ಭಾವೈಕ್ಯತೆಗೆ ಸಾಕ್ಷಿಯಾದ ಕೊಟ್ಟಗ್ಯಾಳ ಗ್ರಾಮದ ಮೌಲಾಲಿ ದರ್ಗಾ

Must Read

ಸಮಾಜ ಕಲ್ಯಾಣಕ್ಕೆ ದರ್ಗಾದಲ್ಲಿ ೨೧ ದಿವಸ ಅನುಷ್ಠಾನಕ್ಕೆ ಕುಳಿತ ಹಿಂದು ಯುವಕ

ಬೀದರ – ಬಸವಣ್ಣನವರ ಕರ್ಮ ಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟ್ಟಗ್ಯಾಳ ಗ್ರಾಮ ಇಡೀ ದೇಶಕ್ಕೆ ಭಾವೈಕ್ಯತೆಯ ಮಾದರಿಯಾಗಿದೆ.

ಈ ಕೊಟ್ಟಗ್ಯಾಳ ಗ್ರಾಮದ ಇತಿಹಾಸ ಪುಟ ತಿರುವಿ ನೋಡಿದರೆ ಎಲ್ಲರಿಗೂ ಕೊಟ್ಟಗ್ಯಾಳ ಗ್ರಾಮಕ್ಕೆ ಭೆಟ್ಟಿ ನೀಡಬೇಕು ಎಂದು ಅನಿಸುತ್ತದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ನಡೆದಾಡಿದ ಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟ್ಟಗ್ಯಾಳ ಗ್ರಾಮ ಇಂದು ಇಡೀ ದೇಶದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದು ಈ ಗ್ರಾಮದಲ್ಲಿ ಜಾತಿ ಮರೆತು ನಾವು ಎಲ್ಲರೂ ಒಂದೇ ಎಂದು ಕೂಡಿ ಬಾಳುವ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಗ್ರಾಮದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮೌಲಾಲಿ ದರ್ಗಾ ಮುಸ್ಲಿಂ ಸಮುದಾಯದ ದರ್ಗಾ ಆದರೂ ಈ ಗ್ರಾಮದ ಪ್ರತಿಯೊಬ್ಬರ ಮನೆ ದೇವರಾಗಿದೆ. ಹಿಂದೂ ಧರ್ಮದ ಯುವಕನ ಮೈಮೇಲೆ ಮೌಲಾಲಿ ದೇವರು ಬರುತ್ತಾರೆ ಎಂದು ಊರಿನ ಜನರ ನಂಬಿಕೆಯಾಗಿದೆ.ಈ ಹಿಂದೂ ಯುವಕ ಇಂದಿನಿಂದ 21ದಿನಗಳವರೆಗೆ ನಾಡಿನ ಜನತೆಯ ಕಲ್ಯಾಣಕ್ಕೋಸ್ಕರ ಮೌಲಾಲಿ ದರ್ಗಾದಲ್ಲಿ ಅನುಷ್ಠಾನಕ್ಕೆ ಕುಳಿತುಕೊಳ್ಳಲಿದ್ದಾನೆ.

ಈ ಕೊಟ್ಟಗ್ಯಾಳ ಗ್ರಾಮದ ಜನರ ಭಾವೈಕ್ಯತೆ ಇಡೀ ದೇಶದಾದ್ಯಂತ ಎಲ್ಲಾ ಜನರಲ್ಲಿ ಭಾವನೆ ಮೂಡಿದರೆ ದೇಶದಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೆ ಸಂದೇಹವಿಲ್ಲ ಹಾಗೂ ಬಸವಣ್ಣನವರು ಕಂಡ ಕನಸು ನನಸಾಗಬಹುದು ಎಂದು ಕೊಟ್ಟಗ್ಯಾಳ ಗ್ರಾಮ ಹಿರಿಯರ ಅಭಿಪ್ರಾಯವಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group