ಬೆಂಗಳೂರು: ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ನಾಗರ ಬಾವಿ ಬಸ್ ನಿಲ್ದಾಣದ ನಾಮಫಲಕದ ಮುಂಭಾಗದಲ್ಲಿ ರಾಶಿ ರಾಶಿ ಆರಕ್ಷಕ ಪಡೆಯ ಬ್ಯಾರಿಕೇಡ್ ಗಳು ಅನಾಥ ಶವದ ರೀತಿಯಲ್ಲಿ ಮಲಗಿದ್ರೆ ಬಸ್ ನಿಲ್ದಾಣ ದಲ್ಲಿ ಬಸ್ ಇಳಿದು ಬರುವ ಜನರ ಪರದಾಟ ಒಂದೆಡೆ ಆದರೆ ಮತ್ತೊಂದೆಡೆ ಬಸ್ ಹತ್ತುವವರು ನಿಲ್ಲಲು ಜಾಗ ವಿಲ್ಲದೆ ಸರ್ಕಸ್ ಮಾಡುತ್ತಾ ಇರುವ ದೃಶ್ಯ ಪ್ರತಿ ನಿತ್ಯ ನೋಡಲು ಸಿಗುತ್ತದೆ.
ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ನಾಗರ ಬಾವಿ ಬಸ್ ನಿಲ್ದಾಣ ದಲ್ಲಿ ನಿಮಗೆ ಉಚಿತವಾಗಿ ಕಸ- ಕಡ್ಡಿಗಳು,ನೀರು ಕುಡಿದು ಎಸೆದ ಪ್ಲಾಸ್ಟಿಕ್ ಬಾಟಲಿಗಳು ಹಾಗು ಒಡೆದು ಎಸೆದ ದೊಡ್ಡ ದೊಡ್ಡ ಗಾತ್ರದ ಸಿಮೆಂಟ್ ನ ತುಂಡುಗಳು ಸಿಗುತ್ತವೆ. ಅವೆಲ್ಲದರ ನಡುವೆ ದಟ್ಟಣೆಯ ವಾಹನ ಸಂಚಾರ ಇರುವ ನಗರದ ಪ್ರಮುಖ ರಸ್ತೆ ಇದಾಗಿದೆ.ಆದರೆ ಬಿಬಿ,ಎಂ,ಪಿ ಮಾತ್ರ ಸಮಸ್ಯೆಯ ಆಗರವಾದ ನಾಗರಬಾವಿ ಬಸ್ ನಿಲ್ದಾಣದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ.
ನಾಗರಿಕರಿಗೆ ಬೇಕಾಗುವ ಮೂಲಭೂತ ಸೌಕರ್ಯ ಇಲ್ಲದ ನಾಗರ ಬಾವಿ ಬಸ್ ನಿಲ್ದಾಣ ಎಂದರೆ ಪ್ರಾಯಶಃ ತಪ್ಪಾಗಲಾರದು. ಬಸ್ ಗಾಗಿ ಕಾದು ನಿಲ್ಲುವ ಪ್ರಯಾಣಿಕರು, ವಿದ್ಯಾರ್ಥಿ ಗಳು, ವಿದ್ಯಾರ್ಥಿನಿಯರು, ಮಹಿಳೆಯರು, ಕೆಲಸಕ್ಕೆ ಹೋಗುವ ನೌಕರರು, ಕೂಲಿ ಕಾರ್ಮಿಕರು ಬಿಸಿಲಿನ ಬೇಗೆಗೆ ಬಿ,ಬಿ,ಎಂ.ಪಿಗೆ ಹಾಗು ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತ ನಿಂತಿರುವ ದೃಶ್ಯ ಸಾಮಾನ್ಯ ಪ್ರತಿನಿತ್ಯ!
