ಕವನ

Must Read
ಜಗವೆ ಕೂಡಲ ಸಂಗಮ
ಬಸವ ಬಳ್ಳಿ ಲಿಂಗ ಜಂಗಮ
ಜಗವೆ ಕೂಡಲ ಸಂಗಮ.
ಅರಿವೇ ಗುರುವು, ನಡೆಯು ಲಿಂಗ
ನುಡಿಯೇ ಅಮರ ಜಂಗಮ

ಅಂಗವಳಿದು ಲಿಂಗವಿಡಿದು
ಶರಣ ಬಾಳು ಸ್ಪಂದನ
ಲಿಂಗ ಮಜ್ಜನ ಪಾದದುದಕ
ಅರಿವು  ಸ್ಪೂರ್ತಿಯ ಸಿಂಚನ

ಸತ್ಯವೆಂಬುದೆ ನಿತ್ಯ ಪಠಣ,
ನೀತಿ ಪಾಠದ ಮಂಥನ
ನೆಲದ ಮೇಲೆ ಬೆಳಕು ಚೆಲ್ಲಿದೆ
ಜಗದಿ ನಿತ್ಯ ವಚನ ಚಿಂತನ

ಒಂದು ಮಾಡಿದ ಹಿರಿದು ಕಿರಿದು
ಸಮತೆವೆಂಬ ದೀಪವು
ಉಚ್ಚ  ನೀಚ ಬೇಧ  ಹರಿಯಿತು
ಅದುವೇ ಧರ್ಮ ಧೂಪವು

ಗುಡಿಗಳೆಲ್ಲ ನಲುಗಿ ಹೋದವು
ವೇದ ಶಾಸ್ತ್ರ ಪುರಾಣವು
ದಲಿತ -ಮಹಿಳೆ -ಅಸಹಾಯಕರು
ಬಸವ ಧರ್ಮದ ಒಡೆಯರು

ಜಿಡ್ಡುಗಟ್ಟಿದ ಕಟ್ಟು ಕಳಚಿತು
ಮುಕ್ತ ವಿಶ್ವದ ಪ್ರೇಮವು
ಬಸವನುಸಿರೆ ದಿವ್ಯ  ಮಂತ್ರವು
ಲಿಂಗವಂತ ಸ್ವತಂತ್ರವು

ಡಾ. ಶಶಿಕಾಂತ. ರು. ಪಟ್ಟಣ -ಪೂನಾ
Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group