ಮೂಡಲಗಿ – ಸಮೀಪದ ನಾಗನೂರಿನ ಶ್ರೀ ಮಡ್ಡಿ ಈರಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ದಿ. ೨೫ ರಿಂದ ಅಗಷ್ಟ್ ೧೦ ರ ವರೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಸಿದ್ಧಾರೂಢರ ಮಠ ಶಿವಯೋಗಾಶ್ರಮ ಮುಧೋಳ ರನ್ನ ಬೆಳಗಲಿಯ ಪರಮಪೂಜ್ಯ ಶ್ರೀ ಸಿದ್ಧರಾಮ ಶಿವಯೋಗಿಗಳು ಈ ಪ್ರವಚನ ನಡೆಸಿಕೊಡಲಿದ್ದಾರೆ.
ಪ್ರತಿದಿನ ರಾತ್ರಿ ೭.೩೦ ರಿಂದ ೯.೦೦ ರ ವರೆಗೆ ಪ್ರವಚನ ನಡೆಯಲಿದ್ದು ಅನ್ನ ಪ್ರಸಾದ ವ್ಯವಸ್ಥೆ ಪ್ರತಿದಿನ ಇರುತ್ತದೆ ಸಕಲ ಸದ್ಬ್ಭಕ್ತರು ಪ್ರವಚನ ಆಲಿಸಿ ಪುನೀತರಾಗಬೇಕೆಂದು ಶ್ರೀ ಮಡ್ಡಿ ಈರಣ್ಣ ದೇವಸ್ಥಾನ ಕಮಿಟಿ ಮನವಿ ಮಾಡಿದೆ