Homeಸುದ್ದಿಗಳುಡಿ ಕೆ ಶಿವಕುಮಾರ್ ಗೆ ಒಕ್ಕಲಿಗರ ಜಪವಾದರೆ ಕುಮಾರ್ ಸ್ವಾಮಿಗೆ ಲಿಂಗಾಯತ ಜಪ

ಡಿ ಕೆ ಶಿವಕುಮಾರ್ ಗೆ ಒಕ್ಕಲಿಗರ ಜಪವಾದರೆ ಕುಮಾರ್ ಸ್ವಾಮಿಗೆ ಲಿಂಗಾಯತ ಜಪ

ಬೀದರನತ್ತ ಮುಖ ಮಾಡಿದ ಕುಮಾರಸ್ವಾಮಿ

ಬೀದರ – ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಕ್ಕಲಿಗರ ಸಪೋರ್ಟ್ ಬೇಡಿ, ನನಗೆ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಜಾತಿ ಲೆಕ್ಕಾಚಾರ ತುಂಬಾ ಜೋರಾಗಿ ನಡೆಯುತ್ತದೆ ಎಂದು ವಿಶ್ಲೇಷಣೆ ಮಾಡಿದ್ದಾರೆ ರಾಜಕೀಯ ವಿಶ್ಲೇಷಕರು.

ಕಾರಣವೇನೆಂದರೆ ಡಿ ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದು ಹೋದಲ್ಲೆಲ್ಲ ಲಿಂಗಾಯತರ ಜಪ ಮಾಡುತ್ತಿದ್ದಾರೆನ್ನಲಾಗಿದೆ.

ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಉತ್ತರ ಕರ್ನಾಟಕ ಭಾಗದ ಜೆಡಿಎಸ್ ನ ಎಮ್ ಎಲ್ ಎ ಹಾಗು ಎಮ್ ಎಲ್ ಸಿ ಗಳ ಪ್ರಮುಖ ನಾಯಕರ ಸಭೆ ನಡೆಸಲು ಬೀದರ್ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಇದೇ ತಿಂಗಳ 29 ದಿನಾಂಕ ರಂದು ಬೀದರ್ ನಲ್ಲಿ ಸಭೆ ನಡೆಸಲು ತೀರ್ಮಾನ ಮಾಡಿದ್ದಾರೆ.

ಸಭೆಯಲ್ಲಿ ಉತ್ತರ ಕರ್ನಾಟಕ ಬೀದರ್, ಕಲಬುರಗಿ, ಯಾದಗಿರ, ರಾಯಚೂರು, ಕೊಪ್ಪಳ, ಬಳ್ಳಾರಿ ಭಾಗದ ಪ್ರಮುಖ ನಾಯಕರನ್ನು ಸಭೆಗೆ ಕರೆದಿರುವುದಾಗಿ ಜೆ ಡಿ ಎಸ್ ಜಿಲ್ಲಾ ಅಧ್ಯಕ್ಷ ರಮೇಶ್ ಪಾಟೀಲ ಹೇಳಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚು ಇರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಪ್ರಬಲ ಸಮುದಾಯದ ಜನರ ವಿಶ್ವಾಸ ಗಳಿಸಲು ಬೀದರ್ ಪ್ರವಾಸ ಕೈಗೊಳ್ಳಲಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಪಕ್ಷ ನಡೆಸಿದ ಜನತಾ ಜಲಧಾರೆ ರಥಯಾತ್ರೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಅದೇ ರೀತಿ ಬರುವ ದಿನಗಳಲ್ಲಿ ಎಚ್ ಡಿ ದೇವೇಗೌಡರ ಮಾರ್ಗದರ್ಶನದಲ್ಲಿ ಪಂಚ ರತ್ನ ದರ್ಶನ ರಥಯಾತ್ರೆ ನಡೆಯಲಿದೆ ಎಂದು ಪಾಟೀಲ ತಿಳಿಸಿದರು.

ಒಟ್ಟಾರೆ ಹೇಳಬೇಕೆಂದರೆ ಜೆ ಡಿ ಎಸ್ ಮುಂಬರುವ ವಿಧಾನ ಸಭಾ ಚುನಾವಣೆ ರಣಕಹಳೆಯನ್ನು ಬೀದರ್ ನಿಂದ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಇದೇ ತಿಂಗಳ 29 ರಂದು ಚಾಲನೆ ನೀಡಬಹುದು ಎಂಬುದೇ ಕುತೂಹಲಕಾರಿ. ಲಿಂಗಾಯತ ಸಮುದಾಯದ ಜನರು ಯಾರ ಕಡೆ ಒಲವು ತೋರುತ್ತಾರೆ ಎಂಬುದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group