ಕವನ : ಕವಿತೆಯ ಅಳಲು

Must Read

ಕವಿತೆಯ ಅಳಲು

ಸಾಲ ಮಾಡಿ ಕವನ ಸಂಕಲನ
ಪ್ರಕಟಿಸಿದ ನಮ್ಮ ಕವಿಗೆ
ಸಾಹಿತ್ಯ ಸಮ್ಮೇಳನದಲ್ಲಿ
ಶಾಲು ಹೊದಿಸಿ ಸನ್ಮಾ ನಿಸಿ
ಹಾಡಿ ಹೊಗಳಿದರು
ಮನೆಯಲ್ಲಿ ಮಡದಿ ರೇಗಿದಳು
ಹೊದ್ದುಕೊಂಡು ಶಾಲು ಬೆಚ್ಚಗೆ
ಮಲಗಿರಿ ರೂಮಲ್ಲಿ ತೆಪ್ಪಗೆ
ಮತ್ತೆ ಕವಿತೆ ಬರೆದರೆ
ನಾ ಹೋಗುವೆ ತೌರಿಗೆ !
ಹೆಂಡತಿ ಬಿಟ್ಟರೂ ನಮ್ಮ ಕವಿ
ನನ್ನನ್ನು ಬಿಡುವನೆ
ಬಿಡದೆ ಬರೆದನು ಬಂಡಾಯ ಕವಿತೆ
ಮುನಿದು ಮಡದಿ ತವರಿಗೆ
ನಮ್ಮ ಕವಿ ಅಡಿಗೆ ಮನೆ ಒಳಗೆ !
ಕೋಸಂಬರಿಯಿಂದ ಕಾದಂಬರಿ ವರೆಗೆ
ಅಡಿಗೆ ಮನೆ ಸಾಹಿತ್ಯ ಬರೆದನು
ಮಡದಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸಿದನು
ಬಿಸಿ ಬಿಸಿ ದೋಸೆಯಂತೆ ಖರ್ಚಾಗಿ
ಮಡದಿ ಬೆಳಕಿಗೆ ಬಂದಳು
ನಮ್ಮ ಕವಿ ಕತ್ತಲೆಗೆ ಸರಿದನು
ಕವಿಯ ಮಡದಿ ಈಗ ಸಮಾಜ ಸುಧಾರಕಿ
ನಮ್ಮ ಕವಿ ಅಡಿಗೆ ಮನೆ ಸುಧಾರಕ !
—-
ಗೊರೂರು ಅನಂತರಾಜು, ಹಾಸನ
9449462879

ವಿಳಾಸ: ಹುಣಸಿನಕೆರೆ ಬಡಾವಣೆ
29ನೇ ವಾರ್ಡ್,
3 ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201

Latest News

ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತಕಲಬುರ್ಗಿ - ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ...

More Articles Like This

error: Content is protected !!
Join WhatsApp Group