Homeಸುದ್ದಿಗಳುಕಂದಾಯ ವಿಭಾಗ ರದ್ದು ವಿರೋಧಿಸಿ ಪ್ರತಿಭಟನೆ

ಕಂದಾಯ ವಿಭಾಗ ರದ್ದು ವಿರೋಧಿಸಿ ಪ್ರತಿಭಟನೆ

ಬೆಳಗಾವಿ – ರಾಜ್ಯದ ನಾಲ್ಕು ಕಂದಾಯ ವಿಭಾಗಗಳಾದ ಬೆಳಗಾವಿ, ಕಲಬುರ್ಗಿ, ಮೈಸೂರು ಮತ್ತು ಬೆಂಗಳೂರಿನಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸಿ ಬೆಂಗಳೂರಿನಲ್ಲಿ ಒಂದೇ ಒಂದು ಕಂದಾಯ ಸಚಿವಾಲಯವನ್ನು ಸ್ಥಾಪಿಸುವ ರಾಜ್ಯ ಸರಕಾರದ ಚಿಂತನೆಯನ್ನು ವಿರೋಧಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪ್ರಾದೇಶಿಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.ಅತಿರಿಕ್ತ ಪ್ರಾದೇಶಿಕ ಆಯುಕ್ತರಾದ ಶ್ರೀಮತಿ ಗೀತಾ ಕೌಲಗಿ ಅವರು ಮನವಿ ಸ್ವೀಕರಿಸಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ,ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಮಹಾದೇವ ತಳವಾರ ದೀಪಕ ಗುಡಗಾನಟ್ಟಿ ಶಂಕರ ಬಾಗೇವಾಡಿ ಮೈನೋದ್ದೀನ್ ಮಕಾನದಾರ ಸಲೀಮ ಖತೀಬ ಶಿವಪ್ಪ ಶಮರಂತ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

RELATED ARTICLES

Most Popular

error: Content is protected !!
Join WhatsApp Group