ಕವನ : ಪ್ರಕೃತಿಗೆ ವಿನಮ್ರ ಬೇಡಿಕೆ

Must Read

ಪ್ರಕೃತಿಗೆ ವಿನಮ್ರ ಬೇಡಿಕೆ

ಬಿಸಿಲಿನಿಂದ ಬಸವಳಿದ
ಭೂರಮೆಯ ತಣಿಸಲು
ಬಂದ ಮಾಯಾವಿ ಮಳೆಯೇ
ಏಕಿಷ್ಟು ಕ್ರೂರ ವರ್ತನೆ ?

ಧರೆಯ ಮೇಲಿನ ಸ್ವರ್ಗವೆನಿಸಿದ
ವಯನಾಡನ್ನು
ನರಕಕ್ಕೆ ಸಮ ಮಾಡಿಬಿಟ್ಟು
ಬದುಕನ್ನು ನಾಶ ಮಾಡಿದ
ಪಾಶಾವಿಯೇ
ಏಕೀ ಮುನಿಸು ಹೇಳು ?

ನೀನಿರುವುದೇ ನಮಗಾಗಿ
ಎಂಬ ಮಾನವನ ಅಟ್ಟಹಾಸಕ್ಕೆ
ಪಾಠ ಕಲಿಸಲು
ಸುಖಪಡುತ್ತಿದ್ದ ನಮ್ಮವರ
ಬದುಕು ಬರ್ಬರವಾಗಿಸಿ
ಯಾವ ಸುಖ ಕಂಡೆ
ಹೇಳು ಮೇಘ ಮಂದಾರವೇ?

ಹಸುಗೂಸು, ಹೆತ್ತ ತಾಯಿ, ಹಿರಿಯರು ಕಿರಿಯರೆನ್ನದೇ
ಆಸ್ತಿ ಪಾಸ್ತಿ ಎಲ್ಲಾ ನುಂಗಿ
ನೀರು ಕುಡಿದೆ
ನಾವು ಬದುಕುವುದು ಇಷ್ಟವಿಲ್ಲವೇ
ಹೇಳು ಪ್ರಕೃತಿ ಮಾತೆಯೇ ?

ಬಾಳಿನಲಿ ನೂರಾರು ಕನಸುಗಳನ್ನು ಕಟ್ಟಿಕೊಂಡು
ನಿನ್ನ ನೆರಳಿನಲ್ಲಿ ಬದುಕು
ಅರಸುತ್ತಿರುವೆ
ದಯವಿಟ್ಟು ನಿನ್ನ ರುದ್ರನರ್ತನ ನಿಲ್ಲಿಸುವೆಯಾ ಓ‌ ನಿಸರ್ಗ ದೇವತೆ ?

ನೀನು ನಮ್ಮ ಬದುಕಿನ
ಭರವಸೆಯ ಹೊಂಗಿರಣ
ಬೆಂಕಿಯಾಗಿ ಕಾಡದಿರು
ಮಾನವ ಕುಲದ
ವಿನಮ್ರ ಬೇಡಿಕೆ ಇಷ್ಟೇ
ಸಂತಸದಿ ಬಾಳುವ ವರವೆಮಗೆ ನೀಡು                       ತಾಯಿ ಪ್ರಕೃತಿ ಮಾತೆ

ಶಿವಕುಮಾರ ಕೋಡಿಹಾಳ.                                ಮೂಡಲಗಿ

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group