ಬೀದರ – ರಾಜ್ಯಾದ್ಯಂತ ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಶಾಂತಿ ಕಾಪಾಡುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆ ವರಿಷ್ಠ ಪೊಲೀಸ್ ಅಧಿಕಾರಿ ಕಿಶೋರ್ ಬಾಬು ಹಾಗು ಡಿವೈಸ್ ಪಿ ಸತೀಶ್ ನೇತೃತ್ವದಲ್ಲಿ ಬೀದರ್ ಜಿಲ್ಲೆಯ ಪ್ರಮುಖ ರಸ್ತೆಯಲ್ಲಿ ಪೋಲಿಸ್ ಪರೇಡ್ ನಡೆಸಲಾಯಿತು.
ಈ ಮೂಲಕ ಜಿಲ್ಲೆಯಲ್ಲಿ ಶಾಂತತೆ ಯನ್ನು ಕಾಪಾಡುವಂತೆ ಬೀದರ ಪೊಲೀಸ್ ಇಲಾಖೆಯ ವತಿಯಿಂದ ಮನವಿ ಮಾಡಿಕೊಳ್ಳಲಾಯಿತು.
ಕಳೆದ ಎರಡು ವಾರಗಳಿಂದ ಹಿಜಾಬ್ ವಿಚಾರ ವಾಗಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ನಡೆಯುತಿರುವ ಸಂಘರ್ಷವನ್ನು ಹತ್ತಿಕಲು ರಾಜ್ಯ ಸರ್ಕಾರ ಕಳೆದ ನಾಲ್ಕು ದಿನಗಳಿಂದ ಶಾಲಾ ಕಾಲೇಜು ಗಳಿಗೆ ರಜೆಯನ್ನು ಘೋಷಿಸಿತು. ಆದರೆ ಹಿಜಾಬ್ ವಿಚಾರ ಹೈಕೋರ್ಟ್ ನಲ್ಲಿ ಇರುವ ಕಾರಣ ಕಳೆದ ಶುಕ್ರವಾರ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಂತೆ ರಾಜ್ಯ ಸರ್ಕಾರವು ನಾಳೆ ಯಿಂದ ಶಾಲಾ ಕಾಲೆಜು ಆರಂಭಿಸಲು ಆದೇಶ ನೀಡಿದೆ. ಈ ಕಾರಣ ಬೀದರ ಜಿಲ್ಲಾ ಪೋಲಿಸ್ ಇಲಾಖೆಯು ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಆಗಬಹುದಾದ ಸಂಘರ್ಷ ಹತ್ತಿಕ್ಕಲು ಇಂದು ಮುಂಜಾಗ್ರತಾ ಕ್ರಮವಾಗಿ ಪರೇಡ್ ನಡೆಸಿತು. ನಿನ್ನೆ ಸಾಯಂಕಾಲ ಕೂಡ ಸರ್ವಧರ್ಮೀಯ ಮುಖಂಡರನ್ನು ಒಳಗೊಂಡ ಸೌಹಾರ್ದ ಸಭೆ ಕರೆದು ಇಂದು ಬೆಳಗ್ಗೆ ನಗರದ ಪ್ರಮುಖ ರಸ್ತೆಯಲ್ಲಿ ಪೋಲಿಸ್ ಪರೇಡ್ ನಡೆಸಿ ಜಿಲ್ಲೆಯಲ್ಲಿ ಶಾಂತತೆ ಯನ್ನು ಕಾಪಾಡುವಂತೆ ಮನವಿ ಮಾಡಿಕೊಂಡರು.
ಬೀದರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಹಾಗು ಡಿವೈಎಸ್ ಪಿ ಸತೀಶ್ ನೇತೃತ್ವದಲ್ಲಿ ಪರೇಡ್ ನಡೆಸಲಾಯಿತು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