ಈ ಗ್ರಾಮದಲ್ಲಿ ಜಾತಿ ಮರೆತು ನಾವು ಎಲ್ಲರೂ ಒಂದೇ ಎಂದು ಕೂಡಿ ಬಾಳುವ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಗ್ರಾಮದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮೌಲಾಲಿ ದರ್ಗಾ ಮುಸ್ಲಿಂ ಸಮುದಾಯದ ದರ್ಗಾ ಆದರೂ ಈ ಗ್ರಾಮದ ಪ್ರತಿಯೊಬ್ಬರ ಮನೆ ದೇವರಾಗಿದೆ. ಹಿಂದೂ ಧರ್ಮದ ಯುವಕನ ಮೈಮೇಲೆ ಮೌಲಾಲಿ ದೇವರು ಬರುತ್ತಾರೆ ಎಂದು ಊರಿನ ಜನರ ನಂಬಿಕೆಯಾಗಿದೆ.ಈ ಹಿಂದೂ ಯುವಕ ಇಂದಿನಿಂದ 21ದಿನಗಳವರೆಗೆ ನಾಡಿನ ಜನತೆಯ ಕಲ್ಯಾಣಕ್ಕೋಸ್ಕರ ಮೌಲಾಲಿ ದರ್ಗಾದಲ್ಲಿ ಅನುಷ್ಠಾನಕ್ಕೆ ಕುಳಿತುಕೊಳ್ಳಲಿದ್ದಾನೆ.

- Advertisement -

ಈ ಕೊಟ್ಟಗ್ಯಾಳ ಗ್ರಾಮದ ಜನರ ಭಾವೈಕ್ಯತೆ ಇಡೀ ದೇಶದಾದ್ಯಂತ ಎಲ್ಲಾ ಜನರಲ್ಲಿ ಭಾವನೆ ಮೂಡಿದರೆ ದೇಶದಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೆ ಸಂದೇಹವಿಲ್ಲ ಹಾಗೂ ಬಸವಣ್ಣನವರು ಕಂಡ ಕನಸು ನನಸಾಗಬಹುದು ಎಂದು ಕೊಟ್ಟಗ್ಯಾಳ ಗ್ರಾಮ ಹಿರಿಯರ ಅಭಿಪ್ರಾಯವಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಬಸವ ಜಯಂತಿ ಆಚರಣೆಗೆ ಹರ್ಡೇಕರ್ ಮಂಜಪ್ಪನವರೆ ಮೂಲ ಕಾರಣಕರ್ತರು – ಪ್ರೊ. ಶ್ರೀಕಾಂತ್ ಶಾನವಾಡ.

ಬೆಳಗಾವಿ - ಇದೇ ಫೆ. ೨೩  ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮ ನೆರವೇರಿತು. ಹರ್ಡೇಕರ್ ಮಂಜಪ್ಪನವರ ಬದುಕು...
- Advertisement -

More Articles Like This

- Advertisement -
close
error: Content is protected !!
Join WhatsApp Group