ಸಂಗಮ ಕಾವ್ಯ ಸ್ಪರ್ಧೆ ಫಲಿತಾಂಶ ಪ್ರಕಟ

Must Read

ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ತಾಲೂಕು ಮಟ್ಟದ ಕಾವ್ಯ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಲೇಖಕಿ ದಾನೇಶ್ವರಿ ಸಾರಂಗಮಠ(ಪ್ರಥಮ), ಇನ್ನೋರ್ವ ಲೇಖಕಿ ನಾಗರತ್ನ ಭಾವಿಕಟ್ಟಿ(ದ್ವಿತೀಯ) ಮತ್ತು ಯುವ ಲೇಖಕ ಜಗದೀಶ ಹಾದಿಮನಿ(ತೃತೀಯ) ಬಹುಮಾನ ಪಡೆದಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಲಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಕುಂದ ಅಮೀನಗಡ, ಡಾ.ಲಿಂಗರಾಜ ಗಗ್ಗರಿ, ನಿಂಗಮ್ಮ ಭಾವಿಕಟ್ಟಿ, ಬಸವರಾಜ ಕನ್ನೂರ ಮತ್ತು ಶ್ರೇಯಾಂಸ ಕೋಲಾರ ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಸ್ಪರ್ಧೆಗೆ ೩೧ ಕವಿತೆಗಳು ಬಂದಿದ್ದವು.
ಅಂಕೋಲಾದ ಕವಿ ಶಿಕ್ಷಕ ಕೆ.ಬಿ.ವೀರಲಿಂಗನಗೌಡ್ರ, ಅಮೀನಗಡದ ಕವಿ, ಶಿಕ್ಷಕ ಮ‌ಹಾದೇವ ಬಸರಕೋಡ ಮತ್ತು ಹುನಗುಂದ ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ವೀರಭದ್ರಯ್ಯ ಶಶಿಮಠ ತೀರ್ಪುಗಾರರಾಗಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group