Homeಸುದ್ದಿಗಳುವಿದ್ಯಾರ್ಥಿಗಳು ಸೋಮಾರಿಗಳಾಗದೇ ಸತತ ಪರಿಶ್ರಮ ದಿಂದ ಸಾಧನೆ ಸಾಧ್ಯ - ವೈ. ಬಿ. ಕಡಕೋಳ

ವಿದ್ಯಾರ್ಥಿಗಳು ಸೋಮಾರಿಗಳಾಗದೇ ಸತತ ಪರಿಶ್ರಮ ದಿಂದ ಸಾಧನೆ ಸಾಧ್ಯ – ವೈ. ಬಿ. ಕಡಕೋಳ

ಮುನವಳ್ಳಿ: ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀರಂಗಪೂರದಲ್ಲಿ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಪದೋನ್ನತಿ ಪಡೆದ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಅನಿತಾ ಬಸವರಾಜ ಸುಣಗಾರ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಲಕ್ಷ್ಮಣ.ಚ.ಹೊಟ್ಟಿನವರ ಆಗಮಿಸಿದ್ದರು.

ಗ್ರಾಮ.ಪಂಚಾಯತಿಯ.ಸರ್ವ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕರಾಗಿ ಪ್ರೌಢ ಶಾಲಾ ಶಿಕ್ಷಕ ಮಹಾರುದ್ರಪ್ಪ ಉಪ್ಪಿನ್ ಹಾಗೂ ಬಿ. ಐ. ಇ. ಆರ್. ಟಿ ವಾಯ್.ಬಿ.ಕಡಕೋಳ ಆಗಮಿಸಿದ್ದರು.

ಸನ್ಮಾನಿತರಾಗಿ ಬಿ.ಡಿ.ಪಾಟೀಲ ಪ್ರಧಾನ ಗುರುಗಳು,ಯರಗಣವಿ, ಸದರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಎಂ. ಕೆ. ಹುಬ್ಬಳ್ಳಿ ಗೆ ಸಮೂಹ ಸಂಪನ್ಮೂಲ ವ್ಯಕ್ತಿ ಗಳಾಗಿ ವರ್ಗಾವಣೆ ಗೊಂಡ ವಿನೋದ, ಆರ್.ಪಾಟೀಲ ಹಾಗೂ ಪಕ್ಕದ ಮದ್ಲೂರ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಜಿ.ಲಮಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

“ಬಾಲಕ,ಪಾಲಕ,ಶಿಕ್ಷಕ ಇವರು ತಮ್ಮ ತಮ್ಮ ಕರ್ತವ್ಯವನ್ನು ನಿಭಾಯಿಸಿದರೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಾರವು. ಮಕ್ಕಳ ಶಿಕ್ಷಣದ ಕಡೆಗೆ ಪಾಲಕರು ಗಮನ ವಹಿಸಬೇಕು.ಗ್ರಾಮೀಣ ಪ್ರದೇಶದಲ್ಲಿಯ ಬಡತನ ಅನುಭವಿಸಿ ಶಿಕ್ಷಣ ದಲ್ಲಿ ಸಾಧನೆ ಮಾಡಿದವರ ಉದಾಹರಣೆ ನೀಡಿ ಮಕ್ಕಳಿಗೆ ಉತ್ತಮ ವಾದ ಸಲಹೆಗಳನ್ನು ಮಲ್ಲಿಕಾರ್ಜುನ ಉಪ್ಪಿನ್ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

ವಿದ್ಯಾರ್ಥಿಗಳು ಸೋಮಾರಿಗಳಾಗದೇ ಸತತ ಪರಿಶ್ರಮ ಪಟ್ಟರೆ ಸಾಧನೆ ಸಾಧ್ಯ ಎಂದು ವ್ಯಾಪಾರಿ ಯೊಬ್ಬನ ಕತೆಯನ್ನು ದೃಷ್ಟಾಂತ ರೂಪದಲ್ಲಿ ವೈ. ಬಿ. ಕಡಕೋಳ ತಿಳಿಸಿದರು.

ಶ್ರೀರಂಗಪೂರ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿಸಿ, ಜಿಲ್ಲಾ ಮಟ್ಟದ ಉತ್ತಮ ಶಾಲೆ ಹಾಗೂ ಉತ್ತಮ ಎಸ್.ಡಿ.ಎಮ್.ಸಿ.ಪ್ರಶಸ್ತಿ ಮತ್ತು ತಾಲೂಕು ಮಟ್ಟದ ಉತ್ತಮ ಶಾಲೆ ಎಂಬ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾದ ಪದೋನ್ನತಿ ಹೊಂದಿದ ಬಿ.ಡಿ.ಪಾಟೀಲ ಶಿಕ್ಷಕರನ್ನು ಊರಿನ ಗಣ್ಯರು ಹಾಗೂ ಶಿಕ್ಷಕರು ಸನ್ಮಾನಿಸಿದರು.

ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ಸಿ.ಆರ್.ಪಿ.ಗಳಾಗಿ ವರ್ಗಾವಣೆ ಗೊಂಡ ಶ್ರೀ ವಿನೋದ್ ಪಾಟೀಲ ಅವರನ್ನು ಶಿಕ್ಷಕರು ಸನ್ಮಾನಿಸಿದರು. ಮದ್ಲೂರ ಶಾಲೆಯಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಎಸ್.ಜಿ.ಲಮಾಣಿ ಶಿಕ್ಷಕರನ್ನು ಕೂಡ ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಸನ್ಮಾನಿಸಿದರು.

‘ಸಿಂಚನ’ಎಂಬ ಕಿರುಹೊತ್ತಿಗೆಯನ್ನು ವೇದಿಕೆಯ ಗಣ್ಯರು ಬಿಡುಗಡೆಗೊಳಿಸಿದರು.

ಶಾಲಾ ಮಕ್ಕಳು ಜ್ಯೋತಿ ಬೆಳಗಿಸುವ ಉದ್ಘಾಟನಾ ದೀಪಸ್ತಂಭ ವನ್ನು ಶಾಲೆಗೆ ಕಾಣಿಕೆ ನೀಡಿದರು. ಅಷ್ಟೇ ಅಲ್ಲ ದೇ ಸಾವಿತ್ರಿ ಬಾಯಿ ಫುಲೆ ಮತ್ತು ಸಂಗೊಳ್ಳಿ ರಾಯಣ್ಣನ ಭಾವಚಿತ್ರಗಳನ್ನು ನೆನಪಿನ ಕಾಣಿಕೆಯಾಗಿ ನೀಡಿದರು.

ನಂತರದಲ್ಲಿ ನಡೆದ ಮಕ್ಕಳ ಮನರಂಜನಾ ಕಾರ್ಯಕ್ರಮಗಳಾದ ಗಂಧರ್ವ ಸೇನ-ನಾಟಕ, ಪತಿ ಯಾರು?-ನಾಟಕ, ಕೋಲು ಕೋಲೆನ್ನ ಕೋಲೆ-ಕೋಲಾಟ, ಜೈ ಹೋ -ನೃತ್ಯ, ಎಷ್ಟು ಚಂದ ಐತೆ-ಹಾಡು, ಅರಿಷಿಣ ಕುಂಕುಮ ಷೋಭಿತೆ-ನೃತ್ಯ ಇನ್ನೂ ಹಲವಾರು ನೃತ್ಯ ಗಳು ಸಭಿಕರ ಮೆಚ್ಚುಗೆ ಪಡೆದವು.

ಅತಿಥಿಗಳಾಗಿ ಆಗಮಿಸಿದ್ದ ಮಲ್ಲಿಕಾರ್ಜುನ ಉಪ್ಪೀನ ಹಾಗೂ ವೈ. ಬಿ. ಕಡಕೋಳರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಲೆ ನಡೆದು ಬಂದ ದಾರಿಯನ್ನು ಶಾಲೆಯ ಶಿಕ್ಷಕರಾದ ಎಸ್.ಎಚ್.ಪಚ್ಚಿನವರ ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಂಗವಾಗಿ ಶಾಲಾ ಮಕ್ಕಳು ಪ್ರಸ್ತುತ ಪಡಿಸಿದ ವಿಜ್ಞಾನ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ಇದೇ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಯವರಿಗೆ ಬಿ.ಡಿ.ಪಾಟೀಲ ಅವರು ಉಡುಗೊರೆ ನೀಡಿದರು.ಇದೇ ಸಂದರ್ಭದಲ್ಲಿ ಆದರ್ಶ ವಿದ್ಯಾರ್ಥಿ ವಿದ್ಯಾರ್ಥಿನಿಯ ಹೆಸರನ್ನು ಹೇಳುವ ಮೂಲಕ ಅವರನ್ನು ಸನ್ಮಾನಿಸಲಾಯಿತು.

ಸಭಿಕರನೆಲ್ಲ ಸ್ವಾಗತಿಸಿ ಮಾಲಾರ್ಪಣೆ ಕಾರ್ಯಕ್ರಮವನ್ನು ಶ್ರೀ ವಿ.ಪಿ.ಸೋನೋನೆ ಹಾಗೂ ಶ್ರೀ ಸುರೇಶ ದೇಶನೂರ ನಡೆಸಿಕೊಟ್ಟರು.‌ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯ ರಾದ ಗುರುದೇವಿ.ಎನ್.ಮಲಕಣ್ಣವರ.ನಿರೂಪಿಸಿದರು. ಬಿ.ಜಿ.ದೇವಡಿ ವಂದಿಸಿದರು. ಮಕ್ಕಳ ಗ್ರುಪ್ ಪೋಟೋ ತಗೆಸಿಕೊಳ್ಳುವುದರೊಂದಿಗೆ ಕಾರ್ಯ ಕಾರ್ಯಕ್ರಮ ಕೊನೆಗೊಂಡಿತು.

RELATED ARTICLES

Most Popular

error: Content is protected !!
Join WhatsApp Group