ದೈಹಿಕ ಶ್ರಮದಿಂದ ರೋಗ ತಡೆ – ಡಾ. ಪ್ರಸಾದ

Must Read

ಬೆಳಗಾವಿ – ದೈಹಿಕ ಶ್ರಮ , ವ್ಯಾಯಾಮ,ಯೋಗ,ನಿಯಮಿತ ಸಾತ್ವಿಕ ಆಹಾರ ಸೇವನೆಯಿಂದ ಬಿಪಿ, ಶುಗರ  ಬರದಂತೆ ತಡೆಯಬಹುದೆಂದು ಡಾ ಎಂ.ಆರ್ ಪ್ರಸಾದ ಅವರು ಹೇಳಿದರು.

ರವಿವಾರ ದಿನಾಂಕ12  ರಂದು ಮಾಳಮಾರುತಿ ನಾಗರಿಕ ವಿಕಾಸ ಸಂಘದಿಂದ ಎಸ್ ಜಿ ವಿ ಮಹೇಶ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಡಾ. ಪ್ರಸಾದ ಎಂ.ಆರ್ ಅವರು ಆರೋಗ್ಯ ತಪಸಣಾ ತಂಡದೊಂದಿಗೆ ಆಗಮಿಸಿ ಸುಮಾರು 60 ಹಿರಿಯ ನಾಗರಿಕರಿಗೆ ಬಿಪಿ, ಸುಗರ ಹಾಗೂ ಇಸಿಜಿ ತಪಾಸಣೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿ ಎಂ ಬೂದಿಹಾಳ ವಹಿಸಿದ್ದರು. ಶಶಿಕಾಂತ ಗುಂಡಕಲ್ಲೆ ಸ್ವಾಗತಿಸಿದರು. ಪ್ರಭಾಕರ ವನಹಳ್ಳಿ ವಂದಿಸಿದರು. ಪ್ರಾಚಾರ್ಯ ಮಂಜುನಾಥ ಭಟ್ಟ’ ನಾಗರಿಕ ವಿಕಾಸ ಸಂಘದ ಸಿ ಎಸ್ ಬಗಲಿ, ಜಗದೀಶ ಚಿಮ್ಮಲಗಿ, ಎಂ ಎಸ್ ಪಾಟೀಲ, ಯೋಗೇಶ ಬಿದರಿ, ಎಸ್ ಎಸ್ ರಾಮದುರ್ಗ, ಎಂ ವೈ ಮೆಣಸಿನಕಾಯಿ ಮುಂತಾದವರು ಉಪಸ್ಥಿತರಿದ್ದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group