ನೆನಪುಗಳ ನೆರಳಲ್ಲಿ

Must Read

ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರು ನಾಡಿನ ಹಿರಿಯ ಸಂಶೋಧಕರು, ವಿದ್ವಾಂಸರು, ಲೇಖಕರು. ಪ್ರಾಚೀನ ಕಾವ್ಯ, ವ್ಯಾಕರಣ-ಛಂದಸ್ಸು-ಗ್ರಂಥಸಂಪಾದನೆ-ಸಾಹಿತ್ಯಚರಿತ್ರೆ-ಶಾಸನಸಾಹಿತ್ಯಗಳ ಕ್ಷೇತ್ರದಲ್ಲಿ ಆರು ದಶಕಗಳಿಗೂ ಮೀರಿದ ನಿರಂತರ ಕೃಷಿ, ಶಾಸ್ತ್ರಿಗಳದು.

ನಿರಂತರ ಸಾಹಿತ್ಯಿಕ – ಸಂಶೋಧನ ಚಟುವಟಿಕೆಗಳ ಕಾರಣದಿಂದಾಗಿ ನಾಡಿನ ಹಲವರು ವಿದ್ವಾಂಸರು, ಸಾಹಿತಿಗಳು, ಗಣ್ಯರ ಸಂಪರ್ಕ-ಸಹವಾಸ ಅವರಿಗೆ ಲಭಿಸಿದ್ದು ಸಹಜ. ಹಾಗೆ ತಾವು ಒಡನಾಡಿದ, ತಮಗಿಂತ ಹಿರಿಯರಾದ ೧೧೧ ಜನ ಸಾಧಕರನ್ನು ಕುರಿತ ನೆನಪುಗಳನ್ನು ಒಂದೆಡೆ ಕಟ್ಟಿಕೊಟ್ಟಿದ್ದಾರೆ, ಟಿ. ವಿ. ವೆಂಕಟಾಚಲಶಾಸ್ತ್ರಿಗಳು.

ಆ ಕೃತಿಯ ಹೆಸರೇ ‘ ನೆನಪುಗಳ ನೆರಳಲ್ಲಿ ‘

ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಅತ್ಯಂತ ಉಪಯುಕ್ತವಾಗಬಲ್ಲ, ಹಲವರು ಗಣ್ಯರು-ವಿದ್ವಾಂಸರನ್ನು ಕುರಿತು ಅಪರೂಪದ ಮಾಹಿತಿಗಳನ್ನೂ ನೀಡಬಲ್ಲ ನೆನಪುಗಳ_ನೆರಳಲ್ಲಿ ಕೃತಿ ಸಾಹಿತ್ಯಾಸಕ್ತರು ಓದಲೇಬೇಕಾದ ಗೃಂಥ. ಹಿರಿಯ ಸಾಹಿತಿಗಳ ಒಡನಾಟದಲ್ಲಿ ತಮಗಾದ ಅನುಭವಗಳನ್ನು ಆತ್ಮೀಯವಾಗಿ ಹಿಡಿದಿಟ್ಟಿದ್ದಾರೆ ಲೇಖಕರು.


ಪ್ರತಿಯನ್ನು ಖರೀದಿಸಲು ಇಚ್ಛಿಸುವವರು WhatsApp ಮಾಡಿ: 74836 81708

Latest News

ಕವನ : ಪ್ರೀತಿಸಿದ ತಪ್ಪಿಗೆ

ಪ್ರೀತಿಸಿದ ತಪ್ಪಿಗೆ... ಇಂದು ಈ ಮುಸ್ಸಂಜೆಯಲಿ.... ಯಾರೋ ಎಲ್ಲೋ ಪ್ರೀತಿಸುವ ಹೃದಯಕೆ ನೋವುಣಿಸಿರಬೇಕು... ಅಕಾಲದಲ್ಲಿ ಆಕಾಶ ಆರ್ಭಟಿಸಿ ಭೋರ್ಗರೆದು ಹೀಗೆ ಸುರಿಯಬೇಕಾದರೆ... ಸದ್ದಿಲ್ಲದೇ ಒಡೆದ ಎದೆ ತುಣುಕುಗಳು ಮುಗಿಲಲಿ ಶೋಕಗೀತೆ ನುಡಿಸುತಿವೆ....ಯಾರೋ ಎಲ್ಲೋ ಹೂವಂತ ಮನಸನು ಮಾತಿನ ಮುಳ್ಳುಗಳಿಂದ ಚುಚ್ಚಿ ನೋಯಿಸಿರಬೇಕು... ಹೆಪ್ಪುಗಟ್ಟಿದ ದುಃಖ ಕಪ್ಪು ಮೋಡದ ಒಡಲ ಬಗೆದು...

More Articles Like This

error: Content is protected !!
Join WhatsApp Group