ಕವನ : ಕರುನಾಡ ಒಡೆಯರು

Must Read

ಕರುನಾಡ ಒಡೆಯರು

ಕರುನಾಡ ಒಡೆಯರು
ಕನ್ನೆಲದ ಧೀರರು
ಕನ್ನಡವ ಕಟ್ಟಿದರು
ಕಲ್ಯಾಣ ಶರಣರು

ದೇವ ಭಾಷೆಯ ತೊರೆದು
ಜನ ಭಾಷೆ ಮೆರೆದು
ಸತ್ಯದ ಕೂರಲಗದೀ
ಕನ್ನಡ ನುಡಿ ಕಟ್ಟಿದರು

ಚಂಪೂ ಮೋಹವ ಬಿಟ್ಟು
ದೇಸಿ ಪ್ರಜ್ಞೆಯ ಕಟ್ಟು
ಕಾಯಕದ ಧರ್ಮವನು
ಕಟ್ಟಿದರು ಶರಣರು

ಹಾಸಿ ದುಡಿದರು ಜನ
ಹಂಚಿ ತಿನ್ನುವ ಮನ
ದಾಸೋಹದ ಮಂತ್ರವ
ಜಪಿಸಿದರು ಶರಣರು

ಅಗ್ರ ಅಂತ್ಯಜರ ಸಂಭ್ರಮದ
ಮದುವೆಯಲಿ
ಶರಣ ಸಮ್ಮತ ಕಾಲ
ಸಮ ಬಾಳು ಸಮ ಪಾಲು

ಬಸವ ಕೋಟೆಗೆ ಮತ್ತೆ
ಲಗ್ಗೆ ಹಾಕುವ ಜನರು
ವಿಷಮತೆಯ ಬೀಜ
ಬಿತ್ತ ಬಹುದು

ಹಸನಾಗಲಿ ಕರುನಾಡು
ಉಸಿರು ಬಸವನ ಬೀಡು
ವಚನಗಳ ಅಸ್ತ್ರಗಳು
ಭುಗಿಲು ನೆಲ ಮುಗಿಲು

ಜಯವಾಗಲಿ ಕರ್ನಾಟಕ
ಜಯ ಜಯತು ಕರುನಾಡು
ಬಸವ ಶರಣರ ನಾಡು
ಶಾಂತಿ ಸಮತೆಯ ನೆಲೆವೀಡು
_________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ

LEAVE A REPLY

Please enter your comment!
Please enter your name here

Latest News

ಯಾವುದು ಸರಿ, ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ?

೧೯೫೬ ನವಂಬರ್ ೧ ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಲ್ಲ ಸೇರಿ ಮೈಸೂರು ರಾಜ್ಯ ಉದಯವಾಯಿತು. ಆಗ...

More Articles Like This

error: Content is protected !!
Join WhatsApp Group