ಕವನ : ಕೊರಡು ಕೊನರಲು

Must Read

ಕೊರಡು ಕೊನರಲು

ನೀನೊಲಿದಾಗಲೇ ನಾ ಬೀಜ ಮೊಳೆತು ನವಿರಾಗಿ ಚಿಗುರಿದ್ದು ಹಚ್ಚ ಹಸಿರಿನ ವೈಶಾಲ್ಯತೆಯಲಿ
ಬೆಳೆದು ಮರವಾಗಿ ನೆರಳು
ಹೂ ಹಣ್ಣು ಕಾಯಿ ನೀಡಿದ್ದು//

ನೀನೊಲಿದಾಗಲೇ ನಾ ಸಸಿ
ಬಲಿತು ಹೆಮ್ಮರವಾಗಿದ್ದು
ಅಂಗಳದ ತುಂಬೆಲ್ಲಾ ಟೊಂಗೆ
ಪಂಗ ಪಂಗಳವಾಗಿ ಹರಡಿ
ಬಿಸಿಲ ಝಳಕೆ ತಂಪಾಗಿದ್ದು//

ನಿನ್ನೊಲುಮೆಯ ಮರೆತ
ಧೂರ್ತ ಹುಲು ಮಾನವನೀಗ
ನನ್ನಿರವ ಬುಡ ಕಡಿದಾಗ ನಾ
ಬರೀ ಒಣಗಿದ ಕೊರಡಾಗಲು
ಮಾಡುವದು ಇನ್ನೇನು?//

ಸುತ್ತ ಚೆಲ್ಲಿದ ಹಸಿ ಮಣ್ಣಿನ
ಪಸೆಯ ಹೀರುತ ಬದುಕಲು
ಬೇರುಗಳ ಹರಡಿ ಗುಪ್ತ ಜಲದ ಸೆಲೆಯ ಹುಡುಕುತಲಿ ಮತ್ತೆ ಮೋಡ ಮಳೆಗಾಗಿ ಕಾದಿರುವೆ//

ಕೊನರಲೇಬೇಕು ಕೊರಡು
ಬದುಕುವದು ಸುಲಭವಲ್ಲ  ಕೊನೆಯಾಸೆ ಈ ಬಡ ಜೀವಕೆ
ತಿಳಿದವರು ನಾಲ್ಕು ಹನಿ
ಕಣ್ಣೀರಾದರೂ ಸುರಿವರಲ್ಲ//

ಶ್ರೀಮತಿ ಶಾರದಾ ವೀರಣ್ಣ ಬೆಟಗೇರಿ. ಗಂಗಾವತಿ.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group