ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಲ್ವೇಕಲ್ಲಾಪುರ. ತಾ.ಹಾನಗಲ್
ಕಾವ್ಯನಾಮ: ರಾಹೀಲ್
ಇವರು ಹುಟ್ಟಿದ್ದು ದಿ. 20/05/1985 ರಂದು ಬಹಳ ಧಾರ್ಮಿಕ ಭಕ್ತಿಯಲ್ಲಿ ಸದಾ ತೂಡಗಿಸಿಕೊಳ್ಳುವ ಬಡತನ ರೇಖೆಯನ್ನು ಎದುರಿಸುತ್ತಾ,ಬಂದ ಚಮನಸಾಬ್ ಮಣ್ಣೂರ ಹಾಗೂ ಬೇಗಂ ರವರ ಮಗನಾಗಿ ಸವಣೂರು ತಾಲೂಕಿನ ಹಾವೇರಿ ಜಿಲ್ಲೆಯ ಹಿರೇಮುಗದೂರ ನಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಮಾನವೀಯ ಮೌಲ್ಯಗಳನ್ನು ಮೈಗೂಸಿಕೊಂಡು ಸದಾ ಸರಳ ಸಜ್ಜನಿಕೆ ಸೃಜನಾತ್ಮಕವಾಗಿ ಬೆಳೆದು,ಪ್ರಾಥಮಿಕ ಹಂತದಿಂದಲೇ ಹಾಡು ಕಥೆ ಮತ್ತು ಆಟಗಳಲ್ಲಿ ಬಹಳಷ್ಟು ಬೆರೆತು ಮುನ್ನಡೆ ಸಾಧಿಸಿದರು.
ವಿದ್ಯಾಭ್ಯಾಸ
- ಪ್ರಾಥಮಿಕ ಶಿಕ್ಷಣ ಸ.ಪ್ರಾ ಶಾಲೆ ಹಿರೇಮುಗದೂರ. ತಾ .ಸವಣೂರು ನಲ್ಲಿ, ಅಲ್ಲಿಯೇ ಟಿ ಎಮ್ ಎ ಇ ಎಸ್ ಸಂಸ್ಥೆಯಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹೊಸರಿತ್ತಿಯಲ್ಲಿ ಪಿಯು ಶಿಕ್ಷಣ.
- ಇಲ್ಲಿ ಶ್ರೀಯುತ ಬಿ ಎಸ್ ಯಾವಗಲ್ ಶಿಕ್ಷಣಶಾಸ್ತ್ರದ ಉಪನ್ಯಾಸಕರು ಸಾಕಷ್ಟು ಬಾರಿ ಹಣ ಬಟ್ಟೆ ಇತ್ಯಾದಿ ಸಹಾಯ ಮಾಡಿದರು.
- ಹಾಗೆ ಯಾವಗಲ್ ಉಪನ್ಯಾಸಕರ ಪರಮಶಿಷ್ಯರಾಗಿ ಉನ್ನತ ಶ್ರೇಣಿಯಲ್ಲಿ ಫಲಿತಾಂಶ ಮಾಡಿ. ಮುಂದಿನ ತಮ್ಮ ಕನಸಿನ ಶಿಕ್ಷಕ ವೃತ್ತಿಯ ಡಿಎಡ್ ಪದವಿ ಪಡೆಯಲು ಮೈಸೂರಿನ ವಸಂತಮಹಲ್ ಡಯಟ್ ನಲ್ಲಿ ಶಿಕ್ಷಕ ತರಬೇತಿ ಮುಗಿಸಿದರು.
- ಸೇವೆಯಲ್ಲಿರುವಾಗ ಬಾಹ್ಯವಾಗಿ ಪದವಿ
- ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ನ್ನು ಇಂದಿರಾ ಗಾಂಧಿ ವಿಶ್ವವಿದ್ಯಾಲಯ ದೆಹಲಿ. ಇದರ ಸಂಸ್ಥೆಯಾದ ಬಸವೇಶ್ವರ ಕಾಲೇಜ ಬಾಗಲಕೋಟದಲ್ಲಿ ಪೂರೈಸಲಾಯಿತು.
ಎಮ್ಎ: ಕುವೆಂಪು ವಿಶ್ವವಿದ್ಯಾಲಯ
ಉದ್ಯೋಗ
- 2006 ರಲ್ಲಿ ಕೆ.ಎಸ್.ಆರ್.ಟಿ.ಸಿ ಹಾಸನ ಘಟಕದಲ್ಲಿ ನಿರ್ವಾಹಕ.
- 2007 ರಿಂದ 2014 ರ ವರಿಗೂ ಸ.ಹಿ.ಪ್ರಾ ಶಾಲೆ ಗುಡಿಹಾಳ ತಾ.ಸಿಂಧನೂರ ಜಿ.ರಾಯಚೂರು ಮೊದಲ ಸಹಶಿಕ್ಷಕ ಸೇವೆ.
