ಮುನವಳ್ಳಿ : “ ಕೃಷಿ ಕಾರ್ಯವು ಮಾನವಕುಲದ ಅತ್ಯಂತ ಹಳೆಯ ಮತ್ತು ಅಗತ್ಯವಾದ ಉದ್ಯಮವಾಗಿದೆ. ಇದು ಇಡೀ ಸಮಾಜಕ್ಕೂ ಮಾನವ ಜೀವನಕ್ಕೆ ಮುಖ್ಯವಾಗಿದೆ. ಭಾರತದಲ್ಲಿ ಶತಮಾನಗಳಿಂದ ಕೃಷಿ ಪ್ರಧಾನವಾಗಿದೆ. ರೈತರಿಲ್ಲದೇ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಅದಕ್ಕಾಗಿಯೇ ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ನುಡಿ ಜನಜನಿತವಾಗಿದೆ.” ಎಂದು ಅಂಬರೀಷ್ ಯಲಿಗಾರ ತಿಳಿಸಿದರು.
ಅವರು ರಾಷ್ಟ್ರೀಯ ರೈತ ಕೃಷಿ ದಿನಾಚರಣೆಯ ಅಂಗವಾಗಿ ತಮ್ಮ ಅಂಗಡಿಯ ಸಂಕೀರ್ಣದಲ್ಲಿ ರೈತರ ಸನ್ಮಾನ ಜರುಗಿಸುವ ಮೂಲಕ ರೈತ ಕೃಷಿ ದಿನಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಚುಂಚನೂರ ಗ್ರಾಮದ ಪ್ರಗತಿಪರ ರೈತ ಗಿರೆಪ್ಪ ಹಂಜಿ ಮತ್ತು ಮುನವಳ್ಳಿಯ ಪ್ರಗತಿಪರ ರೈತರಾದ ಪಂಚಪ್ಪ ಗುಂಡ್ಲೂರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಬರೀಷ ಯಲಿಗಾರ,ಪಂಚಪ್ಪಾ ಹನಸಿ,ಸುಣಗಾರ ಕಿರಣ ಯಲಿಗಾರ ಮುಂತಾದವರು ಉಪಸ್ಥಿತರಿದ್ದರು.