ಸಿಂದಗಿ : ಮಕ್ಕಳ ಭಿಕ್ಷಾಟನೆ ತಡೆಯುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿದ್ದರುು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಹರ್ಷವರ್ಧನ ಪೂಜಾರಿ ಮಾತನಾಡಿ, ವಿದ್ಯಾಭ್ಯಾಸ ಕಲಿತು ಸಮಾಜ ಕಟ್ಟಬೇಕಿರುವ ಮಕ್ಕಳು ಹಾಡು ಹಗಲೆ ಬಿಕ್ಷಾಟನೆಗೆ ಇಳಿದಿರುವುದು ವಿಚಾರ ಆರೋಗ್ಯವಂತ ಸಮಾಜ ತಲೆ ತಗ್ಗಿಸುವಂತಾಗಿದೆ. ಪಟ್ಟಣದಲ್ಲಿ ತುಂಬಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ತೊರೆದು ನಗರದ ಕಚೇರಿಗಳ ಸುತ್ತ ಮುತ್ತ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ತಮಗರಿವಿಲ್ಲದೆ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾರೆ ಪರಿಸ್ಥಿತಿ ಅದರಲ್ಲಿ ಕೆಲವೊಂದು ಮಕ್ಕಳಿಗೆ ಕನ್ನಡ ಭಾಷೆ ಬರುವುದಿಲ್ಲ ಕನ್ನಡ ಭಾಷೆ ಬರದ ಮಕ್ಕಳು ಏನು ಹೇಳಿದರೂ ಅಂಗಡಿ ಮುಂಗಟ್ಟು ಬಿಟ್ಟು ಹೋಗುವುದಿಲ್ಲ ರಸ್ತೆ ಮಧ್ಯದಲ್ಲಿ ಜೀವದ ಭಯವಿಲ್ಲದೆ ಬೇಕಾ ಬಿಟ್ಟಿ ಅಡ್ದಾಡುತಿದ್ದಾರೆ ಆದ ಕಾರಣ ತಾಲೂಕು ದಂಡಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾಭ್ಯಾಸ ಮಾಡಬೇಕಾಗಿರುವ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿ ವಿದ್ಯಾರ್ಥಿ ಬದುಕನ್ನು ಕಟ್ಟಿಕೊಡಬೇಕೆಂದು ಹೇಳಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಅತೀ ಶೀಘ್ರದಲ್ಲೇ ಭಿಕ್ಷಾಟನೆ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸುಮೀತ್ ಕಕ್ಕಸಗೇರಿ, ತುಳಸಿರಾಮ ಮೇಲಿನಮನಿ, ಯಲ್ಲು ದೊಡಮನಿ, ಪ್ರಶಾಂತ್ ಶಿವಣಗಿ, ಮಲ್ಲಿಕಾರ್ಜುನ ಮಸರಕಲ್ಲ, ಹಾಗೂ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಉಪಸ್ಥಿತರಿದ್ದರು.