ಸಂಗಮ ಕಾವ್ಯ ಸ್ಪರ್ಧೆ ಫಲಿತಾಂಶ ಪ್ರಕಟ

Must Read

ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ತಾಲೂಕು ಮಟ್ಟದ ಕಾವ್ಯ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಲೇಖಕಿ ದಾನೇಶ್ವರಿ ಸಾರಂಗಮಠ(ಪ್ರಥಮ), ಇನ್ನೋರ್ವ ಲೇಖಕಿ ನಾಗರತ್ನ ಭಾವಿಕಟ್ಟಿ(ದ್ವಿತೀಯ) ಮತ್ತು ಯುವ ಲೇಖಕ ಜಗದೀಶ ಹಾದಿಮನಿ(ತೃತೀಯ) ಬಹುಮಾನ ಪಡೆದಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಲಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಕುಂದ ಅಮೀನಗಡ, ಡಾ.ಲಿಂಗರಾಜ ಗಗ್ಗರಿ, ನಿಂಗಮ್ಮ ಭಾವಿಕಟ್ಟಿ, ಬಸವರಾಜ ಕನ್ನೂರ ಮತ್ತು ಶ್ರೇಯಾಂಸ ಕೋಲಾರ ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಸ್ಪರ್ಧೆಗೆ ೩೧ ಕವಿತೆಗಳು ಬಂದಿದ್ದವು.
ಅಂಕೋಲಾದ ಕವಿ ಶಿಕ್ಷಕ ಕೆ.ಬಿ.ವೀರಲಿಂಗನಗೌಡ್ರ, ಅಮೀನಗಡದ ಕವಿ, ಶಿಕ್ಷಕ ಮ‌ಹಾದೇವ ಬಸರಕೋಡ ಮತ್ತು ಹುನಗುಂದ ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ವೀರಭದ್ರಯ್ಯ ಶಶಿಮಠ ತೀರ್ಪುಗಾರರಾಗಿದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group