ಚಿತ್ರರಂಗದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶಕ್ಕೆ ಭೇರ್ಯ ರಾಮಕುಮಾರ್ ಒತ್ತಾಯ

Must Read

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಪಾರ ಪ್ರತಿಭೆಯ ಕವಿಗಳಿದ್ದು ಅವರ ಜನಮನ ಸೆಳೆಯುವ ಕವಿತೆಗಳನ್ನು ಕನ್ನಡ ಚಲನ ಚಿತ್ರಗಳಿಗೆ ಅಳವಡಿಸಿಕೊಳ್ಳಬೇಕು. ಈ ಬಗ್ಗೆ ಚಲನಚಿತ್ರ ನಿರ್ಮಾಪಕರ ಹಾಗೂ ನಿರ್ದೇಶಕರ ಗಮನ ಸೆಳೆಯಬೇಕೆಂದು ಹೆಸರಾಂತ ಗೀತ ರಚನಕಾರ ಕವಿರಾಜ್ ಅವರನ್ನು ಭೇಟಿಮಾಡಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಮನವಿ ಮಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಲೇಖಕ, ಲೇಖಕಿಯರಿದ್ದಾರೆ. ಅವರ ರಚನೆಗಳು ಸರಳವಾಗಿ ಮನಸೆಳೆಯುವಂತಿವೆ. ಆದರೆ ಇವರೆಲ್ಲರೂ ಅವಕಾಶ ವಂಚಿತರಾಗಿದ್ದಾರೆ. ಇಂತವರಿಗೆ ಚಿತ್ರರಂಗದಲ್ಲಿ ಸೂಕ್ತ ಅವಕಾಶ ಕಲ್ಪಿಸಬೇಕು ಎಂದವರು ಕವಿರಾಜ್ ಅವರನ್ನು ಒತ್ತಾಯಿಸಿದರು. ಇದೊಂದು ಅತ್ಯುತ್ತಮ ಸಲಹೆ.ಈ ಬಗ್ಗೆ ಆಲೋಚಿಸುವುದಾಗಿ ಕವಿರಾಜ್ ತಿಳಿಸಿದರು.

ಕೊಡಗಿನ ಕವಿ ಎಂ. ಡಿ. ಅಯ್ಯಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group