ಸಿಂದಗಿ; ಕಳೆದ ೨ ವರ್ಷದ ಅವದಿಯಲ್ಲಿ ಮುಖ್ಯಮಂತ್ರಿಗಳು, ಎಲ್ಲ ಸಚಿವರು ಈ ಕ್ಷೇತ್ರದ ಅಭಿವೃದ್ದಿಗೆ ಅನುದಾನ ನೀಡಿ ಸಹಕರಿಸಿದ್ದಾರೆ ೫೬ ಸಾವಿರಕ್ಕೂ ಅಧಿಕ ಜನಸಂಖ್ಯೆವುಳ್ಳ ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರಕಾರದ ಅನುಮೋದನೆ ದೊರೆಯುವ ಭರವಸೆ ನನ್ನಲ್ಲಿದೆ ಎಂದು ಶಾಸಕ ಅಶೋಕ ಮನಗೂಳಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸಿಂದಗಿ-ಕೊಡಂಗಲ್ ಎಸ್.ಎಚ್.೧೬ ಕಿಮೀ ೦.೮೦ರಿಂದ೧.೧೦ ಕಿ.ಮೀ ಸ್ವಾಮಿ ವಿವೇಕಾನಂದ ವೃತ್ತದಿಂದ ಕನಕದಾಸ ವೃತ್ತದ ರವರೆಗೆ ರಸ್ತೆ ಅಗಲೀಕರಣ, ಸಿಸಿ ಡ್ರೇನ್, ಮಿಡಿಯನ್ ಹಾಗೂ ಬೀದಿ ದೀಪಗಳು ಅಳವಡಿಸಿ ಸುಧಾರಣೆ ಮಾಡುವ ಅಂದಾಜು ರೂ ೨೨೫.೦೦ ಲಕ್ಷಗಳ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.
ದಿ.ಎಂ.ಸಿ.ಮನಗೂಳಿ ಅವರು ಶಾಸಕರಿರುವಾಗ ಬಸವೇಶ್ವರ ಸರ್ಕಲ್ದಿಂದ ಸ್ವಾಮಿ ವಿವೇಕಾನಂದ ವೃತ್ತದವರೆಗೆ ರಸ್ತೆ ಅಗಲೀಕರಣವಾಗಿತ್ತು ಆದರೆ ಈ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿತ್ತು ಅದನ್ನು ಮತ್ತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡು ಅನುದಾನ ತಂದಿದ್ದೇವೆ. ಮತ್ತು ಶಾಂತವೀರ ೩ನೇ ಅಡ್ಡ ರಸ್ತೆಯಿಂದ ಸ್ವಾಮಿ ವಿವೇಕಾನಂದ ವೃತ್ತದ ವರೆಗೆ ಸಿಸಿ ರಸ್ತೆಗೆ ರೂ. ೨ ಕೋಟಿ, ಇಲ್ಲಿಂದ ಹೊನ್ನಳ್ಳಿ ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ ರೂ ೩೯ ಕೋಟಿ ಅನುದಾನ, ಮೇಘಾ ಮಾರ್ಕೇಟಗೆ ರೂ ೨೭ ಕೋಟಿ, ಮಿನಿ ವಿಧಾನ ಸೌಧ ಉನ್ನತಿಕರಣಕ್ಕೆ ರೂ ೫ ಕೋಟಿ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದೆ. ಪಟ್ಟಣದಲ್ಲಿ ಯುಜಿಡಿಯಿಂದ ಹಾಳಾದ ರಸ್ತೆಗಳ ಅಭಿವೃದ್ಧಿಗೆ ರೂ ೫೦ ಕೋಟಿಗಳ ನೀಡುವಂತೆ ವಿಜಯಪುರದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಡಾ. ವಿಶ್ವಪ್ರಭು ಶಿವಾಚಾರ್ಯರು, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಎಪಿಎಂಸಿ ಅಧ್ಯಕ್ಷ ಸಿದ್ದಣ್ಣ ಬಿಸನಾಳ, ಉಪಾಧ್ಯಕ್ಷ ಬಸವರಾಜ ಮಾರಲಬಾವಿ, ಲೋಕೋಪಯೋಗಿ ಇಲಾಖೆ ಎಇಇ ಅರುಣಕುಮಾರ ವಡಗೇರಿ, ಗುತ್ತಿಗೆದಾರರಾದ ಮುತ್ತು ಮುಂಡೆವಾಡಗಿ, ಶ್ರೀಕಾಂತ ಹೂಗಾರ ವೇದಿಕೆ ಮೇಲಿದ್ದರು.
ದೈಹಿಕ ನಿರ್ದೆಶಕ ರವಿ ಗೋಲಾ ನಿರೂಪಿಸಿ ವಂದಿಸಿದರು.