ಮೂಡಲಗಿ: ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷ ತುಂಬಿದ ಪ್ರಯುಕ್ತ ನ.25 ರಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ತಾಲೂಕಿನ ಕನ್ನಡಪರ ಸಂಘಟನೆ ಮತ್ತು ಕನ್ನಡ ಅಭಿಮಾನಿಗಳ ಸಹಯೋಗದೊಂದಿಗೆ ಮೂಡಲಗಿ ಪಟ್ಟಣದಲ್ಲಿ ನಾಡಿನ ವಿವಿಧ ರೂಪಕ ಹಾಗೂ ವಾದ್ಯಮೇಳಗಳ ಮೆರವಣಿಗೆಯೊಂದಿಗೆ ಸಡಗರ ಸಂಭ್ರಮದಿಂದ ಸುವರ್ಣ ಕನ್ನಡ ರಾಜ್ಯೋತ್ಸವ-2023 ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮರೆಪ್ಪ ಮರೆಪ್ಪಗೋಳ ತಿಳಿಸಿದರು.
ಬುಧವಾರದಂದು ಪಟ್ಟಣದ ಪತ್ರಿಕಾ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಸುವರ್ಣ ಕನ್ನಡ ರಾಜ್ಯೋತ್ಸವ-2023 ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ನ.25 ರಂದು ಮಧ್ಯಾಹ್ನ 3ಗಂಟೆಗೆ ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಹತ್ತಿರ ಇಮ್ಮಡಿ ಪುಲಕೇಶ ಮತ್ತು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪಟ್ಟಣದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡುವರು.
ಭಗವಂತ ಉಪ್ಪಾರ ಮಾತನಾಡಿ, ಮೆರವಣಿಗೆಯಲ್ಲಿ ಆನೆ, ಒಂಟಿ, ಕುದುರೆ ವಿವಿಧ ಕಲಾ ತಂಡ ಮತ್ತು ವಾದ್ಯಮೇಳ, ರೂಪಕಗಳೊಂದಿಗೆ ಮೆರವಣಿಗೆಯು ಪುರಸಭೆ ರಸ್ತೆ ಮುಖಾಂತರ ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೆಮ್ಮಾದೇವಿ ವೃತ್ತ ಮತ್ತು ಬಸವೇಶ್ವರ ವೃತ್ತ ಮಾರ್ಗವಾಗಿ ಸಂಜೆ 5 ಗಂಟೆಗೆ ಜರುಗುವ ಕಾರ್ಯಕ್ರಮ ವೇದಿಕೆಯ ಬಸವರಂಗ ಮಂಟಪದಲ್ಲಿ ಜರುಗಲಿದೆ ಎಂದರು.
ಈರಪ್ಪ ಢವಳೇಶ್ವರ ಮಾತನಾಡಿ, ಸಮಾರಂಭದ ಸಾನ್ನಿಧ್ಯವನ್ನು ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿಗಳು ವಹಿಸುವರು, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತಿನ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ವಹಿಸುವರು, ಶಾಸಕರು ಹಾಗೂ ಕೆ.ಎಮ್.ಎಫ್ ನಿರ್ದೇಶಕರಾದ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು, ಮುಖ್ಯ ಅತಿಗಳಾಗಿ ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂಡಲಗಿ ತಾಲೂಕಾ ಘಟಕದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಷನ ಅಧ್ಯಕ್ಷ ರಾಹುಲ್ ಜಾರಕಿಹೊಳಿ ಹಾಗೂ ಅತಿಥಿಗಳಾಗಿ ಗೋಕಾಕ ತಹಶೀಲ್ದಾರ ಡಾ.ಮೋಹನ ಭಸ್ಮೆ, ಮೂಡಲಗಿ ತಹಶಿಲ್ದಾರ ಮಹಾದೇವ ಸನಮೂರಿ, ತಾ.ಪಂ ಇಒ ಎಫ್.ಜಿ ಚಿನ್ನನವರ, ಬಿ.ಇ.ಒ ಅಜೀತ ಮನ್ನಿಕೇರಿ, ಸಿಡಿಪಿ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್ಐ ಹಾಲಪ್ಪ ಬಾಲದಂಡಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಗಣ್ಯರಾದ ಸುಭಾಸ ಢವಳೇಶ್ವರ, ಬಸಪ್ರಭು ನಿಡಗುಂದಿ, ರವೀಂದ್ರ ಸೋನವಾಲಕರ, ಸಂತೋಷ ಸೋನವಾಲಕರ, ಸಂತೋಷ ಪಾರ್ಶಿ, ವಿಜಯಕುಮಾರ ಸೋನವಾಲಕರ, ಮಹಾದೇವ ಶೆಕ್ಕಿ, ಹಣಮಂತ ಗುಡ್ಲಮನಿ, ಡಾ.ಎಸ್.ಎಸ್.ಪಾಟೀಲ, ಈಶ್ವರ ಕಂಕಣವಾಡಿ, ಮಲ್ಲಪ್ಪ ಗಾಣಿಗೇರ, ಈರಪ್ಪ ಬನ್ನೂರ, ಅಜೀಜ ಡಾಂಗೆ, ಸಿ.ಬಿ.ನಿರ್ವಾಣಿ, ರಾಮಣ್ಣ ಹಂದಿಗುಂದ, ಪ್ರದೀಪ ಲಂಕೆಪ್ಪನವರ, ರವೀಂದ್ರ ಸಣ್ಣಕ್ಕಿ, ಅನ್ವರ ನದಾಫ್, ಸುಭಾಸ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಚಿದಾನಂದ ಶೆಟ್ಟರ, ಶಿವನಿಂಗ ಗೋಕಾಕ, ಹುಸೇನ ಶೇಖ, ಲಾಲಸಾಬ ಸಿದ್ಧಾಪೂರ, ರಾಮು ಝಂಢೇಕುರಬರ, ಪುರಸಭೆ ಸದಸ್ಯರು ಹಾಗೂ ಮತ್ತಿತರರು ಭಾಗವಹಿಸಿವರು ಮತ್ತು ಅಂದು ಸಂಜೆ ಕನ್ನಡ ನಾಡು ನುಡಿಯ ಬಗ್ಗೆ ರಸಮಂಜರಿ ಕಾರ್ಯಕ್ರಮ ವಿವಿಧ ಕಲಾವಿದರಂದ ಜರುಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯಲ್ಲಪ್ಪ ಸಣ್ಣಕ್ಕಿ, ಯಲ್ಲಪ್ಪ ಮಾನಕಪ್ಪಗೋಳ, ಚೇತನ ಹೊಸಕೋಟಿ, ಭೀಮಶಿ ತಳವಾರ, ಸುಭಾಸ ಗೋಡ್ಯಾಗೋಳ, ಕನ್ನಡರ ಸಂಘಟನೆಯ ಶಿವರಡ್ಡಿ ಹುಚರಡ್ಡಿ, ಸಚೀನ ಲಂಕೆನ್ನವರ, ಸಾವಂತ ಹೊಸಮನಿ ಮತ್ತಿತರರು ಇದ್ದರು.