ಕವನ : ಇದೂ ಒಂದು ಭ್ರಷ್ಟ ಸರ್ಕಾರ

Must Read

ಇದೂ ಒಂದು ಭ್ರಷ್ಟ ಸರಕಾರ

ಇದು ಭ್ರಷ್ಟ ಸರಕಾರ
ಹೌದು, ಇದೂ ಒಂದು
ಭ್ರಷ್ಟ ಸರಕಾರ
ಸಿ ಎಂ.ಕುರ್ಚಿಗೆ ನಿತ್ಯ
ಕದನ ಕಾದಾಟ
ಭೋವಿ ವಾಲ್ಮೀಕಿ ನಿಗಮಗಳ
ಖಾಲಿ ಮಾಡಿ ಮಾರಾಟ
ಕನ್ನಡ ಕೊಲ್ಲುವ ಕೆಲಸ
ನಿತ್ಯ ರಾಜ್ಯೋತ್ಸವದ ಕೂಗಾಟ
ಸಂಗೊಳ್ಳಿ ರಾಯಣ್ಣನ ಸಂಸ್ಥೆಯ
ಗ್ರಾಹಕರ ಠೇವಣಿಗೆ ಪರದಾಟ
ಬರೀ ಹುಸಿ ಭರವಸೆ
ಪಾಪ ಮುಖ್ಯಮಂತ್ರಿಗಳು
ಬಸವ ಜಯಂತಿ ದಿನ
ಪ್ರಮಾಣವಚನ ಪಡೆದಿದ್ದಾರೆ
ಬಸ್, ಕರೆಂಟ್ ಫ್ರೀ
ತೆರಿಗೆ ಮುಗಿಲು ಮುಟ್ಟಿದೆ
ಬೆಲೆ ಏರಿಕೆ ನಿಲ್ಲಲೊಲ್ಲದು
ಮಂತ್ರಿಗಳ ಪ್ರವಾಸ ಭತ್ಯೆ
ಸಾಹಿತ್ಯ ಪರಿಷತ್ ಅಧ್ಯಕ್ಷನ
ಭಯಂಕರ ಬಾನಗಡಿ
ವಿರೋಧ ಪಕ್ಷದವರು ಮಲಗಿದ್ದಾರೆ
ಇಲ್ಲಾ ಮಲಗಿದಂತೆ ನಟನೆ
ಎಲ್ಲದ್ದಕ್ಕೂ ಕೊಡಬೇಕು
ಲಂಚ ಸಂಬಳದ ಮೇಲೆ ಗಿಂಬಳ
ಎಲ್ಲಾ ಕಾವಿ, ಖಾದಿಗಳು
ಪ್ರಯಾಗರಾಜದಲ್ಲಿ
ಮುಳುಗಿ ಶುದ್ಧವಾದರೂ
ರಾಮ ಕೃಷ್ಣ ಅಳುವುದನ್ನು
ನಿಲ್ಲಿಸಿಲ್ಲ ಚುನಾವಣೆ ಭಾಷಣ
ಇವಿಎಂ ಕೃಪೆಯಿದ್ದರೆ ಗೆಲುವು
ಕೋತಿಗೆ ಪಟ್ಟಾಭಿಷೇಕ
ನರಿಯ ಪೌರೋಹಿತ್ಯ
ಕುರಿಗಳು ಆಹೇರಿ ಹಾಕಲು
ಸಾಲಿನಲ್ಲಿ ನಿಂತಿದ್ದಾರೆ.
ಮತ್ತೆ ಭದ್ರತೆಯ ಮೇಲೆ
ನೂರೆಂಟು ದಾಳಿ

________________________
ನಿರಂಜನ ಪಾಟೀಲ ಬೆಳಗಾವಿ

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group