ಜಿಲ್ಲಾ ಕ.ಸಾ.ಪ ಮತ್ತು ಗಣಿತ ವಿಜ್ಞಾನ ಸಂಸ್ಥೆಗಳ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Must Read

ಪ್ರತಿ ಹಳ್ಳಿಹಳ್ಳಿಗಳಲ್ಲೂ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿದೆ ವಿಶ್ರಾಂತ ಕುಲಪತಿ ಮೂಲಿಮನಿ ಅಭಿಮತ

ಬೆಳಗಾವಿ – ವಿಜ್ಞಾನ ಬೆಳೆಯಬೇಕೆಂದರೆ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಭಾರತದ ಸುಸ್ಥಿರ ಅಭಿವೃದ್ಧಿ ಆಗಬೇಕಿದೆ ಹಾಗೂ ಅಭಿವೃದ್ಧಿ ಹೊಂದು ತ್ತಿರುವುದೇ ಆಗಿದೆ,ಆದರೆ ಅಭಿವೃದ್ಧಿಯಾಗುವುದು ಯಾವಾಗ. ಅದಕ್ಕಾಗಿ ದೇಶದ ಯುವಜನತೆಯ ಚಿಂತಿಸಬೇಕಿದೆ ಎಂದು ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿಗಳು ಭೌತಶಾಸ್ತ್ರಜ್ಞರು ಆದ ಪ್ರೊ. ಬಿ.ಜಿ ಮೂಲಿಮನಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಕ. ಸಾ.ಪ ಮತ್ತು ಗಣಿತ ವಿಜ್ಞಾನಗಳ ಸಂಸ್ಥೆ ವತಿಯಿಂದ ಸೋಮವಾರ ದಿ.7 ರಂದು ಹಮ್ಮಿಕೊಳ್ಳಲಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿದ ಅವರು ವಿಜ್ಞಾನ ಎಂಬುದು ಸತ್ಯದ ಅನ್ವೇಷಣೆ. ಮನುಷ್ಯನಿಗೆ ಏನೇ ಮಾಡಬೇಕಾದರೂ ವೈಜ್ಞಾನಿಕ ತಳಹದಿ ಇರಬೇಕು.ಗುರಿ ಇರಬೇಕು. ಪ್ರಯತ್ನ, ಸ್ವಇಚ್ಛೆ, ಆತ್ಮ ನಿರ್ಭರತೆ ಇದ್ದರೆ ಮಾತ್ರ ಛಲದಿಂದ ಏನನ್ನಾದರೂ ಸಾಧಿಸಬಹುದು. ನಮ್ಮ ದೇಶಕ್ಕೆ ರಾಮನ್ ಅವರಂತಹ ವಿಜ್ಞಾನಿಗಳು ಬೇಕಿದೆ. ಸಮಾಜದಲ್ಲಿ ವಿಜ್ಞಾನದ ಬಗ್ಗೆ ಚಿಂತಿಸಬೇಕಿದೆ. 21ನೇ ಶತಮಾನ ಜ್ಞಾನಕ್ಕೆ ಮೀಸಲಾಗಿದೆ. ಜ್ಞಾನವನ್ನು ಬಳಕೆ ಮಾಡುವ ಮನೋಜ್ಞಾನ ನಮ್ಮಲ್ಲಿರಬೇಕು. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಪರಿಸರ ಕ್ರಾಂತಿ ಅಣ್ವಸ್ತ್ರ ಕ್ರಾಂತಿ, ಬಾಹ್ಯಾಕಾಶ ಕ್ರಾಂತಿ ಮುಂತಾದವುಗಳಿಂದ ನಮ್ಮ ದೇಶದ ಭವಿಷ್ಯವನ್ನು ಬದಲಿಸಿದ ಸಾರಾಭಾಯಿ, ಕುರಿಯನ್ನ, ಅಬ್ದುಲ್ ಕಲಾಂ, ಧವನ್ ನಮಗೆ ಮಾದರಿಯಾಗಿದ್ದಾರೆ. ಆದ್ದರಿಂದ ಆ ಕ್ರಾಂತಿಗಳ ಹೆಜ್ಜೆಗಳು ವಿಜ್ಞಾನದಲ್ಲಿ ಮುಂದುವರೆಯಲಿ. ಆ ನಿಟ್ಟಿನಲ್ಲಿ ವಿಜ್ಞಾನ ದಿನಾಚರಣೆ ಅವುಗಳನ್ನು ನೆನಪಿಸಲು ಆಚರಿಸಲಾಗುತ್ತದೆ. ವಿಜ್ಞಾನದಲ್ಲಿ ಸಾಹಿತ್ಯ ಬೇಕು ಹಾಗೆಯೇ ಸಾಹಿತ್ಯದಲ್ಲೂ ವಿಜ್ಞಾನ ಬೇಕು. ರಾಜ್ಯದ ಎಲ್ಲ ಕ.ಸಾ.ಪ ಘಟಕ ಗಳಿಂದಲೂ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ ಅಧ್ಯಕ್ಷೆ ಮಂಗಲಾ ಮೆಟಗುಡ್ ಮಾತನಾಡಿ ಇತ್ತೀಚೆಗೆ ಯಾವುದರಲ್ಲೂ ಆಸಕ್ತಿ ಉಳಿದಿಲ್ಲ. ಜ್ಞಾನವಿರುವ ವಿಜ್ಞಾನದತ್ತವಾಗಬೇಕಿದೆ. ವಿಜ್ಞಾನದ ಬಹುತೇಕ ವಿಷಯಗಳು ಜನಸಾಮಾನ್ಯರಿಗೆ ತಿಳಿಯಲು ಕನ್ನಡದಲ್ಲಿ ತರ್ಜುಮೆ ಆಗಬೇಕಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಕೆ. ಎಲ್. ಈ. ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ. ಎಚ್. ಬಿ. ರಾಜಶೇಖರ್ ಮಾತನಾಡಿ, ಅಜ್ಞಾನ ಓಡಿಸಲು ವಿಜ್ಞಾನ ಬೇಕು.ವಿಜ್ಞಾನ ಬೆಳಗಿಸಲು ಸುಜ್ಞಾನ ಬೇಕು. ಆ ಮನಸ್ಥಿತಿಯ ವಿಜ್ಞಾನ ನಮಗೆ ಬೇಕಾಗಿದೆ.ವಿಜ್ಞಾನಿಗಳು ಸುಜ್ಞಾನಿಗಳಾ ಗದಿದ್ದರೆ ಏನೂ ಪ್ರಯೋಜನವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ರೊಟ್ಟಿ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಮಳಗಲಿ, ಬೆಳಗಾವಿ ಜಿಲ್ಲಾ ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ ಗೌಡ ಪಾಟೀಲ, ರಂಗಭೂಮಿ ಕಲಾವಿದರಾದ ಎಫ್. ವೈ. ತಳವಾರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಹನ ಪಾಟೀಲ ಪ್ರತಿಗ್ರಾಮದಲ್ಲಿ ವಿಜ್ಞಾನ ಪರಿಷತ್ತಿನಿಂದ ವಿಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತೇವೆ. ಕ್ರಿಯಾಶೀಲ ಕಾರ್ಯಕ್ರಮಗಳು ಪರಿಷತ್ತಿನಿಂದ ಇದ್ದರೂ ಮಾರ್ಗದರ್ಶನದ ಕೊರತೆ ಇದೆ ಅದಕ್ಕಾಗಿ ಎಲ್ಲರೂ ಸೇರಿ ಪರಿಷತ್ತನ್ನು ಗುರುತಿಸುವ ಕೆಲಸ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕ ಕ.ಸಾ.ಪ. ಅಧ್ಯಕ್ಷ ಸುರೇಶ ಹಂಜಿ, ಎನ್. ಬಿ. ಕರವಿನಕೊಪ್ಪ, ಜಯಶ್ರೀ ನಿರಾಕಾರಿ, ಡಾ. ಎಸ್. ಬಿ.ಬಿರಾದಾರ್, ಎಸ್.ಜಿ. ಸಿದ್ನಾಳ,ಬಿ.ಎಂ ಮತ್ತಿಕೊಪ್ಪ,ಎ. ಎಂ. ತೆಗ್ಗಿ, ಪ್ರೊ.ಎಸ್. ಬಿ. ಸೋಮಣ್ಣವರ, ರಾಜಶ್ರೀ ದೇಯನ್ನವರ, ಎ. ಬಿ. ಅಳ್ಳಿಗಿಡದ, ವಿನೋದ ಜಗಜಂಪಿ, ಎಫ್. ಬಿ. ಸೋಮಣ್ಣವರ. ಆಯ್. ಎಸ್. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಕ್ರಮದ ಸಂಯೋಜಕರು ಗಣಿತ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಆದ ಪ್ರೊ.ಟಿ ವೆಂಕಟೇಶ್ ಗಣಿತ ವಿಜ್ಞಾನಗಳ ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸುತ್ತಾ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿದರು ಪ್ರತಿಭಾ ಕಳ್ಳಿಮಠ ನಾಡಗೀತೆ ಪ್ರಸ್ತುತಪಡಿಸಿದರು. ಜಿಲ್ಲಾ ಕ.ಸಾ.ಪ ಸಹ ಕಾರ್ಯದರ್ಶಿ ಶಿವಾನಂದ ತಲ್ಲೂರ ಸ್ವಾಗತಿಸಿದರು. ಎಂ.ಎಸ್. ಕೋಳಿ ವಂದಿಸಿದರು. ಜಿಲ್ಲಾ ಕ.ಸಾ.ಪ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿರೂಪಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group