Homeಕವನಕವನ : ಕವಿಯ ಕಾವ್ಯದಂಗಳ

ಕವನ : ಕವಿಯ ಕಾವ್ಯದಂಗಳ

ಕವಿಯ ಕಾವ್ಯದಂಗಳ

ಕಾವ್ಯವೊಂದು ಅದ್ಭುತ ಜಗದ ಶ್ರವಣ
ಸಂಭ್ರಮಿಸುವ ಧಿಗ್ಭ್ರಮಿಸುವ ಸ್ಫುರಣ
ಕಣ್ಣಿಗೆ ಕಂಗೊಳಿಸುವ ದೃಶ್ಯಗಳಾಭರಣ
ಸೌಗಂಧ ಶ್ರೀಗಂಧ ಪರಿಸರದ ಅನಾವರಣ
ಸಂಪ್ರೀತಿ ಸಂತೃಪ್ತಿ ತಂದ ಹೃದಯದಂಗಣ
ಕವಿಯಲ್ಲಿ ಸಂಚರಿತ ಸ್ಪುರಣದ ಹೂರಣ

ಕಾವ್ಯ ಜೀವನದ ಅನುಭವಗಳ ಹಂದರ
ಕೆದಕಿ ಶೇಖರಿಸಿದ ಬಿತ್ತಣಿಕೆಯ ಸಂಚಾರ
ಬರವಣಿಗೆಯಲ್ಲಿ ಹರಿದ ಶಬ್ದಗಳ ಶರ
ಕವಿಯ ವರ್ಣನೆಯಲ್ಲಿ ಅರಳಿದ ಅಕ್ಷರ
ಓದುಗರ ಹೃದಯ ತಟ್ಟುವ ಭ್ರಮರ
ಕನ್ನಡಮ್ಮ ಹಾರೈಸುತ ನೀಡಿಹಳು ವರ

ಕವಿಯ ಕಲ್ಪನೆಯ ಶರಧಿಯ ಆಳ
ಅರಳಿ ಪುಟಿಪುಟಿದೇಳುವ ಸ್ವರತಾಳ
ಕಾವ್ಯ ಲಹರಿ ಸ್ಪಂದನೆಯ ಮಿಡಿತದಾಳ
ಮನದಿಂದ ಮನಕ್ಕೆ ಪೋಣಿಪುದು ಸರಳ
ವಿಶ್ವ ಕಾವ್ಯ ದಿನದೊಂದು ಈ ನನ್ನ ಕವನ
ತಲುಪಲಿ ಕವಿಗಳ ಕಾವ್ಯದ ಪ್ರಾಂಗಣ

ಶ್ರೀಮತಿ ಸುಲೋಚನಾ ಮಾಲಿಪಾಟೀಲ.

RELATED ARTICLES

Most Popular

error: Content is protected !!
Join WhatsApp Group