- 2014 ರಿಂದ ಇಲ್ಲಿಯರಿಗೂ ಸ.ಹಿ.ಪ್ರಾ ಶಾಲೆ ಕಾಲ್ವೇಕಲ್ಲಾಪುರ ತಾ.ಹಾನಗಲ್ಲ .ಜಿ.ಹಾವೇರಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹವ್ಯಾಸಗಳು
ಓದು, ಕಥೆ, ಕವನ, ನಾಟಕ ರಚನೆ, ನಾಟಕ ನಿರ್ವಹಿಸುವುದು,ಅಂಕಣ ಬರೆಯುವುದು, ಚಳವಳಿ, ಸಂಘಟನೆಯಲ್ಲಿ ಭಾಗಿ, ಬೀದಿ ನಾಟಕಗಳನ್ನು ಆಡುವುದು ಇತ್ಯಾದಿ
ಪ್ರಕಟಗೊಳ್ಳಲು ಪ್ರಗತಿಯಲ್ಲಿರುವ ಹೊತ್ತಿಗೆಗಳು
- ನೆನಪಿನಂಗಳ: ಕವನ ಸಂಕಲನ (ಪ್ರಗತಿಯಲ್ಲಿದೆ)
- ಮರೆಯಲಾಗದ ದೋಣಿ ಪಯಣ ( ಕೃತಿ .ಪ್ರಗತಿಯಲ್ಲಿದೆ)
ಪ್ರಶಸ್ತಿಗಳು
- ಕರುನಾಡ ಚೇತನ (ಹುಬ್ಬಳ್ಳಿ ನವಚೇತನ)
- ಕನ್ನಡ ಕಲಾ ಚೇತನ (ಕಲಾ ಬಳಗ)
ವಿಶೇಷತೆ
- ಜನರಿಗೆ ಜಾಗೃತಿ ಮೂಡಿಸುವ ಜಾಗೃತಿ ಕವನಗಳ ರಚನೆ .ಉದಾ.ಶಾಲೆ, ಮತದಾನ, ಕೊರೋನಾ ಇತ್ಯಾದಿ..
- ಶಾಲೆಯ ಮಕ್ಕಳಿಗೆ ಕಥನ ಪ್ರಾಯೋಗಿಕ ಕಲಿಕಾ ಸಾಮಗ್ರಿಗಳ ಒಡನೆ ಬೋಧನೆ.
- ಶಿಷ್ಯರನ್ನ ತನಗಿಂತಲೂ ಎತ್ತರ ಮಟ್ಟದಲ್ಲಿ (ಉನ್ನತ ಸ್ಥಾನ) ಕಾಣುವ ಕನಸು.
- ಶಿಷ್ಯವೃಂದ ಪೋಲಿಸ್ , ಇಂಜಿನಿಯರ್ , ಎಫ ಡಿ ಎ ,ಬ್ಯಾಂಕ್ ನಲ್ಲಿ ಹೀಗೆ ಹತ್ತು ಹಲವಾರು ಹುದ್ದೆಗಳಲ್ಲಿ ಶಿಷ್ಯ ಬಳಗ ಸೇವೆ ಸಲ್ಲಿಸುತ್ತಿದ್ದಾರೆ.
- ಕಾಲ್ವೇಕಲ್ಲಾಪುರ ಶಾಲೆಯ 9 ಮಕ್ಕಳು ಸ್ವತಃ ಕವನಗಳನ್ನು ರಚಿಸಿ ಮಕ್ಕಳ ಕವಿಗೋಷ್ಠಿಯಲ್ಲಿ ವಾಚಿಸಿದ್ದಾರೆ.
- ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಿದ್ದಾರೆ.
- ಮಕ್ಕಳಿಗೆ ನಾಟಕ ಕಲಿಸಿ ಹೊಸ ಹೊಸ ಮನುಕುಲದ ಮೌಲ್ಯವುಳ್ಳ ಸಾಹಿತ್ಯ ರೂಡಿಸಿ ಮಕ್ಕಳಲ್ಲಿ ದೇಶಾಭಿಮಾನ ,ಉತ್ತಮವಾದ ಸದ್ಗುಣಗಳನ್ನು ನಾಟಕದ ಮೂಲಕ ಪರಿಕಲ್ಪನೆ ಮೂಡಿಸಿದ್ದಾರೆ.ಉದಾ.ವರದಕ್ಷಿಣೆ, ಮತದಾನ,ಅನ್ನದಾತ, ಭಾವೈಕ್ಯ, ಹಲಗಲಿ ಬೇಡರು..ಇತ್ಯಾದಿ
- ಯಾವ ಪ್ರಶಸ್ತಿಗಳಿಗೂ ಆಸೆ ಪಡೆಯದೆ ಹತ್ತು ಹಲವಾರು ಕೆಲಸ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತ, ಶಾಲೆಯಲ್ಲಿ ಶಿಕ್ಷಕ ಬಳಗದವರು ಒಡಗೂಡಿ ಇಡೀ ಜಿಲ್ಲೆಗೆ ಉತ್ತಮ ಶಾಲೆ ಎಂಬ ಹೆಗ್ಗಳಿಕೆ ತಂದಿದ್ದಾರೆ.
- ಹಲವಾರು ಕಡೆ ಘಟಕ, ತಾಲೂಕು, ಜಿಲ್ಲಾ,ರಾಜ್ಯ ಮಟ್ಟದ ಕವಿ ಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.
- ಪ್ರಧಾನ ಕಾರ್ಯದರ್ಶಿ, ಭಾ.ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾವೇರಿ.
- ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿ, ಕನ್ನಡ ಸಾಹಿತ್ಯ ಬಳಗ ಹಾವೇರಿ ಸದಸ್ಯರಾಗಿ ಸೇವೆ.
- ಹೀಗೆ ಹಲವಾರು ರೀತಿಯ ಸೃಜನಾತ್ಮಕ ಕಾರ್ಯಗಳನ್ನ ಮಾಡಿತ್ತಿದ್ದಾರೆ.
ಆಯಿಶಾ ಎಂಬ ಧರ್ಮಪತ್ನಿ ಹಾಗೂ ಸುತನಾದ ರಾಹೀಲ್ ನೊಡನೆ ಜೀವನದ ಮುಂದಿನ ದಿನಗಳನ್ನು ಕಳೆಯುತ್ತಿದ್ದಾರೆ
ಇಂಗಳಗಿ ದಾವಲಮಲೀಕ
ಸಾಹಿತಿ, ಶಿಕ್ಷಕರು, ಹತ್ತಿಮತ್ತೂರು