spot_img
spot_img

ಕವನ : ಕೊರಡು ಕೊನರಲು

Must Read

spot_img
- Advertisement -

ಕೊರಡು ಕೊನರಲು

ನೀನೊಲಿದಾಗಲೇ ನಾ ಬೀಜ ಮೊಳೆತು ನವಿರಾಗಿ ಚಿಗುರಿದ್ದು ಹಚ್ಚ ಹಸಿರಿನ ವೈಶಾಲ್ಯತೆಯಲಿ
ಬೆಳೆದು ಮರವಾಗಿ ನೆರಳು
ಹೂ ಹಣ್ಣು ಕಾಯಿ ನೀಡಿದ್ದು//

ನೀನೊಲಿದಾಗಲೇ ನಾ ಸಸಿ
ಬಲಿತು ಹೆಮ್ಮರವಾಗಿದ್ದು
ಅಂಗಳದ ತುಂಬೆಲ್ಲಾ ಟೊಂಗೆ
ಪಂಗ ಪಂಗಳವಾಗಿ ಹರಡಿ
ಬಿಸಿಲ ಝಳಕೆ ತಂಪಾಗಿದ್ದು//

- Advertisement -

ನಿನ್ನೊಲುಮೆಯ ಮರೆತ
ಧೂರ್ತ ಹುಲು ಮಾನವನೀಗ
ನನ್ನಿರವ ಬುಡ ಕಡಿದಾಗ ನಾ
ಬರೀ ಒಣಗಿದ ಕೊರಡಾಗಲು
ಮಾಡುವದು ಇನ್ನೇನು?//

ಸುತ್ತ ಚೆಲ್ಲಿದ ಹಸಿ ಮಣ್ಣಿನ
ಪಸೆಯ ಹೀರುತ ಬದುಕಲು
ಬೇರುಗಳ ಹರಡಿ ಗುಪ್ತ ಜಲದ ಸೆಲೆಯ ಹುಡುಕುತಲಿ ಮತ್ತೆ ಮೋಡ ಮಳೆಗಾಗಿ ಕಾದಿರುವೆ//

ಕೊನರಲೇಬೇಕು ಕೊರಡು
ಬದುಕುವದು ಸುಲಭವಲ್ಲ  ಕೊನೆಯಾಸೆ ಈ ಬಡ ಜೀವಕೆ
ತಿಳಿದವರು ನಾಲ್ಕು ಹನಿ
ಕಣ್ಣೀರಾದರೂ ಸುರಿವರಲ್ಲ//

- Advertisement -

ಶ್ರೀಮತಿ ಶಾರದಾ ವೀರಣ್ಣ ಬೆಟಗೇರಿ. ಗಂಗಾವತಿ.

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group