ಮಳೆ ಬಂದರೆ ಬಸ್ ಕಾಯುತ್ತಾ ನಿಂತ ಜನರಿಗೆ ಉಚಿತ ಸ್ನಾನ ಏಕೆಂದರೆ ಜನ ಬಸ್ ಗೆ ಕಾಯುತ್ತ ನಿಂತಾಗ ಮಳೆ ಬಂದರೆ ಅಲ್ಲಿ ಯಾವುದೇ ಮೇಲ್ಚಾವಣಿ ಇರುವ ಬಸ್ ನಿಲ್ದಾಣ ಇಲ್ಲ , ಇಲ್ಲಿಂದ ಅಂಬೇಡ್ಕರ್ ಕಾಲೇಜ್ ಹಾಗು ಮಲ್ಲತ್ತ ಹಳ್ಳಿ ಸೇರಿದಂತೆ ಹಲವು ಕಡೆ ಬಸ್ ಸಂಪರ್ಕ ಕಲ್ಪಿಸುವ ತಾಣ ಇದು ಆದರೆ ಇಲ್ಲಿ ಸರಿಯಾದ ಬಸ್ ನಿಲ್ದಾಣ ಇಲ್ಲ ಹಾಗೆಯೇ , ಶೌಚಾಲಯ ಇಲ್ಲ , ಕುಡಿಯುವ ನೀರಿನ ವ್ಯವಸ್ಥೆ ಇಲ್ಲ , ರಸ್ತೆ ತುಂಬಾ ಕಸದ ರಾಶಿ ಹಾಗೆಯೇ ಬಸ್ ನಿಲ್ದಾಣದ ಬಳಿ ಜನ ನಿಲ್ಲುವ ಸ್ಥಳದಲ್ಲಿ ಒಂದು ವಿದ್ಯುತ್ ಮೀಟರ್ ಇದ್ದು ಅದರ ಡಬ್ಬಿ ತುಕ್ಕು ಹಿಡಿದಿದೆ , ಆ ಡಬ್ಬಿ ತೆರೆದ ಸ್ಥಿತಿಯಲ್ಲಿದ್ದು , ಬಸ್ ಕಾಯುವ ಪ್ರಯಾಣಿಕರು ಅದರ ಬಳಿಯೇ ನಿಂತು ಬಸ್ ಕಾಯುತ್ತ ನಿಲ್ಲುವ ಜನರಿಗೆ ಜೋರಾಗಿ ಮಳೆ ಬಂದಾಗ ಅಲ್ಲಿ ವಿದ್ಯುತ್ ಹರಿದರೆ ಜನರ ಪ್ರಾಣ ಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಹಾಗು ಅಲ್ಲಿಯೇ ಸ್ವಲ್ಪ ದೂರದಲ್ಲಿ ಇರುವ ವಿದ್ಯುತ್ ಕಂಬದ ಬುಡದಲ್ಲಿ ಹಾಕಿರುವ ಸಿಮೆಂಟ್ ಬಿರುಕು ಬಿಟ್ಟಿದೆ – ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ನಿದ್ದೆ ಗೆ ಜಾರಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಹಾಗೆಯೇ ಎಲ್ಲೇ ನೋಡಿದರು ಈಗ ಪರ್ಸೆಂಟೇಜ್ ವ್ಯವಹಾರ ಜೋರಾಗಿಯೇ ಇದೆ… ಕಳೆದ 25 ವರುಷಗಳಿಂದ ಸಾಗಿದೆ ಎನ್ನುತ್ತಾರೆ ವಾಟಾಳ್ ನಾಗರಾಜ್ !!
ಒಟ್ಟಿನಲ್ಲಿ ಜನ ಸಾಮಾನ್ಯರ ಗೋಳು ಕೇಳುವವರು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಮತದಾರರು ಬೇಕಲ್ಲವೇ ನಿಮಗೆ?
ಮಾನ್ಯ ಶಾಸಕರೆ, ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಹೊರವರ್ತುಲ ರಸ್ತೆ ಕಡೆ ನೋಡಿ. ಸಮಸ್ಯೆಗಳ ಆಗರವಾಗಿರುವ ಕ್ಷೇತ್ರದ ಸಮಸ್ಯೆ ಬಗೆಹರಿಸಿ. ಹೆಚ್ಚಿನ ವಾಹನ ದಟ್ಟಣೆಯಿರುವ ಈ ಸ್ಥಳದಲ್ಲಿ ನಾಗರಿಕರಿಗೆ ಅನುಕೂಲವಾಗುವಂತಹ ಕ್ರಮ ತೆಗೆದುಕೊಳ್ಳಿ.
ಏಕೆಂದರೆ ಈ ಬಸ್ ನಿಲ್ದಾಣ ದಲ್ಲಿ ಬಸ್ ಹತ್ತಲು ಹಾಗು ಇಳಿಯಲು ಹೆಚ್ಚು ಕಾಲೇಜು ವಿದ್ಯಾರ್ಥಿ ಗಳು ಹಾಗು ಶಾಲಾ ಮಕ್ಕಳು ಬಸ್ ಕಾಯುತ್ತಾ ನಿಂತಿರುತ್ತಾರೆ. ಭವ್ಯ ಭಾರತದ ಮುಂದಿನ ಪ್ರಜೆಗಳು ಅವರು ಹಾಗು ನಿಮ್ಮ ಮುಂದಿನ ಚುನಾವಣೆಗೆ ಮತ ಹಾಕಲು ಮತದಾರರು ಬೇಕಲ್ಲವೇ ನಿಮಗೆ ? ಅದಕ್ಕಾದರೂ ಈ ಸೌಲಭ್ಯಗಳನ್ನು ಕೊಡಿ!
ನಾಗರಬಾವಿ ಬಸ್ ನಿಲ್ದಾಣದ ಈ ಅವ್ಯವಸ್ಥೆಯ ಬಗ್ಗೆ ಬಿಬಿಎಂಪಿ ಯವರು ಅಕ್ಷರಶಃ ಕಣ್ಣು ಮುಚ್ಚಿ ಕುಳಿತಿದ್ದಾರೆನ್ನಬಹುದು. ಶಾಸಕರಾದರೂ ಈ ಬಗ್ಗೆ ಗಮನ ಹರಿಸಬೇಕು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಇನ್ನಾದರೂ ಈ ಸಮಸ್ಯೆ ಗೆ ಬಿ.ಬಿ.ಎಂ.ಪಿ ಹಾಗು ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಮನಸ್ಸು ಮಾಡುವುದೇ ಎಂದು ಕಾದು ನೋಡಬೇಕಿದೆ !!
ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