ಕವನ : ಕವಿಯ ಕಾವ್ಯದಂಗಳ

Must Read

ಕವಿಯ ಕಾವ್ಯದಂಗಳ

ಕಾವ್ಯವೊಂದು ಅದ್ಭುತ ಜಗದ ಶ್ರವಣ
ಸಂಭ್ರಮಿಸುವ ಧಿಗ್ಭ್ರಮಿಸುವ ಸ್ಫುರಣ
ಕಣ್ಣಿಗೆ ಕಂಗೊಳಿಸುವ ದೃಶ್ಯಗಳಾಭರಣ
ಸೌಗಂಧ ಶ್ರೀಗಂಧ ಪರಿಸರದ ಅನಾವರಣ
ಸಂಪ್ರೀತಿ ಸಂತೃಪ್ತಿ ತಂದ ಹೃದಯದಂಗಣ
ಕವಿಯಲ್ಲಿ ಸಂಚರಿತ ಸ್ಪುರಣದ ಹೂರಣ

ಕಾವ್ಯ ಜೀವನದ ಅನುಭವಗಳ ಹಂದರ
ಕೆದಕಿ ಶೇಖರಿಸಿದ ಬಿತ್ತಣಿಕೆಯ ಸಂಚಾರ
ಬರವಣಿಗೆಯಲ್ಲಿ ಹರಿದ ಶಬ್ದಗಳ ಶರ
ಕವಿಯ ವರ್ಣನೆಯಲ್ಲಿ ಅರಳಿದ ಅಕ್ಷರ
ಓದುಗರ ಹೃದಯ ತಟ್ಟುವ ಭ್ರಮರ
ಕನ್ನಡಮ್ಮ ಹಾರೈಸುತ ನೀಡಿಹಳು ವರ

ಕವಿಯ ಕಲ್ಪನೆಯ ಶರಧಿಯ ಆಳ
ಅರಳಿ ಪುಟಿಪುಟಿದೇಳುವ ಸ್ವರತಾಳ
ಕಾವ್ಯ ಲಹರಿ ಸ್ಪಂದನೆಯ ಮಿಡಿತದಾಳ
ಮನದಿಂದ ಮನಕ್ಕೆ ಪೋಣಿಪುದು ಸರಳ
ವಿಶ್ವ ಕಾವ್ಯ ದಿನದೊಂದು ಈ ನನ್ನ ಕವನ
ತಲುಪಲಿ ಕವಿಗಳ ಕಾವ್ಯದ ಪ್ರಾಂಗಣ

ಶ್ರೀಮತಿ ಸುಲೋಚನಾ ಮಾಲಿಪಾಟೀಲ.

Latest News

ಕವನ : ನೆಲದ ನಾಲಿಗೆ ಮೇಲೆ

ನೆಲದ ನಾಲಿಗೆ ಮೇಲೆ​ಆ ಗುಡಿಸಲೊಳಗೆ ಬರೀ ಬಿಕ್ಕಳಿಕೆಗಳೆ ಸುಕ್ಕುಗಟ್ಟಿವೆ, ನೆತ್ತರು ಮೆತ್ತಿದ ಪ್ರಶ್ನೆಗಳು- ಇನ್ನೂ ಉಸಿರಿಡಿದಿವೆ. ​ಈ ಅರಮನೆಯೊಳಗೆ ಬರೀ ಸೊಕ್ಕುಗಳೆ ತೊಟ್ಟಿಕ್ಕುತ್ತಿವೆ; ಹಾಲಾಹಲದ ನಂಜುಂಡು, ಬಡಿವಾರದಲಿ ಗರ ಬಡಿದಂತೆ ಹಾಸಿದೆ ಬೆಳಕು. ​ಆ ಗುಡಿಸಲೊಳಗೆ ಸುಖದ ಹಾದಿ ರಜೆ ಪಡೆದು, ಬಾಳು...

More Articles Like This

error: Content is protected !!
Join WhatsApp Group